Wednesday, July 16, 2025
Wednesday, July 16, 2025

ಶಿವಮೊಗ್ಗ ಜಿಲ್ಲಾ ತೃತೀಯ ಜಾನಪದ ಸಮ್ಮೇಳನ

Date:

ಭದ್ರಾವತಿ ತಾಲ್ಲೂಕು ಗೋಣಿಬೀಡು ಗ್ರಾಮದಲ್ಲಿ ಸಂಭ್ರಮದ ಜಾನಪದ ಕಲರವ. ಕರ್ನಾಟಕ ಜಾನಪದ ಪರಿಷತ್ತು ಮತ್ತು ಶ್ರೀ ಶೀಲಸಂಪಾದನಾ ಮಠದ ಸಹಯೋಗದಲ್ಲಿ ಊರವರ ಸಹಕಾರದಿಂದ ಶಿವಮೊಗ್ಗ ಜಿಲ್ಲಾ ಮೂರನೇ ಜಾನಪದ ಸಮ್ಮೇಳನ ಉತ್ಸಾಹ, ಸಡಗರ, ಸಂಭ್ರಮದಿಂದ ನಡೆಯಿತು.

ದೂರದೂರುಗಳಿಂದ ಬಂದ ವಿವಿಧ ಪ್ರಕಾರದ ಜನಪದ ಕಲಾತಂಡಗಳು ತಮ್ನ ಉಡುಗೆ ತೊಡುಗೆಗಳ ಮೂಲಕ ರಂಗು ತಂದರೆ, ಊರವರು ತಳಿರು ತೋರಣ ಕಟ್ಟಿ ಊರನ್ನು ಶೃಂಗಾರ ಮಾಡಿದ್ದರು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆ ಚಂದಗಾಣಿಸಿದರು.

ಊರಿನ ಯುವ ರೈತ ಮುಖಂಡರು ಶೃಂಗರಿಸಿದ ಎತ್ತಿನ ಗಾಡಿಗಳಲ್ಲಿ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದರು. ಸಾರೋಟ್ ವಾಹನದಲ್ಲಿ ಬಸವೇಶ್ವರರ ಪುತ್ಥಳಿ , ವಿವಿಧ ಟ್ಯ್ರಾಕ್ಟರ್ ಗಳಲ್ಲಿ ಸ್ಥಬ್ದಚಿತ್ರಗಳು, ತೆರೆದ ವಾಹನದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳು, ಸಮ್ಮೇಳನ ಅಧ್ಯಕ್ಷ ಜಿ.ಸಿ. ಮಂಜಪ್ಪ, ಹಿಂದಿನ ಸಮ್ಮೇಳನದ ಅಧ್ಯಕ್ಷ ಡೊಳ್ಲಿನ ಹುಚ್ಚಪ್ಪ ಇದ್ದರು. ಬಿಸಿಲಿನ ಧಗೆ ಹೆಚ್ಚಾದಂತೆ ಹಳ್ಳಿಗರು ಮೆರವಣಿಗೆಯಲ್ಲಿದ್ದ ಸಾವಿರಾರು ಜನರಿಗೆ ನೀರು, ಬೆಲ್ಲ, ಪಾನಕ, ಟೀ ಕೊಟ್ಟು ಹುರಿದುಂಬಿಸಿದರು.

ಜಾತ್ಯತೀತ ಜನತಾದಳ ಜಿಲ್ಲಾ ಅಧ್ಯಕ್ಷರಾದ ಎಂ. ಶ್ರೀಕಾಂತ್, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ‌. ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಹಿರಿಯೂರು ಹೋಬಳಿ ಅಧ್ಯಕ್ಷರಾದ ಗೊಂದಿ ಜಯರಾಮ, ಗ್ರಾ. ಪಂ. ಅಧ್ಯಕ್ಷರಾದ ಸುಬ್ರಮಣಿ ಜಿ. ಬಿ., ಎಂ. ರಮೇಶ್, ಯಶೋಧಮ್ಮ, ಸಿದ್ದೋಜಿರಾವ್, ಭಾರತಿ ರಾಮಕೃಷ್ಣ, ಗ್ರಾ. ಪಂ. ಸದಸ್ಯರು, ವಿವಿಧ ತಾಲ್ಲೂಕು ಕಜಾಪ, ಕಸಾಪ, ಕಸಾಸಾಂ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಪೂಜ್ಯ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಭದ್ರಾವತಿ ಶಾಸಕರಾದ ಬಿ. ಕೆ. ಸಂಗಮೇಶ್ವರ, ಎಂ. ಶ್ರೀಕಾಂತ್, ಜೆ.ಸಿ.ಮಂಜಪ್ಪ, ಡೊಳ್ಳಿನ ಹುಚ್ಚಪ್ಪ, ಮೊದಲಾದವರು ಭಾಗವಹಿಸಿದ್ದರು ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಹೆಚ್. ಸಿ. ರಮೇಶ್, ಹಿಂದಿನ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಗಿದ್ದ ಮನೋಜ್ ಜನ್ನೇಹಕ್ಲು, ಸತ್ಯನಾರಾಯಣ ಸಿರುವಂತೆ ಅವರನ್ನು ಅಭಿನಂದಿಸಲಾಯಿತು. ಎಸ್. ದಯಾಶಂಕರ್ ಆಶಯದ ಮಾತುಗಳನ್ನಾಡಿದರು.

ಉಪನ್ಯಾಸಕ ಡಾ. ಚನ್ನೇಶ್ ಹೊನ್ನಾಳಿ ಉಪನ್ಯಾಸ ನೀಡಿದರು. ಮಂಗೋಟೆ ರುದ್ರೇಶ್, ಮಧುಕರ್, ಟಿ. ಜಿ. ಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಜನಪದ ಸಿರಿ ಪ್ರಶಸ್ತಿ, ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಮಾಡಲಾಯಿತು. ಸ್ನೇಹಜೀವಿ ಉಮೇಶ್ ಅವರು ಪೂಜ್ಯರು, ಅತಿಥಿಗಳ ಸಮ್ಮುಖದಲ್ಲಿ ಎಲ್ಲರನ್ನೂ ಸನ್ಮಾನಿಸಿದರು. ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ಡಿ. ಮಂಜುನಾಥ, ಡಾ. ಮೋಹನ್ ಚಂದ್ರಗುತ್ತಿ, ಬಿ. ಚಂದ್ರೇಗೌಡರು, ಮಮತಾ ಶಿವಣ್ಣ, ಕೃಷ್ಣಮೂರ್ತಿ ಹಿಳ್ಳೋಡಿ, ಮಹಾದೇವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅನ್ನಪೂರ್ಣ ಸತೀಶ್ ಸ್ವಾಗತಿಸಿದರು.

ತಾ. ಕಜಾಪ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಕೋಶಾಧ್ಯಕ್ಷರಾದ ಲತಾ ಎಲ್. ಕೆ., ಶ್ರೀಧರೇಶ್, ಹೇಮಾವತಿ ವಿಶ್ವನಾಥ, ಭಾರತಿ ಎಸ್.ಬಿ., ಭಾಗ್ಯಮ್ಮ ಮಂಜುನಾಥ ಸೇರಿದಂತೆ ಹಲವರು ವೇದಿಕೆ ನಿರ್ವಹಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...