Monday, May 19, 2025
Monday, May 19, 2025

ಜೂನ್ 9 ರಿಂದ 11ರವರೆಗೆ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ-ಯೆಲ್ಲೋ ಅಲರ್ಟ್ ಘೋಷಣೆ

Date:

ಪಶ್ಚಿಮ ಮಾರುತಗಳ ಪರಿಣಾಮದಿಂದಾಗಿ ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಅದರಲ್ಲೂ ಜೂನ್ 11 ರವರೆಗೆ ಕರ್ನಾಟಕ ಗಡಿ ಮತ್ತು ಕೇರಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಚದುರಿದ ತುಂತುರು ಮಳೆ ಸುರಿಯಲಿದೆ. ಆದರೆ ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜೂನ್ 9 ರಿಂದ 11ರ ವರೆಗೆ ಕರ್ನಾಟಕ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ತಗ್ಗು ಪ್ರದೇಶದಲ್ಲಿನ ಜನರು ಎಚ್ಚರದಿಂದ ಇರುವಂತೆಯೂ ಸೂಚಿಸಲಾಗಿದೆ. ಮುಂಗಾರು ಆರಂಭದಲ್ಲಿ ಸಾಮಾನ್ಯವಾಗಿ ಹಲವು ಭಾಗಗಳಲ್ಲಿ ಸರಾಸರಿ 6 ರಿಂದ 8 ಸೆಂ.ಮೀ ಮಳೆಯಾಗುತ್ತದೆ. ಆದರೆ ಈ ಬಾರಿ ಕಳೆದ ಶುಕ್ರವಾರದಂದು ಅಲಪ್ಪುಳ ಜಿಲ್ಲೆಯ ಮಾನ್‌ಕೊಂಪುನಲ್ಲಿ ಗರಿಷ್ಠ 5 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮಳೆ ಕೆಲವು ದಿನಗಳಿಂದಲೂ ಬಿಡುವು ಪಡೆದಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಉತ್ತಮ ಮಳೆ ಸುರಿದಿದೆ. ಇದೀಗ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕೇರಳ ಹಾಗೂ ಕರ್ನಾಟಕಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಜೂನ್ 2022 ರ ಮೊದಲ ಆರು ದಿನಗಳಲ್ಲಿ, ಕೇರಳವು ಅದರ ಆರಂಭಿಕ ವಾರದ ಸರಾಸರಿ 120.6 ಮಿಮೀಗೆ ಹೋಲಿಸಿದರೆ 62.8 ಮಿಮೀ ಮಳೆಯನ್ನು 48% ಮಳೆ ಕೊರತೆ ದಾಖಲಾಗಿದೆ. ತಮಿಳುನಾಡು (17.9 ಮಿಮೀ) 21% ‘ಹೆಚ್ಚುವರಿ’ ಮಳೆ ಸುರಿದಿದೆ. ಆದರೆ ಕರ್ನಾಟಕ (34.6 ಮಿಮೀ) ಮತ್ತು ಆಂಧ್ರ (19.2 ಮಿಮೀ) ಇದುವರೆಗೆ ಮಳೆ ದಾಖಲಾಗಿದೆ. ಆದರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Guarantee scheme ಜನ ಸಾಮಾನ್ಯರ ಬದುಕಿಗೆ ಗ್ಯಾರಂಟಿ ಯೋಜನೆಗಳು ಬೆಳಕಾಗಿವೆ

Guarantee scheme ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಾಡಿನ...

Klive Special Article ಭಯೋತ್ಪಾದನೆ‌ ಜಾಗತಿಕ ಜಾಗೃತಿಗೆಸರ್ವಸಮ್ಮತ ಸರ್ವಪಕ್ಷ‌ ನಿಯೋಗ.

Klive Special Article ಪೆಹಲ್ಗಾಂ ದುರಂತದ ನಂತರ ನಡೆದ ಬೆಳವಣಿಗೆಗಳಲ್ಲಿಮೂರು ಸಂಗತಿಗಳು ಸುದ್ದಿಮನೆಯನ್ನ...

Rajesh Keelambi “ಶಾಖಾಹಾರಿ” ನಿರ್ಮಾಪಕ ರಾಜೇಶ್ ಕೀಳಂಬಿ‌ ಅವರಿಗೆಡಾ.ಪುನೀತ್ ರಾಜ್ ಕುಮಾರ್ ಚೊಚ್ಚಲ ನಿರ್ಮಾಪಕ  ಪ್ರಶಸ್ತಿ

Rajesh Keelambi ಶಾಖಾಹಾರಿ ಚಿತ್ರದ ನಿರ್ಮಾಪಕಕೀಳಂಬಿ‌ ಮೀಡಿಯಾ ಲ್ಯಾಬ್ ಸಂಸ್ಥೆಯ ಎಂ.ಡಿ....

Shimog News ಹಿರಿಯೂರು ಕೃಷ್ಣಮೂರ್ತಿ ಸ್ಮರಣೀಯ ವ್ಯಕ್ತಿ,- ದತ್ತಾತ್ರೇಯ ಹೊಸಬಾಳೆ

Shimog News ತಾ.17-5-25 ರ ಶನಿವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ...