ಕೇಂದ್ರ ಸರ್ಕಾರದ ವಿರುದ್ಧ ಸತತ ಒಂದು ವರ್ಷಗಳ ಕಾಲ ದಿಲ್ಲಿಯ ಗಡಿಭಾಗದಲ್ಲಿ 40ಕ್ಕೂ ಹೆಚ್ಚು ರೈತಸಂಘಟನೆಗಳು ಪ್ರತಿಭಟನೆ ನಡೆಸಿದ್ದೆವು. ಈಗ ರೈತರು ಪ್ರತಿಭಟನೆ ಪಡೆದು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ರೈತರು ಆ ಭಾಗದಲ್ಲಿ ಟೆಂಟ್ ಗಳು, ಅಡುಗೆಮನೆ ಸ್ನಾನ ಶೌಚಗೃಹ ಗಳನ್ನು ಅಕ್ಕಿ ಬಳಸಿದ್ದ ಕಬ್ಬಿಣ ಬಿದಿರು ಮತ್ತಿತರೆ ಸಾಮಗ್ರಿಗಳು ಪ್ರತಿಭಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ಆ ಭಾಗದ ಗುಜರಿ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ.
ತಮ್ಮ ಊರಿಗೆ ತೆರಳಿರುವ ರೈತರು ಬಿಟ್ಟು ಹೋಗಿರುವಂತಹ ವಸ್ತುಗಳ ಸಂಗ್ರಹಕ್ಕೆ ಗುಜರಿ ವ್ಯಾಪಾರಿಗಳ ನಡುವೆಯೇ ತೀರಾ ಪೈಪೋಟಿ ನಡೆಯುತ್ತಿದೆ. ಗುಜರಿ ಸಂಗ್ರಹಿಸುವವರ ಪಾಲಿಗೆ ಈ ಜಾಗ ಲಾಭದ ಅಡ್ಡೆಯಾಗಿ ಪರಿಣಮಿಸಿದೆ. ಕಬ್ಬಿಣ ಪ್ಲಾಸ್ಟಿಕ್ ಸಾಮಗ್ರಿಗಳ ಜೊತೆಗೆ ರೈತರು ಬಳಸುತ್ತಿದ್ದ ಬೆಚ್ಚನೆಯ ಹೊದಿಕೆ. ಪಂಚೆ-ಜುಬ್ಬಾಗಳು, ದಿನಬಳಕೆಯ ಸಾಮಗ್ರಿಗಳು ಇನ್ನು ಕೆಲವರಿಗೆ ಹಣ ಕೂಡ ಸಿಕ್ಕಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದಂತಹ ಗುಜರಿ ವ್ಯಾಪಾರಿ ಜಾವೇದ್ ಎಂಬವರು “ನನಗೆ ಇಲ್ಲಿ ಕಬ್ಬಿಣ, ಪ್ಲಾಸ್ಟಿಕ್ ಸೇರಿ ಅನೇಕ ಬೆಲೆಬಾಳುವ ವಸ್ತುಗಳು ಸಿಕ್ಕಿವೆ. ತಿಂಗಳ ಆದಾಯ ಗಳಿಕೆಯಾಗಿದೆ” ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.