Sunday, May 24, 2026
Sunday, May 24, 2026

ಕತ್ತೆ ನಿನಗೆ ಸಾಟಿಯಿಲ್ಲ

Date:

ಕತ್ತೆ ಕಾಯೋಕೆ ಹೋಗ್ “ಅಂತ ಬೈಯೋದನ್ನ ನಾವು ಕೇಳಿದೀವಿ. ಹಾಗಂತ ಯಾರೂ ತಕ್ಷಣ ಅದನ್ನ ಆಜ್ಞೆ ಅಂತ ಪಾಲಿಸೋದಿಲ್ಲ!. ಬದಲಾಗಿ ಕೋಪದಿಂದ ಎರಡೇಟು ಬಿಗಿದೇ ಬರೋದು. ಪಾಪ ! ಕತ್ತೇದು ತಪ್ಪಲ್ಲ..ಅದರ ಜನ್ಮದ ಬಗ್ಗೆಯೂ ಅವಹೇಳನವಲ್ಲ.

ಈಗ ಅದಕ್ಕೆ ಮನುಷ್ಯರಿಗಿಂತ ಬೆಲೆ ಬರುವ ಕಾಲ ಸನ್ನಿಹಿತವಾಗಿದೆ. ಹಾಗಂತ ಹೇಳಿದ್ರೆ ನಿಮಗೆ ಅಚ್ಚರಿಯಾಗತ್ತೆ. ಕೇರಳದಲ್ಲಿ ಕತ್ತೆ ಸಾಕಾಣಿಕೆ ನಡೆದ ಬಗ್ಗೆ ನಿಮ್ಮಲ್ಲಿ ಬಹಳ ಮಂದಿ ಕೇಳಿರಬಹುದು. ಈಗ ಕರ್ನಾಟಕದಲ್ಲಿ ಸುದ್ದಿಯಾಗಿದೆ. ಮಂಗಳೂರಿನ ಬಳಿಯ ಶ್ರೀನಿವಾಸ ಗೌಡ ಎನ್ನುವವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಅವರು ಪದವೀಧರರು. ಕತ್ತೆ ಸಾಕೋಕೆ ಮುಂಚೆ ಸಾಕಷ್ಟು ಯೋಚನೆ ಮತ್ತು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ವ್ಯವಹಾರ ಅಥವಾ ಉದ್ದಿಮೆ ನಡೆಸೋಕೆ ಮುಂಚೆ ಒಂದು ಸರ್ವೆ ಅಂತ ಮಾಡ್ತಾರೆ. ಅವರದ್ದು ಅದೇ ವಿಚಿತ್ರ ಹಾದಿ.!

ಈಗ ಕತ್ತೆ ಹಾಲಿಗೆ ಮಾರ್ಕೆಟ್ ಇದೆಯ? ನೋಡೋಣ ಅನ್ನಿಸಿತು. ಊರೂರು ಸುತ್ತಾಡಿದರು. ಅವರಿವರನ್ನ ವಿಚಾರಿಸಿದರು. ಕೊನೆಗೆ ಸತ್ಯ ಸಂಗತಿ ಹೊರಬಿತ್ತು. ಸೌಂದರ್ಯ ವರ್ಧಕಗಳಿಗೆ ಕತ್ತೆ ಹಾಲನ್ನ ತಯಾರಕರು ಬಳಸುತ್ತಾರೆ!. ಅವರಿಗೆ ಕತ್ತೆ ಹಾಲು ಕರೆದು ಮಾರಿದರೆ ಸಾಕು!. ಅದರ ರೇಟು.30 ml ಗೆ ₹ 150.ಲೆಕ್ಕ ಹಾಕಿದರು. ಕಂಪನೆಗಳಿಗೆ ವರ್ಷಕ್ಕೆ ಎಷ್ಟು ಲೀಟರ್ ಕತ್ತೆಯ ಹಾಲಿನ ಅಗತ್ಯವಿದೆ. ಅದನ್ನ ನಿಭಾಯಿಸಲು ಎಷ್ಟು ಕತ್ತೆಗಳನ್ನ ಸಾಕಬೇಕು.ಅವುಗಳ ನಿರ್ವಹಣೆ ,ಹಾಲು ಸಂಗ್ರಹ, ಪ್ಯಾಕಿಂಗ್ ಇತ್ಯಾದಿ ಲೆಕ್ಕಾಚಾರ ಮಾಡಿದರು.

ಇದರ ಜೊತೆಯಲ್ಲಿ ಶ್ರೀನಿವಾಸ್ ಮೊಲ ಮತ್ತು ಕಡಕ್ ನಾಥ್ ಕೋಳಿಗಳನ್ನು ಸಹ ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀನಿವಾಸ್ ಅವರ ಫಾರ್ಮ್ ನಲ್ಲಿ 20 ಕತ್ತೆಗಳಿವೆ ಎನ್ನುವುದು ಇನ್ನೂ ಒಂದು ಗಮನಾರ್ಹ ಸಂಗತಿ.

ಅವರೀಗ ಸೌಂದರ್ಯವರ್ಧಕಗಳ ತಯಾರಿಕಾ ಕಂಪನಿಗಳಿಂದ ₹174 ಲಕ್ಷದ ಆರ್ಡರ್ ಪಡೆದಿದ್ದಾರಂತೆ.!
ಈಗ ಹೇಳಿ!, ದನ ಕಾಯೋವ್ನೆ.! ಕತ್ತೆ ಮಗನೆ, ಕತ್ತೆ ನನ್ ಮಗ್ನೆ ..ಕತ್ತೆ ಕಾಯೋಕೆ ಹೋಗ್ ಅಂತ ಬೈಯುವವರಿಗೆ ಆ ಬೈಗಳೆಲ್ಲಾ out of date ಆಗಿವೆ ಅಂತ ತಿಳಿಯ ಹೇಳಬೇಕಲ್ವೆ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...