Wednesday, July 8, 2026
Wednesday, July 8, 2026

ಪುಟಿನ್ ಅನಾರೋಗ್ಯ: ರಷ್ಯದಲ್ಲಿ ಆಂತರಿಕ ದಂಗೆ?-ಜ.ಬುಡಾನೊವ್

Date:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಕಾನ್ಸರ್​ ಮತ್ತು ಇನ್ನಿತರ ಗಂಭೀರ ಕಾಯಿಲೆಗಳು ಇವೆ ಎನ್ನಲಾಗಿದೆ.

ರಷ್ಯಾದಲ್ಲಿ ದಂಗೆ ರೂಪುಗೊಳ್ಳುತ್ತಿದ್ದು, ಅವರ ಅಧಿಕಾರದ ಅವಸಾನಕ್ಕೆ ಈ ಯುದ್ಧವೇ ಕಾರಣ ಆಗಲಿದೆ ಯೂಕ್ರೇನ್​ ಆರೋಪಿಸಿದೆ.
ರಷ್ಯಾದಲ್ಲಿ ಜನರು ದಂಗೆಯನ್ನು ತಡೆಯಲು ಯಾರಿದಂಲೂ ಸಾಧ್ಯವಾಗುವುದಿಲ್ಲ. ಇದಕ್ಕೆ ಪುತಿನ್​ ಬಲಿಪಶು ಆಗುವುದು ಮತ್ತು ರಷ್ಯಾ ಪತನ ನಿಶ್ಚಿತ ಎಂದು ಯೂಕ್ರೇನ್​ ಸೇನೆಯ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಮೇಜರ್​ ಜನರಲ್​ ಕಿರಿಲೋ ಬುಡಾ-ನೋವ್​ ಹೇಳಿದ್ದಾರೆ.

ಈ ಯುದ್ಧವು ಆಗಸ್ಟ್​ ಎರಡನೇ ವಾರದಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಸಕ್ರಿಯ ಸಮರ ಕೊನೆಯಾಗಲಿದೆ. ಡಾನ್​ಬಾಸ್​, ಕ್ರಿಮಿಯಾ ಸೇರಿ ನಮ್ಮೆಲ್ಲ ಪ್ರದೇಶಗಳ ಮೇಲೆ ಪಾರಮ್ಯ ಸಾಧಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡೊನೆಟ್​ಸ್ಕ್​ ಪ್ರಾಂತ್ಯದ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆಯ ಮಾರ್ಗವನ್ನು ನಾಶ ಮಾಡಲು ಮಾರ್ಟರ್​ ದಾಳಿಯನ್ನು ರಷ್ಯಾ ಆರಂಭಿಸಿದೆ ಎಂದು ತಿಳಿಸಿದೆ.

ಖಾರ್ಕಿವ್​ನಿಂದ ಹಿಂದೆ ಸರಿದ ರಷ್ಯಾ ಪಡೆ
ಯೂಕ್ರೇನ್​ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್​ ಮೇಲೆ ಒಂದು ವಾರ ಬಾಂಬ್​ ಹಾಕಿ, ಅದನ್ನು ಸುತ್ತುವರಿದಿದ್ದ ರಷ್ಯಾ ಸೇನೆ ಈಗ ಹಿಂದೆ ಸರಿಯುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...