Sunday, July 13, 2025
Sunday, July 13, 2025

ಕುಚೇಷ್ಟೆಯ ಚೀನಾ ಕುತಂತ್ರಗಳು

Date:

ಅತಿಕ್ರಮಣ ಮನಸ್ಥಿತಿಯೊಂದಿಗೆ ಯಾವಾಗಲೂ ಬೇರೆ ದೇಶಗಳೊಂದಿಗೆ ಜಗಳವಾಡುವ ಚೀನಾ ಪರಮಾಣು ಅಸ್ತ್ರಗಳನ್ನು ಹೇರಳವಾಗಿ ಸಂಗ್ರಹಿಸುತ್ತಿದೆ.
2020ರಲ್ಲಿ ಪೂರ್ವ ಲಡಾಕ್ ನಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದರು. ಅತಿಕ್ರಮಣಕ್ಕೆ ಯತ್ನಿಸಿ, ವಿಫಲವಾಗಿದ್ದರು. ನಂತರ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಳೆದ ವರ್ಷ ಘರ್ಷಣೆ ವೇಳೆ ಪಶ್ಚಿಮ ಹಿಮಾಲಯ ಪ್ರಾಂತ್ಯದಲ್ಲಿನ ಗೋಪಿ ಸ್ಥಳಗಳಲ್ಲಿ ಚೀನಾ ಮಿಲಿಟರಿಯು ಫೈಬರ್ ಆಪ್ಟಿಕ್ ಜಾಲವನ್ನು ಅಳವಡಿಸಿತ್ತು ಎಂದು ಪೆಂಟಗಾನ್ ವರದಿ ಹೇಳಿದೆ.
ತನ್ನ ಸೈನಿಕರು ಶೀಘ್ರವಾಗಿ ಸಂವಹನ ನಡೆಸಲು ಉಪಯುಕ್ತವಾಗುವಂತೆ ಈ ಜಾಲವನ್ನು ಬಳಸಲಾಗಿತ್ತು ಎನ್ನಲಾಗಿದೆ. ಅಮೆರಿಕದ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವುದರಿಂದ ಭಾರತದ ಬಗ್ಗೆ ಚೀನಾಗೆ ಅಸಮಾಧಾನ ಇದೆ. ಇದೇ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ತರದ ಗಡಿ ತಂಟೆ ಗಳು ಉಂಟಾಗಬಹುದು ಎಂದು ಪೆಂಟಗಾನ್ ಎಚ್ಚರಿಸಿದೆ.
ಹೀಗೆ ಚೀನಾದ ಅಣ್ವಸ್ತ್ರ ಸಂಗ್ರಹ ಮುಂದುವರೆದಲ್ಲಿ 2030ರ ವೇಳೆಗೆ ಸಾವಿರ ಪರಮಾಣು ಸಿಡಿತಲೆಗಳನ್ನು ‘ಡ್ರ್ಯಾಗನ್’ ರಾಷ್ಟ್ರದ ಮಿಲಿಟರಿ ಹೊಂದಿರಲಿದೆ. ಇದು ಯಾವುದೇ ವಿದೇಶಿ ರಾಷ್ಟ್ರದ ಮೇಲೆ ಯುದ್ಧ ಸಾರಿ, ಕ್ಷಣಮಾತ್ರದಲ್ಲಿ ಅಣ್ವಸ್ತ್ರ ದಾಳಿ ನಡೆಸುವ ಅಪಾಯವನ್ನು ಸೂಚಿಸುತ್ತದೆ. ಅತಿಕ್ರಮಣ ಮನಸ್ಥಿತಿಯ ಚೀನಾ ಬಳಿ ಇಷ್ಟೊಂದು ಹಣ ವಸ್ತುಗಳು ಇರುವುದು ಜಗತ್ತಿಗೆ ಕಂಟಕ ಎಂದು ವರದಿ ಹೇಳಲಾಗಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ನೂತನ ಗ್ರಾಮವೊಂದನ್ನು ನಿರ್ಮಿಸಿದೆ ಎಂಬುದನ್ನು ಅಮೆರಿಕ ರಕ್ಷಣಾ ಇಲಾಖೆಯ ವರದಿ ಸಹ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಅರುಣಾಚಲ ಪ್ರದೇಶಗಳಲ್ಲಿ ನೂರು ಮನೆಗಳ ಗ್ರಾಮವನ್ನು ನಿರ್ಮಿಸುವ ಮೂಲಕ ಚೀನಾ ಉದ್ದಟತನ ಮೆರೆದಿದೆ ಇಂದು ಭಾರತದಲ್ಲಿ ವರದಿಯಾಗಿತ್ತು. ಈಗ ಇದನ್ನು ಅಮೆರಿಕ ರಕ್ಷಣಾ ಇಲಾಖೆಯು ಸಂಸತ್ತಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. “ಡಿಬೇಟ ಪ್ರದೇಶ ಹಾಗೂ ಅರುಣಾಚಲಪ್ರದೇಶದ ಮಧ್ಯೆಯಿರುವ ವಿವಾದಿತ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದೆ”ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Miss Universe Karnataka ಚಿಕ್ಕಮಗಳೂರಿನ ಕು.ವಂಶಿ ಅವರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಪುರಸ್ಕಾರ

Miss Universe Karnataka ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ...

Department of Agriculture ಶೇ 48. ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಬೇಕೆಂಬ ಮನವಿಯನ್ನ ಪರಿಶೀಲಿಸಲಾಗುತ್ತದೆ- ಸಚಿವ ಶಿವಾನಂದ ಪಾಟೀಲ್

Department of Agriculture ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಹತೆಗಳಲ್ಲಿ‌ ತಿದ್ದುಪಡಿ ಆದೇಶ

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಗಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು,...

University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ...