Wednesday, July 16, 2025
Wednesday, July 16, 2025

ಸಮರಕ್ಕೆ ಸಮ್ಮತಿಸದ ಭದ್ರತಾ ಮಂಡಳಿ ಸಭೆ ಭಾರತ ತಟಸ್ಥ ನೀತಿ

Date:

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ಲಕ್ಷಾಂತರ ಮಂದಿ ಉಕ್ರೇನಿಯನ್ನರು ನೀರು, ಆಶ್ರಯ ,ಆಹಾರವಿಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ.

ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ದಶಕದ ಸಂಕಷ್ಟ ಉಕ್ರೇನ್ ಈಗ ಎದುರಿಸುತ್ತಿದೆ.
ಇಂದು ಉಕ್ರೇನ್ ಗೆ ಜಗತ್ತಿನ ರಾಷ್ಟ್ರಗಳ ಮಾನವೀಯ ಅಗತ್ಯಗಳು ಕಂಡುಬಂದಿದೆ.

ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾ ವಿರುದ್ಧ ಬಹುತೇಕ ರಾಷ್ಟ್ರಗಳು ನಿರ್ಣಯ ಹೊರಡಿಸಿವೆ.

ಉಕ್ರೇನ್ ವಿರುದ್ಧ ತಾನು ಸಾರಿದ್ದ ಯುದ್ಧವನ್ನು ಸಮರ್ಥಿಸಿಕೊಳ್ಳಲು ರಷ್ಯಾಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ 9 ಮತಗಳು ಬೇಕಾಗಿತ್ತು. ಇತರ ನಾಲ್ಕು ಖಾಯಂ ಸದಸ್ಯರಾದ ಯುಎಸ್, ಬ್ರಿಟನ್, ಫ್ರಾನ್ಸ್ ಮತ್ತು ಚೀನಾದಿಂದ ಯಾವುದೇ ವೀಟೋ ಇಲ್ಲ.
ಆದರೆ ರಷ್ಯಾಕ್ಕೆ ಬೆಂಬಲ ಸಿಕ್ಕಿದ್ದು ಚೀನಾದಿಂದ ಮಾತ್ರ. 13 ಇತರ ಖಾಯಂ ಸದಸ್ಯ ರಾಷ್ಟ್ರಗಳು ಮತದಿಂದ ದೂರವುಳಿದವು. ಅಂದರೆ ಉಕ್ರೇನ್ ವಿರುದ್ಧ ಸಾರಿದ ಯುದ್ಧದಲ್ಲಿ ರಷ್ಯಾಕ್ಕೆ ಬೇರೆ ರಾಷ್ಟ್ರಗಳಿಂದ ಬೆಂಬಲ ಸಂಪೂರ್ಣವಾಗಿ ಸಿಕ್ಕಿಲ್ಲ ಎನ್ನಲಾಗಿದೆ.

ಉಕ್ರೇನ್ ಮತ್ತು 24 ದೇಶಗಳು ರಚಿಸಿದ ಮತ್ತು ಸುಮಾರು 100 ರಾಷ್ಟ್ರಗಳ ಸಹ ಪ್ರಾಯೋಜಕತ್ವದ ನಿರ್ಣಯವನ್ನು ಜನರಲ್ ಅಸೆಂಬ್ಲಿ ಪರಿಗಣಿಸಲು ಪ್ರಾರಂಭಿಸಿದ ಅದೇ ದಿನ ರಷ್ಯಾಕ್ಕೆ ಸೋಲುಂಟಾಗಿದೆ. ಇದು ಬೆಳೆಯುತ್ತಿರುವ ಮಾನವೀಯ ತುರ್ತುಸ್ಥಿತಿಗೆ ರಷ್ಯಾದ ಆಕ್ರಮಣಶೀಲತೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...