Wednesday, July 16, 2025
Wednesday, July 16, 2025

ಕುಬಟೂರಿನಲ್ಲಿ ಹೋರಿ ಬೆದರಿಸುವ ಹಬ್ಬ

Date:

ಯುಗಾದಿ ಹಬ್ಬದ ನಂತರ ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ನೆಚ್ಚಿನ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ನಿನ್ನೆ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದೆ. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ಪಕ್ಕದ ಊರುಗಳಿಂದ ಭಾರಿ ಪ್ರಮಾಣದ ಜನರು ಆಗಮಿಸಿದ್ದರುರೋಮಾಂಚಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳಿಗೆ ಬಗೆಬಗೆಯ ಅಲಂಕಾರಗಳನ್ನು ಮಾಡಲಾಗಿತ್ತು. ಕಾಲ್ಗೆಜ್ಜೆ, ಬಲೂನು ಸೇರಿದಂತೆ ಇನ್ನೂ ಮುಂತಾದ ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಅಚ್ಚುಕಟ್ಟಾಗಿ ಶೃಂಗರಿಸಲಾಗಿತ್ತು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಹೋರಿಗಳ ಅಲಂಕಾರ ಕಣ್ತುಂಬಿಕೊಂಡರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಕಣ್ಣಿಟ್ಟಿದ್ದರು. ಹೋರಿಯನ್ನು ಹಿಡಿದು, ಕೊಬ್ಬರಿ ಹಿಡಿದು ತರುವುದು ಸ್ಪರ್ಧೆಯಾಗಿತ್ತು.

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಅಖಾಡದಲ್ಲಿ ಚಾಮುಂಡಿ ಎಕ್ಸ್ ಪ್ರೆಸ್, ಅಗಸನಹಳ್ಳಿ ನರಸಿಂಹ, ನಲ್ಲಿಕೊಪ್ಪದ ಬಸವ, ಶಿಕಾರಿಪುರ ಹಿಟ್ಲರ್, ಎನ್‍ಟಿಸಿ ಸಾಹುಕಾರ, ಹೊಸಳ್ಳಿ ವಾರಸುದಾರ, ನಿಟ್ಟಕ್ಕಿ ಸಿಪಾಯಿ ದಂಗೆ, ಶಿಕಾರಿಪುರ ಅಘೋರ, ಮಲೆನಾಡ ಮಹಾರಾಜ, ಮರೂರು ತಾರಕಾಸುರ, ಬಿಳವಾಣಿ ಮಣಿಕಂಠ, ಶಿಕಾರಿಪುರದ ಸಿಂಹ, ಕೊಡಕಣಿ ಡೇಂಜರ್ ಬಸವ, ಮಲೆನಾಡ ಮಾಣಿಕ್ಯ, ಅಗಸನಹಳ್ಳಿ ಹೊಯ್ಸಳ, ಕರ್ನಾಟಕದ ನಂದಿ, ಹಾನಗಲ್ಲ ಟೈಗರ್, ತಾವರೆಕೊಪ್ಪದ ಪೈಲ್ವಾನ್, ಸೊರಬದ ಪ್ರಳಯ, ಮಧುರವಳ್ಳಿ ಡೇಂಜರ್‍ಮುತ್ತು, ಹೋತನಕಟ್ಟಿ ರಾಜಕುಮಾರ, ಸೊರಬದ ಭಾರತರತ್ನ, ಹಿರೇಇಡಗೋಡು ಉಡಾಳ ಕರಿಯ, ದೊಡ್ಡಿಕೊಪ್ಪದ ಜಂಪಿಂಗ್ ಸ್ಟಾರ್, ಹಾಲಗಳಲೆ ಹೆಬ್ಬುಲಿ ಮತ್ತು
ಹಿಂದೂ ಹುಲಿ ಹರ್ಷ ಸವಿನೆನಪಿಗಾಗಿ ಉದ್ರಿ ಮಣಿಕಂಠ ಸೇರಿದಂತೆ ಅನೇಕ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಬರುತ್ತಿತ್ತು.

ಹೋರಿ ಹಬ್ಬದ ಆಯೋಜಿಸಿದ್ದ ಕುಬಟೂರು ಗ್ರಾಮಸ್ಥರು ಅಖಾಡದಲ್ಲಿ 2 ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ.

ಕೊನೆಯಲ್ಲಿ ಅಖಾಡದಲ್ಲಿ ಉತ್ತಮವಾಗಿ ಓಡಿದಂತಹ ಹೋರಿಗಳನ್ನು ಹಾಗೂ ಕೊಬ್ಬರಿ ಹಿಡಿದ ಯುವಕರನ್ನು ಗುರುತಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...