Wednesday, March 19, 2025
Wednesday, March 19, 2025

ನಮ್ಮ ನ್ಯಾಯ ವ್ಯವಸ್ಥೆ ನಮ್ಮ ಹೆಮ್ಮೆ

Date:

ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗ ಒಂದಕ್ಕೊಂದು ಹೆಣೆದುಕೊಂಡಿರಬೇಕು.ಯಾವುದೇ
ಕೋನದಿಂದಲೂ ಅರಾಜಕತೆ, ಅಸ್ಥಿರತೆ ಮತ್ತು ಅನ್ಯಾಯದ ಹವೆ
ಬೀಸದಂತೆ ನೋಡಿಕೊಳ್ಳಲಾಗುತ್ತಿದೆ. ಈ ಮೂರೂ ಮುಪ್ಪುರಿಗೊಂಡಿರುವ
ಸಂವಿಧಾನವೆಂಬ ಭದ್ರ ‌ಬಲದಿಂದ
ಸಂರಕ್ಷಣೆಮಾಡಲಾಗುತ್ತಿದೆ.

ಈ ಮಾತುಗಳಿಗೆ ಹಿನ್ನೆಲೆಯಾಗಿ
ನಮ್ಮ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರ ಮಾತುಗಳನ್ನ ಮೆಲುಕು ಹಾಕಬೇಕಿದೆ.
” ಜನರ ಘನತೆ ಮತ್ತು ಹಕ್ಕುಗಳನ್ನ
ಗುರುತಿಸಿ ರಕ್ಷಿಸಿದಾಗ ಮಾತ್ರ ಶಾಂತಿ ನೆಲೆಸುತ್ತದೆ.ಭಾರತದಲ್ಲಿ ಹಕ್ಕುಗಳ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಾಂವಿಧಾನಿಕ ಕರ್ತವ್ಯವನ್ನು ನ್ಯಾಯಾಲಯಗಳು ಹೊಂದಿವೆ”.

ಘಾಸಿಕೊಂಡ ಅಥವಾ ವಂಚಿನಾದ ವ್ಯಕ್ತಿ ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಾನೆ.ಆದರೆ ಅಲ್ಲಿ ಶೀಘ್ರ ನ್ಯಾಯದಾನವಾಗದೇ
ಎಳೆದಾಡಿದರೆ ನ್ಯಾಯಾಂಗದಲ್ಲಿನ
ಆಸಕ್ತಿ ವಿಚಲಿತವಾಗುತ್ತದೆ.

ಈ ಮನೋಹಂತವನ್ನ ನಮ್ಮ ನ್ಯಾಯಮೂರ್ತಿಗಳು ಬಹಳ ಸರಳವಾಗಿ ಹೇಳಿದ್ದಾರೆ.

“ನ್ಯಾಯದ ನಿರಾಕರಣೆ ಅಂತಿಮವಾಗಿ ಅರಾಜಕತೆಗೆ ಕಾರಣವಾಗುತ್ತದೆ.
ಶೀಘ್ರದಲ್ಲೇ ನ್ಯಾಯಾಂಗದ ಸಂಸ್ಥೆಯು ಅಸ್ಥಿರಗೊಳ್ಳುತ್ತದೆ.
ಏಕೆಂದರೆ ಜನರು ಕಾನೂನುಬಾಹಿರ
ಕಾರ್ಯವಿಧಾನಗಳನ್ನ ಹುಡುಕುತ್ತಾರೆ.”

ಈಗ ಬಹಳಷ್ಟು ಹೀಗೇ ಘಟಿಸುತ್ತಿದೆ.
ನ್ಯಾಯದ ಪರವಾಗಿ ಸಾಕ್ಷಿಗಳು ದುರ್ಬಲವಾಗುವಂತೆ ಮಾಡುವ ಹಿತಾಸಕ್ತಿಗಳು. ಸಾಮಾಜಿಕ ಬದುಕಿನಲ್ಲಿ ನ್ಯಾಯ ನಿರೀಕ್ಷಿತರಿಗೆ
ತೋಳ್ಬಲ,ಹಣಬಲ,ಜನಬಲಗಳಿಂದ
ಶೋಷಿಸುವುದು.ಕೊನೆಗೆ ವಿಚಾರಣೆಯ ವಕೀಲರಿಗೆ ಫೀಸು
ಕಟ್ಟದಂತಹ ಪರಿಸ್ಥಿತಿಗೆ ತಳ್ಳುವುದು.
ಇವೆಲ್ಲ ನಾವು ಸಿನಿಮಾಗಳಲ್ಲಿ ನೋಡಿದ್ದೇವೆ.ಅದೂ ನಮ್ಮ ಜೀವನದಲ್ಲಿ ನಡೆದ ಘಟನೆಗಳ ಅಣಕೂ ಆಗಿದೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ.

ಎಂತೆಂತಹ ಕೇಸುಗಳು ರಾಜಕೀಯ
ಆಡಳಿತದಲ್ಲಿ ದಾರಿತಪ್ಪಿವೆ ಎಂಬುದನ್ನ ನ್ಯಾಯಾಂಗವೇ ಈಗ ಎಚ್ಚರಿಸಬೇಕಿದೆ.ಏಕೆಂದರೆ ಬಹಳಷ್ಟು
ಪ್ರಕರಣಗಳ ಬಗ್ಗೆ ನ್ಯಾಯಾಂಗವೇ
ಸರ್ಕಾರವನ್ನ ತಿವಿದು ಎಚ್ಚರಿಸಬೇಕಾಗುವಂತಹ ವಿದ್ಯಮಾನವಿದೆ.
ಪತ್ರಿಕೆಗಳಿಲ್ಲದ ಸರ್ಕಾರ ಬೇಕೋ
ಪತ್ರಿಕೆಯಿರುವ ಸರ್ಕಾರ ಬೇಕೋ
ಎಂಬ ಪ್ರಶ್ನೆ ಹಳತೆ.ಆದರೆ ಈಗ
ಪತ್ರಿಕಾರಂಗ ಅಥವಾ ಮಾಧ್ಯಮಗಳು ಬಹುಪಾಲು ಓಲೈಕೆಯ ಕ್ಯಾನ್ಸರ್ ನಿಂದ ನರಳಾಡುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಯಾಮಕ್ಕೆ ಈ ಸ್ಥಿತಿ ಒದಗಿದೆ. ನ್ಯಾಯಾಂಗ ಮಾತ್ರ ಯಾವುದರ ಸೋಂಕಿಲ್ಲ. ಸಾಮಾನ್ಯ ಜನರ ಬದುಕು ದುರ್ಭರವಾಗಲು
‌ಬಿಡದೇ ಮೂಲಭೂತ ಹಕ್ಕುಗಳ ಬಗ್ಗೆ ಧ್ವನಿ ಸೇರಿಸಿ ಶ್ರೀಸಾಮಾನ್ಯನಿಗೆ
ಆಮ್ಲಜನಕ ನೀಡುತ್ತಿದೆ.
ನ್ಯಾಯಾಂಗ ವಿಲ್ಲದಂತಹ ಸರ್ಕಾರದ ಬಗ್ಗೆ ನಾವು ಕಲ್ಪನೆ ಕೂಡ ಮಾಡಿಕೊಳ್ಳಲು ಅಶಕ್ತರು.
ನಮ್ಮ ಮುಖ್ಯ ನ್ಯಾಯಮೂರ್ತಿ ಶ್ರೀ ರಮಣ ಅವರು ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿ
ಹೈಕೋರ್ಟ್ ನ ಹೊಸ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿ ಹೇಳಿದ
ಈ ಮಾತು ಸರ್ವಕಾಲಕ್ಕೂ ಸಲ್ಲುವಂಥದ್ದಾಗಿದೆ.

ವಕೀಲರು ಮತ್ತು ನ್ಯಾಯಾಧೀಶರು
ಸಾಮಾನ್ಯವಾಗಿ ಹೆಚ್ವು ಮಾನಸಿಕ ಒತ್ತಡದಲ್ಲಿರುವ ದಾವೆದಾರರಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಒತ್ತಾಯಿಸಿದ್ದಾರೆ.

ಈ ಮಾತುಗಳು ಆ ಕ್ಷೇತ್ರದಲ್ಲಿರುವವರು ಮತ್ತೊಮ್ಮೆ
ಅವಲೋಕನಕ್ಕೆತೊಡಗುವಂತೆ ಮಾಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...