Friday, April 3, 2026
Friday, April 3, 2026

ಪರೀಕ್ಷೆಯ ಅಂಕಗಳಿಗಿಂತ ಜೀವನವೆಂಬ ಪರೀಕ್ಷೆಯ ಅಂಕಗಳೇ ಮುಖ್ಯ

Date:

ವಾರ್ಷಿಕ ಪರೀಕ್ಷೆ ಎದುರಿಸಿ ಅಂಕಗಳಿಸಲು ಶಾಲಾ ಕಾಲೇಜು ಶಿಕ್ಷಣ ಸಾಕು, ಆದರೆ, ಬದುಕು ಎದುರಿಸಲು ಜೀವನ ಶಿಕ್ಷಣ ಬೇಕೇ ಬೇಕು. ಜೀವನ ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಗಳ ಮೂಲಕವೂ ಪಡೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಅವರು ತಿಳಿಸಿದರು.
ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪಠ್ಯೇತರವಾದ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಮುಂತಾದ ಯಾವುದೇ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸೌಹಾರ್ದತೆಗೂ, ಜೀವನ ಮೌಲ್ಯಗಳಿಗೂ ಪ್ರಾಶಸ್ತ್ಯವಿದೆ. ಆದ್ದರಿಂದಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಹೆಚ್ಚು ಗೌರವ ನೀಡುತ್ತಿವೆ ಎಂದರು.

ವಿಶ್ವದಲ್ಲಿ ದೊಡ್ಡ ಮೊತ್ತದಲ್ಲಿ ರುವ ಭಾರತೀಯ ಯುವ ಶಕ್ತಿಯ ಬಗ್ಗೆ ಜಗತ್ತಿನ ಬೇರೆ ರಾಷ್ಟ್ರಗಳು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ನಿರೀಕ್ಷೆ, ತಂದೆ-ತಾಯಿಗಳ ನಿರೀಕ್ಷೆ, ಸಮಾಜ ಮತ್ತು ರಾಷ್ಟ್ರದ ನಿರೀಕ್ಷೆ ಯೊಂದಿಗೆ ಜಾಗತಿಕ ನಿರೀಕ್ಷೆಯೂ ಸಾಕಾರವಾಗಿ ಪ್ರಪಂಚವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯಬೇಕಿದ್ದು ಈ ಸಾಮರ್ಥ್ಯ ಭಾರತದ ಯುವ ಜನರಲ್ಲಿದೆ.


ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಎಂ.ಹಾಲಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮ್ಮನೆ ಬದುಕಿದರೆ ಪ್ರಯೋಜನವಿಲ್ಲ, ಏನಾದರೂ ಸಾಧನೆ ಬೇಕು. ಯುವಜನತೆಯನ್ನು ಬಳಸಿಕೊಳ್ಳುವುದು ಎಷ್ಟು ಮುಖ್ಯವೋ, ಉತ್ತಮ ಕಾರ್ಯಕ್ಕೆ ಯುವಜನತೆಯ ಸ್ಪಂದನೆಯೂ ಅಷ್ಟೇ ಮುಖ್ಯ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಂ.ಮುರಗಿಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎನ್.ಎಂ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಹಾಗೂ ಕಲಾ ವೇದಿಕೆಯ ಸಂಯೋಜಕ ಪ್ರೊ.ಸಿದ್ದಯ್ಯ ಎಸ್. ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಕ್ ಸಂಯೋಜಕ ಪ್ರೊ.ಬಿ. ಕೆ. ಮೊಹಮ್ಮದ್ ಸ್ವಾಲೇಹಾ, ಮಾನವ ಹಕ್ಕುಗಳ ವೇದಿಕೆ ಸಂಯೋಜಕ ಪ್ರೊ.ಹೆಚ್. ಎಂ. ವೇದಮೂರ್ತಿ ಆರಾಧ್ಯ, ಮಹಿಳಾ ವೇದಿಕೆಯ ಸಂಯೋಜಕಿ ಡಾ.ಎಂ.ಹೆಚ್. ಶಿವಗಂಗಮ್ಮ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವೇದಿಕೆ ಸಂಯೋಜಕ ಡಾ.ಪರಮೇಶ್ವರ ನಾಯ್ಕ, ಉದ್ಯೋಗ ಮಾಹಿತಿ ವೇದಿಕೆ ಸಂಯೋಜಕ ಪ್ರೊ. ರಮೇಶ್ ಕೆ.ಪರ್ವತಿ, ಕನ್ನಡ ವಿಭಾಗ ಮುಖ್ಯಸ್ಥೆ ರೇಣುಕಾ ಸಂಕನಗೌಡರ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ.ರಶ್ಮಿ ಜಿ. ಹೆಚ್, ಉರ್ದು ವಿಭಾಗ ಮುಖ್ಯಸ್ಥ ಅಪ್ಸರ್ ಅಲಿ ಮುಂತಾದವರು ವೇದಿಕೆಯಲ್ಲಿದ್ದರು. ಕಲಾವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಫೌಜಿಯಾ ಖಾನಂ, ಗೌತಮ್ ಜಿ. ಹೆಚ್. ಭಾಗವಹಿಸಿದ್ದರು.ಮುಖ್ಯ ಅತಿಥಿ ಎಚ್. ಬಿ.ಮಂಜುನಾಥ ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಪ್ರಕೃತಿಯನ್ನು ಅನುಸರಿಸಿ ಬದುಕಿದರೆ ಉತ್ತಮ ಆರೋಗ್ಯ ಜೀವನ-ಜಿ.ಎ. ಮಂಜುನಾಥ್.

Shivamogga News ಪ್ರಕೃತಿಯನ್ನು ಅನುಸರಿಸಿ ಬದುಕಿದಲ್ಲಿ ಉತ್ತಮ ಆರೋಗ್ಯ, ಜೀವನ‌ ಹಾಗೂ...

Canara Bank ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ.

Canara Bank ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್...

MESCOM ಏಪ್ರಿಲ್ 4. ಶಿವಮೊಗ್ಗದ ಹೊಸಳ್ಳಿ, ರಾಮೇನಕೊಪ್ಪ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.

MESCOM  ಶಿವಮೊಗ್ಗ ಮಂಡ್ಲಿ 11011 ಕೆವಿ ವಿದ್ಯುತ್ ಉಪಕೇಂದ್ರದಿAದ ಎಂ.ಆರ್.ಎಸ್ 22011...

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...