ಸೈಬರ್ ಅಪರಾಧ ಪ್ರಕರಣಗಳ ತನಿಖೆ ವೇಳೆ ತಾಂತ್ರಿಕ ಮತ್ತು ಡಿಜಿಟಲ್ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ಪತ್ತೆಹಚ್ಚಿದ ಅತ್ಯುತ್ತಮ ಸೇವೆ ನೀಡುವ 2021ನೇ ಸಾಲಿನ ‘ಸೈಬರ್ ಕಾಪ್’ಪ್ರಶಸ್ತಿಗೆ ಸಿಐಡಿ ಡಿವೈಎಸ್ ಪಿ ಕೆ.ಎನ್. ಯಶವಂತಕುಮಾರ್ ಭಾಜನರಾಗಿದ್ದಾರೆ.
ಕೇಂದ್ರ ಸರ್ಕಾರದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ 2010ನೇ ಸಾಲಿನಿಂದ ಸೈಬರ್ ಕ್ರೈಂ ಅಪರಾಧಗಳಲ್ಲಿ ಅಸಾಧಾರಣ ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗುವ ತನಿಖಾಧಿಕಾರಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಪದ್ಧತಿ ಇದಾಗಿದೆ.
ದೇಶದೆಲ್ಲೆಡೆಯಿಂದ 55 ಸೈಬರ್ ಅಪರಾಧ ಪ್ರಕರಣಗಳ ವರದಿಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ಆಂಧ್ರಪ್ರದೇಶದ, ಉತ್ತರಾಖಂಡ ಮತ್ತು ಕರ್ನಾಟಕ ತನಿಖಾಧಿಕಾರಿಗಳು ಆಯ್ಕೆಪಟ್ಟಿಯನ್ನು ಇದ್ದರು.
ಕರ್ನಾಟಕದ ಸಿಐಡಿ ವಿಭಾಗ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 2015 ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ವಂಚನೆ ಪ್ರಕರಣವನ್ನು ಭೇಧಿಸಿದ ತನಿಖೆ ನಡೆಸಿದ್ದ ಪ್ರಸ್ತುತ ಸೈಬರ್ ಕ್ರೈಂ ವಿಭಾಗದ ಪೋಲಿಸ್ ಅಧೀಕ್ಷಕ ಎಂ.ಡಿ. ಶರತ್ ಅವರಿಗೆ ಪ್ರಶಸ್ತಿ ಲಭಿಸಿತ್ತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.