Sunday, August 23, 2026
Sunday, August 23, 2026

ಸಂತೋಷ, ಸಡಗರ ಕಳೆದುಕೊಂಡ ಹಗಲುವೇಷ

Date:

ನಮ್ಮ ಜನಪದ ಹಲವು ಕಲೆಗಳ ಅದಮ್ಯ ಉಗ್ರಾಣ ಅವುಗಳು ಹಾಡಿನ ರೂಪ, ಕುಣಿತದ ರೂಪ, ವೇಷದ ರೂಪಗಳಾಗಿ ಹೊರಹೊಮ್ಮಿವೆ. ಅಷ್ಟೇ ಅಲ್ಲ ನಮ್ಮ ಗ್ರಾಮೀಣ ಸಂಸ್ಕೃತಿಯ ಸಂಕೇತಗಳು ಆಗಿವೆ. ಹಲವು ಕಲೆಗಳು ಕೆಲವು ಜನಾಂಗಗಳಲ್ಲಿವೆ, ಕೆಲವು ಕಲೆಗಳು ಹಲವು ಜನಾಂಗದಲ್ಲಿವೆ. ಇಂತಹ ಪ್ರದರ್ಶಕ ಕಲೆಗಳಲ್ಲಿ ಹಗಲುವೇಷವು ಒಂದು. ಅಲೆಮಾರಿ ಜನಾಂಗಗಳಲ್ಲಿ ಹೆಚ್ಚಾಗಿ ಈ ಕಲೆ ಮನೆಮಾಡಿದೆ. ಹೊನ್ನಾಳಿ ಯವರಾದ ಶ್ರೀ ಈಶ್ವರಪ್ಪ ಅವರ ಪತ್ನಿ ಶ್ರೀಮತಿ ಮಂಜಳ ಹಾಗೂ ಅವರ ಬಂಧು ಲಕ್ಷ್ಮಣ್ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ನಮ್ಮ Klive ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ನೋವು-ನಲಿವು ಹಂಚಿಕೊಂಡರು. ಹಗಲುವೇಷ ಕಲೆಯು ಅವರ ಹಬ್ಬದ ಆಚರಣೆಯ ಒಂದು ಭಾಗ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಗಲು ವೇಷ ಧರಿಸಿ ಊರು-ಊರು ಅಲೆಯುತ್ತಾರೆ. ಇಂತಹ ಕಲಾವಿದರನ್ನು ಬೀದಿಯಲ್ಲಿ ಕಂಡ ಕಲಾರಸಿಕರು ತಮ್ಮ ಕೈಲಾದ ಕಾಣಿಕೆ ನೀಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಹಗಲುವೇಷ ಇಲ್ಲದ ಸಂದರ್ಭದಲ್ಲಿ ಕೂಲಿ, ಕೃಷಿ, ವ್ಯಾಪಾರ ಮುಂತಾದ ವೃತ್ತಿಗಳಲ್ಲಿ ಜೀವನೋಪಾಯ ಕಂಡುಕೊಳ್ಳುತ್ತಾರೆ. ನಶಿಸಿಹೋಗುವ ಆತಂಕದಲ್ಲಿದೆ ಈ ಕಲಾಪ್ರಕಾರ.ಉಳಿಸಬೇಕೆ? ಬೆಳೆಸಬೇಕೆ? ಜನಪದ ವಿದ್ವಾಂಸರು ಈ ಬಗ್ಗೆ ಚರ್ಚಿಸಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...