Friday, April 3, 2026
Friday, April 3, 2026

ಆಡಳಿತ ಸುಧಾರಣೆಗೆ ಪ್ರಧಾನಿಯವರ ಮಹತ್ವದ ಹೆಜ್ಜೆ

Date:

ಲೋಕಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗ ಆಡಳಿತ ಸುಧಾರಣೆಯತ್ತ ನರೇಂದ್ರ ಮೋದಿಯವರ ಗಮನ ಹೆಚ್ಚಿಸಿದೆ. ತಮ್ಮ ಸರ್ಕಾರದ 77 ಮಂದಿ ಸಚಿವರನ್ನು ಎಂಟು ತಂಡಗಳಾಗಿ ವಿಂಗಡಿಸಿದ್ದಾರೆ.

ಪ್ರತಿ ತಂಡದಲ್ಲಿ 9ರಿಂದ 10 ಸಚಿವರು ಇರುವಂತೆ ನಿಗಾವಹಿಸಲಾಗಿದೆ. ಈ ತಂಡಗಳಲ್ಲಿ ಒಬ್ಬರು ಸಂಪುಟ ಸಚಿವರು ಇರಲಿದ್ದು, ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರತಿ ತಂಡವು ಒಂದು ವೆಬ್ ಪೋರ್ಟಲ್ ರಚಿಸಿ, ತಮಗೆ ಸೂಚಿಸಲಾಗಿರುವ ಆಡಳಿತ ಸುಧಾರಣಾ ಕ್ಷೇತ್ರದ ಕುರಿತು ಜನರಿಂದ ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕುತ್ತಿರಬೇಕು.
ಸಚಿವ ಸಂಪುಟ ಸಹೋದ್ಯೋಗಿಗಳು, ಕಿರಿಯ ಸಚಿವರು, ಹಿರಿಯ ಸಚಿವರು, ಒಬ್ಬರನ್ನೊಬ್ಬರು ಗೌರವಿಸಿ, ಪಕ್ಷ ಹಾಗೂ ಸರ್ಕಾರದ ಕೆಲಸಗಳನ್ನು ಸಮನ್ವಯತೆ ಸಾಧಿಸಿಕೊಳ್ಳಲು ಆದ್ಯತೆ ನೀಡಬೇಕು.
ನಿವೃತ್ತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆಡಳಿತದ ಲೋಪದೋಷಗಳ ಕುರಿತು ವಿಸ್ತೃತ ವರದಿ ಪಡೆಯಬೇಕು.
ಪ್ರತಿ ತಂಡವು ದೇಶದ ವಿವಿಧ ರಾಜ್ಯಗಳಲ್ಲಿ ನ ಎಲ್ಲಾ ಜಿಲ್ಲೆಗಳು, ರಾಜ್ಯ ಇಲಾಖೆಗಳ ಕೈಪಿಡಿ ರಚಿಸಬೇಕು. ಅದನ್ನು ಸೂಕ್ತ ಹೂಡಿಕೆದಾರರಿಗೆ ತಲುಪಿಸಿ ಹೊಸ ಯೋಜನೆಗಳನ್ನು ಘೋಷಿಸಬೇಕು ಎಂಬ ಆದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಮೂಲಕ ಜನಸ್ನೇಹಿ ಆಡಳಿತ ಸುಧಾರಣೆಗಾಗಿ ಸಚಿವರ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...