ಸಾಮಾನ್ಯವಾಗಿ ನಾವು ಕಷ್ಟದಲ್ಲಿರುವವರಿಗೆ ಆಟೋ ಚಾಲಕರು ಸಹಾಯ ಮಾಡಿರುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಬ್ಬರು ಆಟೋ ಹತ್ತುವ ಪ್ರಯಾಣಿಕರಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವರು ಸರಿಯಾದ ಉತ್ತರವನ್ನು ನೀಡಿದ್ದರೆ ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ, ಹಣ ಸ್ವೀಕರಿಸುವುದಿಲ್ಲ.
ಪಶ್ಚಿಮ ಬಂಗಾಳದ, ಹೌರಾ ಜಿಲ್ಲೆಯ ಲಿಲುವಾದಲ್ಲಿ ಆಟೋ ಚಾಲಕರೊಬ್ಬರು ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ‘ಕ್ವಿಜ್ ಮಾಸ್ಟರ್’ ಎಂದೇ ಪ್ರಸಿದ್ಧಿಯಾಗಿರುವ ಈತನ ಹೆಸರು ಸುರಂಜನ್ ಕರ್ಮಾಕರ್.
ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಯಾಣಿಕರು ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಪಡೆದುಕೊಳ್ಳುವುದಿಲ್ಲ.
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಇವರ ಕುರಿತು ಸಂಕಲನ್ ಸಹಕಾರ ಎಂಬುವವರು ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
“ನಾನು ಹಾಗೂ ನನ್ನ ಪತ್ನಿ ಆಟೋ ಹತ್ತಿದಾಗ, 15 ಪ್ರಶ್ನೆ ಕೇಳುತ್ತೇನೆ ಎಂದರು. ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಬಾಡಿಗೆ ಪಡೆಯುವುದಿಲ್ಲ ಎಂದು ಸುರಂಜನ್ ಹೇಳಿದರು. ನಾನು ಮೊದಲಿಗೆ, ಹೆಚ್ಚಿನ ಬಾಡಿಗೆ ಹಣ ಬೇಕಾಗಿದೆ. ಅದಕ್ಕಾಗಿ ಇವರು ಇಂತಹ ಉಪಾಯ ಮಾಡಿದ್ದಾರೆ ಎಂದುಕೊಂಡೆ. ಅದರಲ್ಲೂ ರಾಷ್ಟ್ರ ಗೀತೆ ರಚಿಸಿದವರು ಯಾರು ಎಂದು ಮೊದಲ ಪ್ರಶ್ನೆ ಕೇಳಿದಾಗ ಇನ್ನೂ ಅನುಮಾನ ಹೆಚ್ಚಾಯಿತು. ಆದರೆ, ನಂತರದಲ್ಲಿ ಕೇಳಿದ ಪ್ರಶ್ನೆ ನಿಜವೆನ್ನಿಸಿತು ಎಂದು ಸಂಕಲನ್ ತಿಳಿಸಿದ್ದಾರೆ.
ಬಳಿಕ ಅವರು ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ ಯಾರು ಎಂದು ಕೇಳಿದರು. ನಾನು ಬಿ.ಸಿ. ರಾಯ್ ಎಂದೆ. ಆದರೆ, ಆ ಉತ್ತರ ತಪ್ಪಾಗಿತ್ತು. ನಂತರ ಅವರು ಕೇಳಿದ ಪ್ರಶ್ನೆ ಕೇಳಿ ಬೆರಗಾದೆ. ವಿಕ್ರಮ ಬೇತಾಳ, ಶ್ರೀದೇವಿ ಜನ್ಮದಿನ, ಜಗತ್ತಿನ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಯಿಂದ ಹಿಡಿದು ಅವರು ಎಲ್ಲಾ ವಿಷಯಗಳನ್ನು ಕುರಿತು ಪ್ರಶ್ನೆ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಬಳಿಕ ಅವರು ನಾನು ಹೇಳಿದ ಜಾಗದಲ್ಲಿ ಬಿಟ್ಟರು. ಸುರಂಜನ್ ಗೆ ಓದುವ ಅಭ್ಯಾಸವಿದೆ. ಹಗಲಿಡೀ ದುಡಿದರೂ ರಾತ್ರಿ ಎರಡು ಗಂಟೆಯವರೆಗೆ ಓದುತ್ತಾರೆ “ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಕಲನ್ ಮಾಹಿತಿ ನೀಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.