ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಅಡುಗೆ ಎಣ್ಣೆ ಆಮದಿನ ಮೇಲಿನ ಸೆಸ್ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತವು ತನ್ನ ಅರ್ಧದಷ್ಟು ತೈಲವನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡಿತು.
ಇಂಡೋನೇಷ್ಯಾವು ಇದ್ದಕ್ಕಿದ್ದಂತೆ ತಾಳೆ ಎಣ್ಣೆ ಹಾಗೂ ಕಚ್ಚಾ ತಾಳೆ ಎಣ್ಣೆಯ ರಫ್ತನ್ನು ನಿಷೇಧಿಸಿದೆ. ಇದು ಭಾರತದಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ಕುಸಿತದಿಂದಾಗಿ, ಬೆಲೆ ವೇಗವಾಗಿ ಏರುತ್ತಿದೆ.ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಖಾದ್ಯ ತೈಲ ಆಮದಿನ ಮೇಲಿನ ಕೃಷಿ ಸೆಸ್ ಅನ್ನು ಶೇ.5 ರಷ್ಟು ಕಡಿಮೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಅಂತರಾಷ್ಟ್ರೀಯ ತೈಲ ಬೆಲೆಗಳು ಏರುತ್ತಿರುವುದು ಗ್ರಾಹಕರು ಮತ್ತು ದೇಶದ ಆಡಳಿತಗಾರರನ್ನ ಘಾಸಿಗೊಳಿಸಿದೆ ಎಂದು ಎಸ್ಇಎ ಹೇಳಿದೆ.
ಇನ್ನು ಈ ಹೊರೆಯನ್ನ ಕಡಿಮೆ ಮಾಡಲು ಸರ್ಕಾರವು ಸಂಸ್ಕರಿಸಿದ, ಕಚ್ಚಾ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನ ಕಡಿತಗೊಳಿಸಲು ಮುಂದಾಗಿದೆ. ಈ ಮೂಲಕ ಅಡುಗೆ ಎಣ್ಣೆ ಬೆಲೆಯಲ್ಲಿ ಶೀಘ್ರವೇ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.