Wednesday, February 19, 2025
Wednesday, February 19, 2025

ಬಡ್ಡಿದರ ಬಲಾವಣೆ ಇಲ್ಲ

Date:

ಕೋವಿಡ್ ವೈರಸ್ ನ ಹೊಸ ರೂಪಾಂತರ ತಳಿ ಓಮಿಕ್ರಾನ್ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಆರ್ ಬಿ ಐ ನ ಹಣಕಾಸು ನೀತಿ ಸಮಿತಿಯ ಸಭೆಯು ಇಂದಿನಿಂದ ಆರಂಭಗೊಂಡಿದೆ.

ಆರ್ ಬಿ ಐ ಗವರ್ನರ್ ನೇತೃತ್ವದ ಎಂಪಿಸಿ ಸಭೆ ಮೂರು ದಿನ ನಡೆಯಲಿದೆ. ಸಭೆಯ ನಿರ್ಧಾರಗಳು ಬುಧವಾರ ಪ್ರಕಟವಾಗಲಿವೆ. ಅಕ್ಟೋಬರ್ ನಲ್ಲಿ ನಡೆಸಿದ್ದ ಸಭೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಈ ಬಾರಿ ಆರ್ ಬಿಐ ಬಡ್ಡಿ ದರದಲ್ಲಿ ಯಥಾಸ್ಥಿತಿ ಒಂದು ವೇಳೆ ಕಾಯ್ದುಕೊಂಡರೆ ಒಟ್ಟು 9 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ ಆಗಲಿದೆ. 2020ರ ಮೇ ತಿಂಗಳಿನಲ್ಲಿ ಆರ್ ಬಿಐ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಲಾಗಿತ್ತು.

ಈಗ ಕೊರೋನಾದ ಹೊಸ ತಳಿ ಯಿಂದಾಗಿ ಅನಿಶ್ಚಿತ ವಾತಾವರಣ ನಿರ್ಮಾಣಗೊಂಡಿದೆ. ಈ ಕುರಿತು ಸ್ಪಷ್ಟತೆ ಸಿಗುವವರೆಗೂ ಬಡ್ಡಿದರಗಳ ನಿರ್ಧಾರದಲ್ಲಿ ಆರ್ ಬಿಐ ಕಾಡುವ ಸಾಧ್ಯತೆ ಇದೆ ಎಂದು ಕೋಟಕ್ ನ ಆರ್ಥಿಕ ಸಂಶೋಧನೆ ಮೂಲಗಳು ತಿಳಿಸಿದೆ.

ರಿವರ್ಸ್ ರೆಪೋ ದರ ಹೆಚ್ಚಳದ ಮೂಲಕ ನಗದು ಲಭ್ಯತೆಯನ್ನು ಸಹಜ ಸ್ಥಿತಿಗೆ ತರುವ ನಿರ್ಧಾರವನ್ನು ಮುಂದೂಡಬೇಕು ಎಂದು ಎಸ್ ಬಿಐನ ಆರ್ಥಿಕ ತಜ್ಞರು ಆರ್ಬಿಐ ಗೆ ಮನವಿ ಮಾಡಿಕೊಂಡಿದ್ದಾರೆ.

ಆರ್ ಬಿ ಐ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರಿವರ್ಸ್ ರೆಪೋ ದರದಲ್ಲಿ ಅಲ್ಪ ಏರಿಕೆ ಮಾಡುವ ನಿರೀಕ್ಷೆಯಿದೆ. ಆರ್ಥಿಕ ಚೇತರಿಕೆಗೆ ಓಮಿಕ್ರಾನ್ ವೈರಸ್ ಅಡ್ಡಿಯಾಗಬಹುದು, ಎನ್ನುವ ಕಾರಣಕ್ಕಾಗಿ ಸದ್ಯದ ಪರಿಸ್ಥಿತಿಗೆ ನಿರ್ಧಾರ ತಡೆಹಿಡಿಯುವ ಸಾಧ್ಯತೆಯೂ ಇದೆ. ಆದ್ದರಿಂದ ಗೃಹ ಸಾಲ ಪಡೆಯುವವರು ಇನ್ನೂ ಕೆಲವು ಸಮಯದವರೆಗೆ ಕಡಿಮೆ ಬಡ್ಡಿದರದ ಪ್ರಯೋಜನ ಪಡೆದುಕೊಳ್ಳುವಂತೆ ಆಗಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನಾರಾಕ್ ನ ಅಧ್ಯಕ್ಷ ಅನುಜ್ ಪುರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Chennabasappa ಜಗಜೀವನ್ ರಾಂ ಭವನದ ಕಾಮಗಾರಿ ಪರಿಶಿಲಿಸಿದ ಶಾಸಕ‌ ಎಸ್.ಎನ್.ಚನ್ನಬಸಪ್ಪ

S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು...

Shikaripura Horticulture Department ತರಕಾರಿ ಬೀಜಗಳ ‌ಕಿಟ್ ವಿತರಣೆಗೆ ಅರ್ಜಿ ಆಹ್ವಾನ

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ...

Shimoga Rangayana ಫೆಬ್ರವರಿ 13. ಶಿವಮೊಗ್ಗ ರಂಗಾಯಣ ಆಶ್ರಯದಲ್ಲಿ ” ಮೈ ಫ್ಯಾಮಿಲಿ‌” ನಾಟಕ‌ ಪ್ರದರ್ಶನ

Shimoga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಫೆ. 13 ರಂದು ಸಂಜೆ...