Friday, May 23, 2025
Friday, May 23, 2025

ನೇರಯುದ್ಧ, ತೆರೆಮರೆಯ ಸಮರ ಎರಡರಲ್ಲೂ ನಮಗೆ ಜಯ

Date:

ಭಾರತ ಸ್ವಾತಂತ್ರ್ಯ ಪಡೆದ ನಂತರ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದೆ. ಇದು ಐತಿಹಾಸಿಕ ಪ್ರಮಾದ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

1971ರ ಬಾಂಗ್ಲಾದೇಶ ಯುದ್ಧದ ಗೆಲುವಿನ ಸುವರ್ಣ ಮಹೋತ್ಸವ ಆಚರಣೆಗಾಗಿ ಹಮ್ಮಿಕೊಂಡಿದ್ದ,’ ಸ್ವರ್ಣಿಮ್ ವಿಜಯ್ ಪರ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“1971ರ ಸಮರದಲ್ಲಿ ಪಾಕಿಸ್ತಾನದ ಮೇಲೆ ನಾವು ಜಯಗಳಿಸಿದ್ದು ಹೆಮ್ಮೆಯ ಸಂಗತಿ. ಆದರೂ, ಸಹ ಸೋಲನ್ನು ಒಪ್ಪಿಕೊಂಡು ಸುಮ್ಮನಾಗದ ನೇರೆ ದೇಶವು ತೆರೆಮರೆಯಲ್ಲಿ ಭಯೋತ್ಪಾದಕರ ಮೂಲಕ ಭಾರತದ ಮೇಲೆ ಯುದ್ಧವನ್ನು ನಡೆಸುತ್ತಲೇ ಬಂದಿದೆ.

ನಮ್ಮ ಧೈರ್ಯಶಾಲಿ ಯೋಧರು, ಪೊಲೀಸ್ ಪಡೆಗಳು ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೆಸೆಯಲು ಶ್ರಮಿಸುತ್ತಿವೆ. ನೇರ ಸಮರದಲ್ಲಿ ಜಯಿಸಿದಂತೆಯೇ, ತೆರೆಮರೆಯ ಸಮರದಲ್ಲೂ ಗೆಲ್ಲುತ್ತೇವೆ” ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪಾಕಿಸ್ತಾನ ಪಡೆಗಳು ಬಂಗಾಳಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದವು. ಪೂರ್ವ ಪಾಕಿಸ್ತಾನವನ್ನು ಮಾನವೀಯತೆ ಆಧಾರದ ಮೇಲೆ ಸ್ವತಂತ್ರಗೊಳಿಸಬೇಕಿತ್ತು. ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹೇಳಿಕೆ ಪ್ರಕಾರ, ಅನ್ಯಾಯ ಎಲ್ಲಿ ಕಂಡರು ಕೂಡ ಅದು ಎಲ್ಲಾ ಕಡೆಯ ನ್ಯಾಯಕ್ಕೆ ಮಾರಕ ಎನ್ನುವುದನ್ನು ಮನಗಂಡು ಭಾರತ ವರ್ತಿಸಿತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bank of Baroda ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲವು ಹುದ್ದೆಗಳಿಗೆ ಮಾಜಿ ಸೈನಿಕರಿಂದಅರ್ಜಿ ಆಹ್ವಾನ

Bank of Baroda ಮಾಜಿ ಸೈನಿಕರಿಗಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ಆಫೀಸ್...

Photography shimoga ಪರಿಶಿಷ್ಠ‌ ಜಾತಿ‌ಒಳ ಮೀಸಲಾತಿ‌ಆನ್ ಲೈನ್ ಮೂಲಕಸ್ಬಯಂಘೋಷಣೆಅಂತಿಮ ದಿನಾಂಕ ವಿಸ್ತರಣೆ

Photography shimoga ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ...

Department Of Pre-University Education ದ್ವಿತೀಯ ಪಿಯು 3 ನೇ ಪರೀಕ್ಷೆಗೆ ನೋಂದಣಿ. ವಿದ್ಯಾರ್ಥಿಗಳಿಗೆ ಮಾಹಿತಿ

Department Of Pre-University Education ದ್ವಿತೀಯ ಪಿಯುಸಿ 3 ನೇ ಪರೀಕ್ಷೆಯನ್ನು...