Saturday, April 26, 2025
Saturday, April 26, 2025

150 ವರ್ಷಗಳಲ್ಲಿ ಭೂಮಿಯನ್ನ ಶಕ್ತಿಮೀರಿ ಹಾಳುಮಾಡಿದ್ದೇವೆ- ನಾಗೇಶ್ ಹಗ್ಗಡೆ

Date:

ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಇದೇ ವೇಗದಲ್ಲಿ ಸಾಗಿದರೆ ಉತ್ತರ ಕರ್ನಾಟಕ ದೇಶದ ಮತ್ತೊಂದು ದೊಡ್ಡ ಮರುಭೂಮಿ ಆಗಲಿದೆ.
ಇನ್ನಾದರೂ ನಮ್ಮ ಗಮನವನ್ನು ಭೂಮಿಯ ಕಡೆ ಹರಿಸಬೇಕಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಸಿದರು.

ಚಿತ್ರದುರ್ಗದ ಕ್ರೀಡಾ ಭವನದಲ್ಲಿ ಉಳುಮೆ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಬತ್ತುತ್ತಿವೆ. ಬೃಹತ್‌ ಅರಣ್ಯಗಳಲ್ಲಿ ಊಹೆಗೂ ನಿಲುಕದ ರೀತಿ ಬೆಂಕಿ ಕಾಣಿಸಿಕೊಂಡು ಕಾಡು ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

‘ಮನುಷ್ಯ ವಿಕಾಸದ ಬಳಿಕ ಕೇವಲ 150 ವರ್ಷಗಳಲ್ಲಿ ಭೂಮಿಯನ್ನು ಶಕ್ತಿ ಮೀರಿ ಹಾಳು ಮಾಡಿದ್ದೇವೆ. ಈ ಎಲ್ಲದರ ಪರಿಣಾಮ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ‘ಥಾರ್’ ಮರುಭೂಮಿಯಂತೆ ಉತ್ತರ ಕರ್ನಾಟಕ ಭಾಗವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಹೆಸರಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆಯಿಂದ ಸಮುದ್ರಕ್ಕೆ ಸೇರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪ್ರಾಣಿ, ಪಕ್ಷಿ, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಈ ಎಲ್ಲದರಿಂದ ಶೇ 35ರಷ್ಟು ಜನರಿಗೆ ಪ್ರಯೋಜನವಾಗಿದ್ದು, 65ರಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯಿಂದ ಹೊಸ ಪ್ರಳಯ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದರು.

ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಗುರುರಾಜ್‌ ಎಸ್‌. ದಾವಣಗೆರೆ ಮಾತನಾಡಿ,

ಸೈನಿಕರಂತೆ ರೈತರ ಸೇವೆಯನ್ನು ‘ರಾಷ್ಟ್ರೀಯ ಸೇವೆ’ ಎಂದು ಸರ್ಕಾರ ಘೋಷಿಸಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೃಷಿ ವಲಯಕ್ಕೆ ಮೀಸಲಿಡಬೇಕು. ಆಗ ಮಾತ್ರ ಆಹಾರದ ಸಮಸ್ಯೆ ನೀಗಿ ರೈತರ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.

‘ಒಂದು ಕಾಲದಲ್ಲಿ ಸಿರಿಧಾನ್ಯಗಳ ಬೀಡಾಗಿದ್ದ ಚಿತ್ರದುರ್ಗದಲ್ಲಿ ಈಗ ಸಿರಿಧಾನ್ಯ ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಸಾಗಿದರೆ 20 ವರ್ಷದಲ್ಲಿ ‘ಕೃಷಿ’ ಪದವನ್ನು ನಾವೆಲ್ಲ ಮರೆಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸರ್ಕಾರಗಳು ಕೃಷಿ ನಾಶ ಮಾಡಲು ಕಾನೂನು ರೂಪಿಸುತ್ತಿವೆ. ಈಗಾಗಲೇ 40 ಕೋಟಿ ಗ್ರಾಮೀಣ ಜನರು ನಗರ ಸೇರಿದ್ದಾರೆ. ಅವರ ಮಕ್ಕಳಿಗೆ ಕೃಷಿಯನ್ನು ಕಲಿಸದೆ ಕೈಗಾರಿಕೆಗಳಿಗೆ ನೂಕುತ್ತಿದ್ದಾರೆ ಎಂದರು.

ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕೃಷಿ ತಜ್ಞ ಟಿ.ಜಿ.ಎಸ್‌. ಅವಿನಾಶ್‌, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಉಳುಮೆ ಸಂಘಟನೆಯ ಉಜನಿಗೌಡ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...