Tuesday, December 16, 2025
Tuesday, December 16, 2025

ಗರೀಬ್ ಕಲ್ಯಾಣ ಯೋಜನೆ ಐಎಂಎಫ್ ಶ್ಲಾಘನೆ

Date:

ಯೋಜನೆಗಳ ಭರವಸೆಯನ್ನು ಚುನಾವಣಾ ಸಮಯದಲ್ಲಿ ಎಲ್ಲ ಪಕ್ಷಗಳೂ ಕೊಡುತ್ತವೆ. ಬದ್ಧತೆ ತೋರಿಸಲು ಪ್ರಣಾಳಿಕೆಯಲ್ಲಿ ನಮೂದಿಸುತ್ತವೆ. ಹಲವು ಬಾರಿ ಕೆಲವು ಜಾರಿಯಾಗುತ್ತದೆ. ಹಲವು ಮರೆತೇ ಹೋಗಿ ಬಿಡುತ್ತವೆ.
ಆದರೆ, ಜಾರಿಯಾದ ಹಲವು ಕಾರ್ಯಕ್ರಮಗಳು ಅಡಳಿತಶಾಹಿಯ ಹಂತದಲ್ಲಿ ಏನಾದರೂ ದುರ್ಬಲವಾದರೆ
ಉತ್ತಮ ಯೋಜನೆಗಳು ವೈಫಲ್ಯಕಾಣುತ್ತವೆ.

ಈಗ, ಎಪ್ಪತ್ತೈದು ವರ್ಷಗಳ ನಮ್ಮ ರಾಜಕೀಯ ಇತಿಹಾಸದಲ್ಲಿ ಇವೆಲ್ಲವನ್ನೂ
ಜನತೆ ವೀಕ್ಷಿಸುತ್ತಾ ಬಂದಿದೆ.

ಜೀತವಿಮುಕ್ತಿ, ತಲೆಯಮೇಲೆ ಮಲಹೊರುವ ಅಮಾನವೀಯ
ಪದ್ಧತಿಗಳು ತೊಲಗಿವೆ.
ಇಷ್ಟಾದರೂ ಹಸಿವಿನ ಕೂಗು ಅಡಗಿಸುವ
ಬಗ್ಗೆ ಪ್ರಬಲ ಯೋಜನೆಗಳು ನಾಟುವಂತಹ ಕೆಲಸ ಮಾಡಿರಲಿಲ್ಲ.

ಈಗ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಒಂದಿಷ್ಟು ಬಡವರ
ಹೊಟ್ಟೆ ತಣಿಸುವಲ್ಲಿ ಸಾಫಲ್ಯಕಾಣುತ್ತಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ
ಭಾರತದ ಈ ಯೋಜನೆಯ ಬಗ್ಗೆ ಒಂದು ವರದಿಯನ್ನೇ ಹೊರತಂದಿದೆ.

ಈ ವರದಿಯ ಪ್ರಕಾರ ಭಾರತದಲ್ಲಿ
142 ರೂಪಾಯಿಗಿಂತ ಕಡಿಮೆ ಸರಾಸರಿ ಆದಾಯ ಇರುವ ಕಡುಬಡವರ ಸಂಖ್ಯೆ ಕೊರೋನಾ ಬಿಕ್ಕಟ್ಟಿನ 2020ರ ವರ್ಷದಲ್ಲಿಯೂ ಕೊರೋನಾ ಪೂರ್ವ 2019ರ ಮಟ್ಟದಲ್ಲಿ ಉಳಿದುಕೊಂಡಿದೆ‌. ಗರೀಬ್ ಕಲ್ಯಾಣ ಯೋಜನೆ ಬಡತನವನ್ನು ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

2020 ರ ಮಾರ್ಚ್ ನಲ್ಲಿ ಅನ್ನ ಯೋಜನೆ ಆರಂಭಿಸಿ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗಿದೆ. 80 ಕೋಟಿ ಜನ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ನೂರ ಮೂವತ್ತು ಕೋಟಿ ಜನಸಂಖ್ಯೆಯಲ್ಲಿ ಎಂಭತ್ತು ಕೋಟಿ ಮಂದಿ ಈ ಯೋಜನೆಯ ಲಾಭ ಪಡೆದಿದ್ದಾರೆ. ಅಕ್ಕಿ ಕೊಟ್ಟು ಜನರನ್ನ ಸೋಮಾರಿಗಳನ್ನಾಗಿ ಮಾಡುತ್ತಿದೆ
ಎಂಬ ಟೀಕೆಯನ್ನೂ ರಾಜ್ಯ ಎದುರಿಸಿತ್ತು.
ಆದರೆ ಬಡವರ ತುತ್ತಿನ ಚೀಲದ ಅಗತ್ಯದ ಬಗ್ಗೆ ಜರೂರು ಇಂತಹ ಕೆಕಸ ಪರಿಹಾರ ನೀಡಬಲ್ಲದು.

ಮುಂದೆ ಅವಲಂಬಿತರಾಗದಂತೆ ಅವರ ಯೋಚನೆಯ ದಿಕ್ಕನ್ನ ಬದಲಿಸುವ
ಯೋಜನೆಗಳನ್ನ ಕೊಡಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...