Wednesday, March 19, 2025
Wednesday, March 19, 2025

ಕುಚೇಷ್ಟೆಯ ಚೀನಾ ಕುತಂತ್ರಗಳು

Date:

ಅತಿಕ್ರಮಣ ಮನಸ್ಥಿತಿಯೊಂದಿಗೆ ಯಾವಾಗಲೂ ಬೇರೆ ದೇಶಗಳೊಂದಿಗೆ ಜಗಳವಾಡುವ ಚೀನಾ ಪರಮಾಣು ಅಸ್ತ್ರಗಳನ್ನು ಹೇರಳವಾಗಿ ಸಂಗ್ರಹಿಸುತ್ತಿದೆ.
2020ರಲ್ಲಿ ಪೂರ್ವ ಲಡಾಕ್ ನಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದರು. ಅತಿಕ್ರಮಣಕ್ಕೆ ಯತ್ನಿಸಿ, ವಿಫಲವಾಗಿದ್ದರು. ನಂತರ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಳೆದ ವರ್ಷ ಘರ್ಷಣೆ ವೇಳೆ ಪಶ್ಚಿಮ ಹಿಮಾಲಯ ಪ್ರಾಂತ್ಯದಲ್ಲಿನ ಗೋಪಿ ಸ್ಥಳಗಳಲ್ಲಿ ಚೀನಾ ಮಿಲಿಟರಿಯು ಫೈಬರ್ ಆಪ್ಟಿಕ್ ಜಾಲವನ್ನು ಅಳವಡಿಸಿತ್ತು ಎಂದು ಪೆಂಟಗಾನ್ ವರದಿ ಹೇಳಿದೆ.
ತನ್ನ ಸೈನಿಕರು ಶೀಘ್ರವಾಗಿ ಸಂವಹನ ನಡೆಸಲು ಉಪಯುಕ್ತವಾಗುವಂತೆ ಈ ಜಾಲವನ್ನು ಬಳಸಲಾಗಿತ್ತು ಎನ್ನಲಾಗಿದೆ. ಅಮೆರಿಕದ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವುದರಿಂದ ಭಾರತದ ಬಗ್ಗೆ ಚೀನಾಗೆ ಅಸಮಾಧಾನ ಇದೆ. ಇದೇ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ತರದ ಗಡಿ ತಂಟೆ ಗಳು ಉಂಟಾಗಬಹುದು ಎಂದು ಪೆಂಟಗಾನ್ ಎಚ್ಚರಿಸಿದೆ.
ಹೀಗೆ ಚೀನಾದ ಅಣ್ವಸ್ತ್ರ ಸಂಗ್ರಹ ಮುಂದುವರೆದಲ್ಲಿ 2030ರ ವೇಳೆಗೆ ಸಾವಿರ ಪರಮಾಣು ಸಿಡಿತಲೆಗಳನ್ನು ‘ಡ್ರ್ಯಾಗನ್’ ರಾಷ್ಟ್ರದ ಮಿಲಿಟರಿ ಹೊಂದಿರಲಿದೆ. ಇದು ಯಾವುದೇ ವಿದೇಶಿ ರಾಷ್ಟ್ರದ ಮೇಲೆ ಯುದ್ಧ ಸಾರಿ, ಕ್ಷಣಮಾತ್ರದಲ್ಲಿ ಅಣ್ವಸ್ತ್ರ ದಾಳಿ ನಡೆಸುವ ಅಪಾಯವನ್ನು ಸೂಚಿಸುತ್ತದೆ. ಅತಿಕ್ರಮಣ ಮನಸ್ಥಿತಿಯ ಚೀನಾ ಬಳಿ ಇಷ್ಟೊಂದು ಹಣ ವಸ್ತುಗಳು ಇರುವುದು ಜಗತ್ತಿಗೆ ಕಂಟಕ ಎಂದು ವರದಿ ಹೇಳಲಾಗಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ನೂತನ ಗ್ರಾಮವೊಂದನ್ನು ನಿರ್ಮಿಸಿದೆ ಎಂಬುದನ್ನು ಅಮೆರಿಕ ರಕ್ಷಣಾ ಇಲಾಖೆಯ ವರದಿ ಸಹ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಅರುಣಾಚಲ ಪ್ರದೇಶಗಳಲ್ಲಿ ನೂರು ಮನೆಗಳ ಗ್ರಾಮವನ್ನು ನಿರ್ಮಿಸುವ ಮೂಲಕ ಚೀನಾ ಉದ್ದಟತನ ಮೆರೆದಿದೆ ಇಂದು ಭಾರತದಲ್ಲಿ ವರದಿಯಾಗಿತ್ತು. ಈಗ ಇದನ್ನು ಅಮೆರಿಕ ರಕ್ಷಣಾ ಇಲಾಖೆಯು ಸಂಸತ್ತಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. “ಡಿಬೇಟ ಪ್ರದೇಶ ಹಾಗೂ ಅರುಣಾಚಲಪ್ರದೇಶದ ಮಧ್ಯೆಯಿರುವ ವಿವಾದಿತ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದೆ”ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...