Sunday, May 17, 2026
Sunday, May 17, 2026

ಎಮ್ಮೆ ನಿನಗೆ ಸಾಟಿಯಿಲ್ಲ! ರೈಲನ್ನೇ ನಿಲ್ಲಿಸಿದೆಯಲ್ಲ!

Date:

ಎಮ್ಮೆ ನಿನಗೆ ಸಾಟಿಯಿಲ್ಲ ..ಹಾಡನ್ನ ನೀವೆಲ್ಲಾ ಕೇಳಿದ್ದೀರಿ.
ಬಿಸಿಲೋ ಬಿರುಗಾಳಿಯೋ ಮಳೆ ಚಳಿಗೆ ಊಹ್ಞೂಂ ಜಗ್ಗದ ಪ್ರಾಣಿ.
ಆದರೆ ಅವು ನಾವು ಪ್ರಯಾಣಿಸೋ ರೈಲನ್ನ ಜಗ್ಗಿ ನಿಲ್ಲುವಂತೆ ಮಾಡಿವೆ.
ರೈಲಿನ ಚಾಲಕ ಬಗ್ಗಿ ನೋಡಿ ಎಮ್ಮೆಗಳು ಹಳಿಯ ಮೇಲೆ ನಡೆಯುತ್ತಿದ್ದನ್ನ ಕಣ್ಣಾರೆ ನೋಡಿದ್ದಾನೆ.
ಪಾಪ..ಮೂಕ ಪ್ರಾಣಿ ಎಂಬ ಕನಿಕರ ಮೂಡಿದೆ. ರೈಲನ್ನ ನಿಲ್ಲಿಸಿದ. ಎಮ್ಮೆಗಳ ಪ್ರಾಣವುಳೀತು
ಈ ಘಟನೆ ನಡೆದದ್ದು ಶಿವಮೊಗ್ಗದ ಕಾಶೀಪುರ ರೈಲ್ವೇ ಗೇಟಿನ ಸಮೀಪ.

ಎಮ್ಮೆ ತಾನೆ ಅಂತ ಈಗ ಲಾರಿ ಬಸ್ಸುಗಳು
ಅವುಗಳ ಮೇಲೇಯೇ ಹರಿಸಿಕೊಂಡು ಭರ್ರನೆ ಹೋಗುವ ಎಷ್ಟೋ ಪ್ರಸಂಗ ನೋಡಿದ್ದೇವೆ.
ಕೆಲ ಸೆಕೆಂಡುಗಳ ಹೊತ್ತು ರೈಲನ್ನ ನಿಲ್ಲಿಸಿದಾಗ ಪ್ರಯಾಣಿಕರು ಗಾಭರಿಯಾದರು.ರೈಲು ತಾಳಗುಪ್ಪ ಕಡೆಗೆ ಹೊರಟಿತ್ತು. ಬಹುತೇಕ ನಡುಬಿಸಿಲ 1-10 ರ ಮಟಮಟ ಮಧ್ಯಾಹ್ನದ ವೇಳೆಯಾಗಿತ್ತು.
ಇದೇನು ಯಾವುದಾದರೂ ಅಪಘಾತವಾಗಿದೆಯ? ಎಂದು ಯೋಚಿಸತೊಡಗಿದರು.

ಆದರೆ ‌ನಿಜಾಂಶ ತಿಳಿದಾಗ ಚಾಲಕ ಮಹಾಶಯನ ಮಾನವೀಯ ನಡವಳಿಕೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕಳೆದ ಮಂಗಳವಾರ
ಈ ಘಟನೆ ಸಂಭವಿಸಿದೆ.

ಆದರೆ ಎಮ್ಮೆಗಳು ಮಾತ್ರ
ಈ ಯಾವುದರ ಉಸಾಬರಿ ಹಚ್ಚಿಕೊಳ್ಳದೇ ಹಳಿಯಿಂದ ಅತ್ತ ನಡೆದು ಜಾಗ ಖಾಲಿಮಾಡಿವೆ.
ಅದಕ್ಕೆ ಹೇಳಿದ್ದು
ಎಮ್ಮೆ ನಿನಗೆ ಸಾಟಿಯಿಲ್ಲ!!!.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜಾವಳ್ಳಿ ಬಳಿ ಭೀಕರ ಅಪಘಾತ: ಸಹ ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ.

Breaking News ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾವಳ್ಳಿ ಸಮೀಪ ಇಟ್ಟಿಗೆ...

MESCOM ಗಮನಿಸಿ! ಮೇ20 ರಂದು ಕೂಡ್ಲಿ,ಚಿಕ್ಕೂಡ್ಲಿ, ಭದ್ರಾಪುರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.

MESCOM ಶಿವಮೊಗ್ಗದ ಎಂ.ಆರ್.ಎಸ್ 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ...

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...