Saturday, March 22, 2025
Saturday, March 22, 2025

ಕರ್ನಾಟಕದ ಕೈತಪ್ಪಿದ T-20 ಕಿರೀಟ

Date:

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟಿ – 20 ಟೂರ್ನಿಯ ಫೈನಲ್ ಪಂದ್ಯವು ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಪಂದ್ಯ ನಡೆಯಿತು. ಕೊನೆಯ ಎಸೆತದಲ್ಲಿ ಆಟದ ತಿರುವನ್ನೇ ಬದಲಾಯಿಸಿದ ತಮಿಳುನಾಡು ತಂಡ ಕರ್ನಾಟಕವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗಳಿಸಿಕೊಂಡಿತು.

ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಬ್ಯಾಟಿಂಗ್ ಆರಂಭಿಸಿ ಕರುಣ್ ನಾಯರ್ ,,(18). ಬಿ.ಆರ್ .ಶರತ್ (16,). ಅಭಿನವ್ ಮನೋಹರ್ (46). ಪ್ರವೀಣ್ ದುಬೆ (33). ಎಸ್ ಸುಚಿತ್ (18). ಇವರೆಲ್ಲ ಸೇರಿ ಕರ್ನಾಟಕದ ಇನ್ನಿಂಗ್ಸ್ 7 ವಿಕೆಟ್ ಪತನಕ್ಕೆ 151 ರನ್ ಕಟ್ಟಿಕೊಟ್ಟರು. ಸ್ಪಿನ್ನರ್ ಗಳ ಎದುರು ಬ್ಯಾಟಿಂಗ್ ಆಡಿದ ಕರ್ನಾಟಕ ತಂಡವು ವೈಫಲ್ಯ ಅನುಭವಿಸಿತು.

152 ರನ್ ಗಳ ಗೆಲುವಿನ ಗುರಿಯನ್ನು ಇಟ್ಟುಕೊಂಡು ಆಡಿದ ತಮಿಳುನಾಡು ತಂಡದ ಪರ ಆರಂಭಿಕ ಜೋಡಿ ನಿಶಾಂತ್ (25) ಮತ್ತು ನಾರಾಯಣ್ ಜಗದೀಶನ್ (41) ಉತ್ತಮ ಆಟವಾಡಿದರು. ಆದರೆ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ತಂಡ ಒತ್ತಡಕ್ಕೆ ಒಳಗಾಗಿತ್ತು.

ವಿಜಯ್ ಶಂಕರ್, ನಾರಾಯಣ ಜಗದೀಶನ, ಮತ್ತು ಸಂಜಯ್ ಯಾದವ್ ಅವರ ವಿಕೆಟ್ಗಳು ಉರುಳಿದಾಗ ತಂಡಕ್ಕೆ 17 ಎಸೆತಗಳಲ್ಲಿ 36 ರನ್ ಬೇಕಾಗಿತ್ತು. ಈ ಸಂದರ್ಭದಲ್ಲಿ ಮಹಮ್ಮದ್ ಅವರ ನೆರವಿನೊಂದಿಗೆ ಶಾರುಖ್ ಖಾನ್ ದಿಟ್ಟ ಆಟ ಆಡಿದರು.7 ಎಸೆತ ಬಾಕಿ ಇರುವಾಗ ಮಹಮ್ಮದ್ ಕೂಡ ಔಟಾದರು.
ಆದರೆ ಶಾರುಕ್ ಖಾನ್ ಎದೆಗುಂದಲಿಲ್ಲ. ಪ್ರತೀಕ್ ಜೈನ್ ಹಾಕಿದ 19 ನೇಯ ಓವರ್ ನಲ್ಲಿ ಗೆಲುವಿಗೆ 16 ರನ್ ಬೇಕಾಗಿತ್ತು. ಬೌಂಡರಿ ಹಾಗೂ ಸ್ಕ್ವೇರ್ ಲೆಗ್ ಮೇಲಿಂದ ಸಿಕ್ಸರ್ ಸಿಡಿಸಿ ಶಾರುಖ್ ಖಾನ್ ಸಂಭ್ರಮಿಸಿದರು. ಹಾಗೆಯೇ ತಂಡದ ಮೊತ್ತ 150 ರನ್ ದಾಟಲು ನೆರವಾದರು. ಟಿ – 20 ಪಂದ್ಯಗಳಲ್ಲಿ ಗೆಲುವು ಯಾರ ಪರ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕೊನೆಯ ಎಸೆತ ಇದ್ದಾಗ ಗೆಲುವು ಅಸಾಧ್ಯ ಅಂದುಕೊಳ್ಳುತ್ತಿದ್ದಂತೆಯೇ ಸಿಕ್ಸರ್ ಹೊಡೆದು ಪಂದ್ಯದ ಗತಿಯನ್ನೇ ಬದಲಾಯಿಸುತ್ತಾರೆ. ಅದಕ್ಕೆ ಈ ಪಂದ್ಯವೇ ರೋಚಕ ಸಾಕ್ಷಿ.

ಇಲ್ಲಿ ಆದದ್ದು ಹೀಗೆ ಕೊನೆಯ ಎಸೆತ 5 ರನ್ ಬೇಕಿತ್ತು. ಶಾರುಖಾನ್ ಸಿಕ್ಸರ್ ಎತ್ತಿ ಕರ್ನಾಟಕದ ಜಯವನ್ನು ಕಸಿದುಕೊಂಡರು.

ತಮಿಳುನಾಡು ತಂಡ ಸತತವಾಗಿ ಈ ಟ್ರೋಫಿಯನ್ನು ಎರಡನೇ ಬಾರಿಗೆ ಗೆದ್ದುಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...