ಇಷ್ಟೂ ದಿನದ ಇಕ್ರೇನ್ ರಷ್ಯದ ಯುದ್ಧದ ಬಿಸಿ ಈಗ ಝೆಲೆನ್ಸ್ಕಿ ಅವರ ಮೂಲಕ ಭದ್ರತಾ ಮಂಡಳಿಗೆ ತಟ್ಟಲಿದೆ.
ಜಗತ್ತಿನ ಮೂಲೆ ಮೂಲೆ ರಾಷ್ಟ್ರಗಳ ಕಿವಿಗೆ ಉಕ್ರೇನ್ ಉಳಿಸಿ ಎಂಬ ಆಕ್ರಂದನ ಕೇಳುವಂತೆ ಮಾಡಿದ್ದಾರೆ.ಆದರೂ ಅವರಿಗೆ ನಿರೀಕ್ಷಿತ ಫಲ ದೊರೆತಿಲ್ಲ.
ವಿಶ್ವಸಂಸ್ಥೆ ಕೂಡ ಸಹಾನುಭೂತಿಯಿಂದ
ಉಕ್ರೇನ್ ಪರಿಸ್ಥಿತಿ ಅವಲೋಕಿಸುತ್ತಿದೆ.
ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಈಗಾಗಲೇ ಉಕ್ರೇನ್ ನಲ್ಲಿ 410 ನಾಗರಿಕರ ಶವಗಳನ್ನ ನೋಡಿ ಜಾಗತಿಕ ಗಮನ ಸೆಳೆದಿದ್ದಾರೆ. ಎಪ್ರಿಲ್ 5 ರ ಮಂಗಳವಾರ ಉಕ್ರೇನ್ ಅಧ್ಯಕ್ಷ ನಮ್ಮ ನಿಲುವನ್ನ ಭದ್ರತಾ ಮಂಡಳಿಯಲ್ಲಿ ಸಾದರ ಪಡಿಸಲು ನಿಗದಿಯಾಗಿದೆ.
ಈ ಮೂಲಕ ಉಲ್ಬಣಗೊಂಡ ಸಮರ ಸನ್ನಿವೇಶದ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶವಾಗಲಿದೆ.
ನಮ್ಮ ಜಗತ್ತು ಮಾಹಿತಿ ಸ್ಫೋಟ ದಿಂದ ವಿಶ್ವಗ್ರಾಮವಾಗಿದೆ ಎನ್ನುತ್ತೇವೆ.ಆದರೆ ಈ ಅಮಾನವೀಯ ಯುದ್ಧದ ಪರಿಣಾಮದ ಬಗ್ಗೆ ಯಾವ ದೇಶವೂ ಮೈಕೊಡವಿ ಎದ್ದಂತಿಲ್ಲ.