2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ನೀಲಗಾರರ ಪದಗಳ ಖ್ಯಾತಿಯ ಮಳವಳ್ಳಿ ಮಹಾದೇವಸ್ವಾಮಿ ಸೇರಿದಂತೆ ಒಟ್ಟು 30 ಹಿರಿಯ ಜಾನಪದ ಕಲಾವಿದರು ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಬಿ ಮಂಜಮ್ಮ ಜೋಗತಿ ಅವರು ಕರ್ನಾಟಕ ಜಾನಪದ ಅಕಾಡೆಮಿಯ ಕಚೇರಿಯಲ್ಲಿ ನಡೆದಂತಹ ಸುದ್ದಿಗೋಷ್ಠಿ ಪ್ರಶಸ್ತಿ ಪ್ರಕಟಿಸಿದರು. ಈ ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ಹಾಗೂ ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಮಂಜಮ್ಮ ಜೋಗತಿ ಅವರು ತಿಳಿಸಿದರು.
ಈ ಬಾರಿಯ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ. ಬೆಂಗಳೂರು ನಗರ ಜಿಲ್ಲೆಯ ಗಂಗಮ್ಮ ಅವರ ಸೋಬಾನೆ ಪದಕ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಾನಪದ ಕಥೆಗಾರ ತಿಮ್ಮಯ್ಯ. ರಾಮನಗರ ಜಿಲ್ಲೆಯ ಚಿಕ್ಕಮ್ಮ (ಸೋಬಾನಪದ ), ತುಮಕೂರು ಜಿಲ್ಲೆಯ ಕಡಬ ಶ್ರೀನಿವಾಸ (ಜಾನಪದ ಹಾಸ್ಯ ಜಾದುಗಾರ), ಚಿಕ್ಕಬಳ್ಳಾಪುರ ಜಿಲ್ಲೆಯ ಜನಪದ ಗಾಯಕ ಗ.ನ.ಅಶ್ವತ್ಥ, ಕೋಲಾರ ಜಿಲ್ಲೆಯ ನಾರಾಯಣಸ್ವಾಮಿ (ತತ್ವಪದ), ಶಿವಮೊಗ್ಗ ಜಿಲ್ಲೆಯ ಲಕ್ಷ್ಮಿ ರಾಮಪ್ಪ (ಹಸೆ ಚಿತ್ತಾರ), ಚಿತ್ರದುರ್ಗ ಜಿಲ್ಲೆಯ ಚಂದ್ರಮ್ಮ (ಮದುವೆ ಹಾಡು), ದಾವಣಗೆರೆ ಜಿಲ್ಲೆಯ ರಂಗಮ್ಮ (ಜನಪದ ಗೀತೆ), ಮಂಡ್ಯ ಜಿಲ್ಲೆಯ ಮಹದೇವಸ್ವಾಮಿ (ನೀಲಗಾರರ ಪದ), ಮೈಸೂರು ಜಿಲ್ಲೆಯ ಮಹದೇವು (ಬೀಸುಕಂಸಾಳೆ), ಹಾಸನ ಜಿಲ್ಲೆಯ ಹೆಚ್.ಎನ್. ರಾಮಯ್ಯ (ಕೀಲುಕುದುರೆ), ದಕ್ಷಿಣ ಕನ್ನಡ ಜಿಲ್ಲೆಯ ವೆಂಕಟೇಶ ಬಂಗೇರ (ಕರಗ ನೃತ್ಯ), ಚಾಮರಾಜನಗರ ಜಿಲ್ಲೆಯ ಆರ್.ಎಂ. ಶಿವಮಲ್ಲೇಗೌಡ (ಗೊರವರ ಕುಣಿತ), ಚಿಕ್ಕಮಗಳೂರು ಜಿಲ್ಲೆಯ ಹನುಮಕ್ಕ (ತತ್ವಪದ), ಕೊಡಗು ಜಿಲ್ಲೆಯ ಜೆ.ಕೆ.ಮರಿ (ಜೇನುಕುರುಬರ ನೃತ್ಯ ಮತ್ತು ಹಾಡು). ಉಡುಪಿ ಜಿಲ್ಲೆಯ ಪದ್ಮಾವತಿ ಆಚಾರ್ಯ (ನಾಟಿವೈದ್ಯ). ಧಾರವಾಡ ಜಿಲ್ಲೆಯ ಕುಬೇರ ಗೌಡ ಮುರಳ್ಳಿ (ಜಗ್ಗಲಿಗೆ). ಜಿಲ್ಲೆಯ ರಾಮಚಂದ್ರಪ್ಪ ಸಿದ್ದಪ್ಪ (ಕರಡಿ ಮಜಲು), ವಿಜಯಪುರ ಜಿಲ್ಲೆಯ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ (ಭಜನೆ), ಬಾಗಲಕೋಟೆ ಜಿಲ್ಲೆಯ ರಂಗಪ್ಪ ಬಾಲಪ್ಪ ಹಲಕುರ್ಕಿ (ಶಿವ ಭಜನೆ), ಜವಾನ್ ಜೈ ಕಿಸಾನ್ ಹಾವೇರಿ ಜಿಲ್ಲೆಯ ಸಿದ್ದಲಿಂಗಪ್ಪ ಚನ್ನಬಸಪ್ಪ ನರೇಗಲ್ಲ (ತತ್ವಪದ), ಬೆಳಗಾವಿ ಜಿಲ್ಲೆಯ ರುದ್ರಾಂಬಿಕಾ ಮಹಾಂತೇಶ ಯಾಳಗಿ (ಲಾವಣಿ ಪದ), ಉತ್ತರ ಕನ್ನಡ ಜಿಲ್ಲೆಯ ಭೂಗೂ ಧಾಕೂ ಕೊಳಾಪ್ಪೆ ಗೌಳಿವಾಡ (ಹೋಳಿ ಸಿಗ್ಮಾ ಕುಣಿತ), ಬಳ್ಳಾರಿ ಜಿಲ್ಲೆ ಪೆದ್ದ ಮಾರೆಕ್ಕ (ಬುರ್ರ ಕಥಾ), ರಾಯಚೂರು ಜಿಲ್ಲೆಯ ಮರಿಯಪ್ಪ (ಭಜನೆ ಪದ), ಕೊಪ್ಪಳ ಜಿಲ್ಲೆಯ ಶಿವಲಿಂಗಪ್ಪಪಹಗಲುವೇಷ), ಕಲಬುರಗಿ ಜಿಲ್ಲೆಯ ಶಕುಂತಲಾ ದೇವಲಾನಾಯಕ (ಗೀಗೀ ಪದ), ಬೀದರ್ ಜಿಲ್ಲೆಯ ಸಿದ್ರಾಮ (ಗೋಂದಳಿ ಪದ), ಯಾದಗಿರಿ ಜಿಲ್ಲೆಯ ಭೂಮಣ್ಣ ಬಸಪ್ಪ ಲಾಠಿ (ಡೊಳ್ಳು ಕುಣಿತ).
ತಜ್ಞ ಪ್ರಶಸ್ತಿ ಪುರಸ್ಕೃತರಾಗಿ ಡಾ. ಚಂದ್ರು ಕಾಳೇನಹಳ್ಳಿ, ಡಾ. ಜಿ.ಶಂ.ಪ ಪ್ರಶಸ್ತಿ, ಡಾ. ಶ್ರೀಪಾದ ಶೆಟ್ಟಿ, ಡಾ.ಬಿ.ಎಸ್. ಗದ್ದಗಿಮಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store

Download the most loved Klive App for your Android phone or tablet.