Saturday, September 28, 2024
Saturday, September 28, 2024

ಪುನೀತ್! ಅನನ್ಯ ಸಾಂಸ್ಕೃತಿಕ ಸಿರಿ

Date:

ಪುನೀತ್ ..! ಹೆಸರೇ ಈಗ ಸ್ಫೂರ್ತಿದಾಯಕ. ಚಿತ್ರ ರಸಿಕರ ಚಿನ್ನ.
ಯುವರತ್ನ,ದೊಡ್ಮನೆ ಹುಡುಗ ,ವೀರಕನ್ನಡಿಗ.
ಪುನೀತರ ಪುಣ್ಯಾರಾಧನೆಗೆ ಜನಸಾಗರ. ಪುಣ್ಯಸ್ಮರಣೆಯ‌ ದಿನ
ಅನ್ನ ದಾಸೋಹ. ಸಹಸ್ರಸಹಸ್ರ ಅಭಿಮಾನಿಗಳ ಮಹಾಪೂರ.
ಒಬ್ಬ ಕಲಾವಿದ, ಪುಟ್ಟ ಅವಧಿಯಲ್ಲೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ. ಎಂದರೆ ಅದು ಸಾಂಸ್ಕೃತಿಕ ದಾಖಲೆ.
ನಟ ಸಾರ್ವಭೌಮ ಡಾ.ರಾಜ್ ಕುಟುಂಬದಲ್ಲಿ ವಿಶಿಷ್ಟವಾಗಿ ಬೆಳೆದ ಕುಡಿ. ಬಹಳ ಬೇಗ. ವಿಧಿ ಅವರನ್ನ ಕೊಂಡೊಯ್ದ. ಆದರೆ
ಇದು .ಕನ್ನಡ ಚಿತ್ರ ರಸಿಕರಿಗೆ ಒಂದು ದೊಡ್ಡ ಆಘಾತ.
ಪುನೀತರ ಪುಣ್ಯಾರಾಧನೆಯ ದಿನ ಕಿಂಚಿತ್ತೂ ಕಿರಿಕಿರಿಯಿಲ್ಲ.ಸುಮಾರು ಮೂವತ್ತು ಸಹಸ್ರಕ್ಕೂ ಮೀರಿದ ಮಂದಿ ಊಟ ಸ್ವೀಕರಿಸಿದರು.
ಎಲ್ಲವೂ ಶಿಸ್ತುಬದ್ಧ.
ನಮನ್ನ ಥಟ್ಟನೆ ಸೆಳೆದ ಸಂಗತಿ.ನೇತ್ರದಾನಮಾಡಿದ ಮಹಾನುಭಾವರ ಸಂಖ್ಯೆ ಮೂರುಸಾವಿರದ ನೂರು!.ಈ ಬಗ್ಗೆ
ಶ್ರೀ ಪ್ರಕೃತಿ ಪಸನ್ನ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ದೇಶದಲ್ಲೇ ಇದೊಂದು ದಾಖಲೆಯಂತೆ.
ಮುನ್ನೂರೈವತ್ತು ಮಿಕ್ಕಿ ಜನ ರಕ್ತದಾನ ಮಾಡಿದರು.ಪುನೀತರ ಹಿರಿಯಣ್ಣ ಶಿವರಾಜ್ ಕುಮಾರ್ ಅದರಲ್ಲಿ ಮುಂಚೂಣಿಯಲ್ಲಿದ್ದರು.
ಓರ್ವ ಕಲಾವಿದ ,ನಾಡಿನ ಹೃದಯ ಗೆದ್ದು ಮಾಡಬಹುದಾದ ಅಪರೂಪದ ಘಟನೆ. ಎಂದೆಂದೂ ಕರ್ನಾಟಕದ ಜನಮನದಲ್ಲಿ ಪುನೀತರದು ಚಿರಸ್ಥಾಯಿ ಹೆಸರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...