Wednesday, April 23, 2025
Wednesday, April 23, 2025

ಓಮಿಕ್ರಾನ್ : ಬರುವ ದಿನಗಳಲ್ಲಿ ಪ್ರಭಾವ ಅಧಿಕವಾಗುವ ಸಾಧ್ಯತೆ

Date:

ಲಂಡನ್ ನ ಇಂಪೀರಿಯಲ್ ಕಾಲೇಜ್ ನಡೆಸಿರುವ ಅಧ್ಯಯನ ವರದಿಯಿಂದ ‘ಡೆಲ್ಟಾ ತಳಿಯಿಂದ ತಗುಲಿದ ಕೋವಿಡ್ ನ ತೀವ್ರತೆಗಿಂತ. ಓಮಿಕ್ರಾನ್ ರೂಪಾಂತರಿ ತಳಿಯಿಂದ ತಗುಲಿದ ಕೋವಿಡ್ ತೀವ್ರತೆಯೂ ಕಡಿಮೆ ಇರುತ್ತದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಆಧಾರಗಳು ಇಲ್ಲ’ ಎಂದು ತಿಳಿಸಿದೆ.

ಬ್ರಿಟನ್ನಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 11 ರ ನಡುವೆ ಪತ್ತೆಯಾದ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ.
ವರದಿಯ ಪ್ರಕಾರ ‘ಡೆಲ್ಟಾ ತಳಿಯಿಂದ ಉಂಟಾಗುವ ಮರುಸೋಂಕಿನ ಪ್ರಮಾಣಕ್ಕಿಂತ, ಓಮಿಕ್ರಾನ್ ರೂಪಾಂತರಿ ತಳಿಯ ಮರು ಸೋಂಕಿನ ಪ್ರಮಾಣ 5.4 ಹೆಚ್ಚಾಗಿರುತ್ತದೆ. ಅಲ್ಲದೆ ಈ ಹಿಂದೆ ಸೋಂಕಿಗೆ ಒಳಗಾದವರಿಗೆ ಮತ್ತು ಲಸಿಕೆಯ 2 ಡೋಸ್ ಪಡೆದುಕೊಂಡಿದ್ದವರಿಗೆ ಓಮಿಕ್ರಾನ್ ನಿಂದ ಸಿಗುವ ರಕ್ಷಣೆಯ ಪ್ರಮಾಣ ಶೇ.19ರಷ್ಟು ಮಾತ್ರ. ಆದ್ದರಿಂದ ಓಮಿಕ್ರಾನ್ ವ್ಯಾಪಕವಾಗಿ ಹರಡುವ ಅಪಾಯವಿದೆ’ ಎಂದು ಅಧ್ಯಯನದಿಂದ ಆಘಾತಕಾರಿ ಅಂಶ ಹೊರಬಿದ್ದಿದೆ.

ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ‘ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿಗಳ ವಿರುದ್ಧ ಕೆಲಸ ಮಾಡುವ ರೀತಿಯಲ್ಲಿ ಈಗ ಬಳಕೆಯಲ್ಲಿರುವ ಲಸಿಕೆಗಳನ್ನು ಮಾರ್ಪಡಿಸಬಹುದು’ ಎಂದು ತಿಳಿಸಿದ್ದಾರೆ.

‘ಭಾರತದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ರೂಪಾಂತರಿ ವೈರಸ್ ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಭಾವ ಅಧಿಕವಾಗುವ ಸಾಧ್ಯತೆ ಇದೆ. ಆದರೆ ಕೋವಿಡ್ ಲಕ್ಷಣ ಮತ್ತು ರೋಗಗಳ ತೀವ್ರತೆ ಕಡಿಮೆ ಇದೆ ಎಂಬುದೇ ಒಂದು ಆಶಾಕಿರಣ. ಈಗ ಬಳಕೆಯಲ್ಲಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ಆದರೆ ಹೊಸ ರೂಪಾಂತರಿ ತಳಿಗಳು ಬಂದಹಾಗೆ, ಲಸಿಕೆಯಿಂದ ದೊರೆತಿರುವ ರೋಗನಿರೋಧಕ ಶಕ್ತಿ ಕುಂದುತ್ತದೆ. ಈಗ ಬಳಕೆಯಲ್ಲಿರುವ ಲಸಿಕೆಗಳನ್ನು ಮಾರ್ಪಡಿಸಬಹುದು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಕಾಶ್ಮೀರದಲ್ಲಿ ಉಗ್ರರದಾಳಿಗೆ ಸಿಲುಕಿ ಶಿವಮೊಗ್ಗದ ಮಂಜುನಾಥರಾವ್ ಸಾವು

Breaking News ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ವ್ಯಕ್ತಿ ಸಾವುರಿಯಲ್ ಎಸ್ಟೇಟ್...

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...