Wednesday, July 8, 2026
Wednesday, July 8, 2026

ರಾಷ್ಟ್ರೀಯ ಪ್ರಶಸ್ತಿ ಯಾರಿಗೆ ಸಂದರೂ ಗೌರವಿಸುವುದನ್ನ ಕಲಿಯೋಣ- ಕರಣ್ ಸಿಂಗ್

Date:

ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರಿಗೆ ಪ್ರತಿಷ್ಠಿತ ” ಪದ್ಮಭೂಷಣ” ಪ್ರಶಸ್ತಿ ಲಭಿಸಿದ ವಿಷಯದಲ್ಲಿ ಕಾಂಗ್ರೆಸ್ ಒಳಗೆ ಎದ್ದಿರುವ ವಿವಾದ ಕುರಿತು ಕಾಂಗ್ರೆಸ್ ಮತ್ತೊಬ್ಬ ಹಿರಿಯ ನಾಯಕ ಕರಣ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿಗಳು ಯಾರಿಗೆ ಲಭಿಸಿದರೂ ಗೌರವಾರ್ಹ. ನಮ್ಮ ಪಕ್ಷದ ಮುಖಂಡನಿಗೆ ಈಗ ಅಗೌರವ ಬಂದಿರುವುದರಿಂದ ಅವರನ್ನು ಅಭಿನಂದಿಸಬೇಕು ಎಂದು ಹೇಳಿದ್ದಾರೆ. ಆಜಾದ್ ಗೆ ಪದ್ಮ ಪ್ರಶಸ್ತಿ ಪಕ್ಷದೊಳಗೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ ಪದ್ಮ ಪ್ರಶಸ್ತಿ ತಿರಸ್ಕರಿಸುವುದನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಬುದ್ಧದೇವ್ ಅಜಾದಿ ಬಯಸಿದ್ದರು. ಗುಲಾಮಿತನವನ್ನ‌ಲ್ಲ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಕರಣ್ ಸಿಂಗ್, ಇಂತಹ ಕುಹಕ ಗಳಿಂದ ಪಕ್ಷ ಬೆಳೆಯುವುದಿಲ್ಲ. ಪ್ರಶಸ್ತಿ ಯಾರಿಗೆ ಸಂದರೂ ಸರಿಯೇ ಅದನ್ನು ಗೌರವಿಸುವುದು ಕಲಿಯಬೇಕು. ರಾಷ್ಟ್ರಪ್ರಶಸ್ತಿಗಳು ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...