Sunday, July 26, 2026
Sunday, July 26, 2026

ಕುಚೇಷ್ಟೆಯ ಚೀನಾ ಕುತಂತ್ರಗಳು

Date:

ಅತಿಕ್ರಮಣ ಮನಸ್ಥಿತಿಯೊಂದಿಗೆ ಯಾವಾಗಲೂ ಬೇರೆ ದೇಶಗಳೊಂದಿಗೆ ಜಗಳವಾಡುವ ಚೀನಾ ಪರಮಾಣು ಅಸ್ತ್ರಗಳನ್ನು ಹೇರಳವಾಗಿ ಸಂಗ್ರಹಿಸುತ್ತಿದೆ.
2020ರಲ್ಲಿ ಪೂರ್ವ ಲಡಾಕ್ ನಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದರು. ಅತಿಕ್ರಮಣಕ್ಕೆ ಯತ್ನಿಸಿ, ವಿಫಲವಾಗಿದ್ದರು. ನಂತರ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಳೆದ ವರ್ಷ ಘರ್ಷಣೆ ವೇಳೆ ಪಶ್ಚಿಮ ಹಿಮಾಲಯ ಪ್ರಾಂತ್ಯದಲ್ಲಿನ ಗೋಪಿ ಸ್ಥಳಗಳಲ್ಲಿ ಚೀನಾ ಮಿಲಿಟರಿಯು ಫೈಬರ್ ಆಪ್ಟಿಕ್ ಜಾಲವನ್ನು ಅಳವಡಿಸಿತ್ತು ಎಂದು ಪೆಂಟಗಾನ್ ವರದಿ ಹೇಳಿದೆ.
ತನ್ನ ಸೈನಿಕರು ಶೀಘ್ರವಾಗಿ ಸಂವಹನ ನಡೆಸಲು ಉಪಯುಕ್ತವಾಗುವಂತೆ ಈ ಜಾಲವನ್ನು ಬಳಸಲಾಗಿತ್ತು ಎನ್ನಲಾಗಿದೆ. ಅಮೆರಿಕದ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವುದರಿಂದ ಭಾರತದ ಬಗ್ಗೆ ಚೀನಾಗೆ ಅಸಮಾಧಾನ ಇದೆ. ಇದೇ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ತರದ ಗಡಿ ತಂಟೆ ಗಳು ಉಂಟಾಗಬಹುದು ಎಂದು ಪೆಂಟಗಾನ್ ಎಚ್ಚರಿಸಿದೆ.
ಹೀಗೆ ಚೀನಾದ ಅಣ್ವಸ್ತ್ರ ಸಂಗ್ರಹ ಮುಂದುವರೆದಲ್ಲಿ 2030ರ ವೇಳೆಗೆ ಸಾವಿರ ಪರಮಾಣು ಸಿಡಿತಲೆಗಳನ್ನು ‘ಡ್ರ್ಯಾಗನ್’ ರಾಷ್ಟ್ರದ ಮಿಲಿಟರಿ ಹೊಂದಿರಲಿದೆ. ಇದು ಯಾವುದೇ ವಿದೇಶಿ ರಾಷ್ಟ್ರದ ಮೇಲೆ ಯುದ್ಧ ಸಾರಿ, ಕ್ಷಣಮಾತ್ರದಲ್ಲಿ ಅಣ್ವಸ್ತ್ರ ದಾಳಿ ನಡೆಸುವ ಅಪಾಯವನ್ನು ಸೂಚಿಸುತ್ತದೆ. ಅತಿಕ್ರಮಣ ಮನಸ್ಥಿತಿಯ ಚೀನಾ ಬಳಿ ಇಷ್ಟೊಂದು ಹಣ ವಸ್ತುಗಳು ಇರುವುದು ಜಗತ್ತಿಗೆ ಕಂಟಕ ಎಂದು ವರದಿ ಹೇಳಲಾಗಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ನೂತನ ಗ್ರಾಮವೊಂದನ್ನು ನಿರ್ಮಿಸಿದೆ ಎಂಬುದನ್ನು ಅಮೆರಿಕ ರಕ್ಷಣಾ ಇಲಾಖೆಯ ವರದಿ ಸಹ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಅರುಣಾಚಲ ಪ್ರದೇಶಗಳಲ್ಲಿ ನೂರು ಮನೆಗಳ ಗ್ರಾಮವನ್ನು ನಿರ್ಮಿಸುವ ಮೂಲಕ ಚೀನಾ ಉದ್ದಟತನ ಮೆರೆದಿದೆ ಇಂದು ಭಾರತದಲ್ಲಿ ವರದಿಯಾಗಿತ್ತು. ಈಗ ಇದನ್ನು ಅಮೆರಿಕ ರಕ್ಷಣಾ ಇಲಾಖೆಯು ಸಂಸತ್ತಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. “ಡಿಬೇಟ ಪ್ರದೇಶ ಹಾಗೂ ಅರುಣಾಚಲಪ್ರದೇಶದ ಮಧ್ಯೆಯಿರುವ ವಿವಾದಿತ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದೆ”ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಮಹಿಳೆಯರ ಆರ್ಥಿಕ ಸ್ವಾವಲಂಬನೆಯು ದೇಶದ ಅಭಿವೃದ್ಧಿಗೆ ಪೂರಕ- ಡಾ.ಹೆಚ್.ಬಿ.ಮಂಜುನಾಥ್,ದಾವಣಗೆರೆ.

Shivamogga News ದಾವಣಗೆರೆ.ಜು. 24. ಆರ್ಥಿಕ ಶಿಸ್ತು ಮಹಿಳೆಯರಲ್ಲಿ ತುಸು ಹೆಚ್ಚು,...

Gruhalakshmi Yojana ಗೃಹಲಕ್ಷ್ಮಿ ಯೋಜನೆ ನವೀಕರಣ: ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ. ಜನರು ಸಹಕರಿಸಿ- ಹೆಚ್.ಎಂ.ಮಧು.

Gruhalakshmi Yojana ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದ್ದು, ಗೃಹಲಕ್ಷಿö್ಮ ಯೋಜನೆಯಡಿ...

Canara Bank ಹೊಳಲೂರಿನ ಸಿಬಿಆರ್ ಎಸ್ಇಟಿಐ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಮತ್ತು ಉದ್ಯಮಶೀಲತಾ ಕಾರ್ಯಕ್ರಮ.

Canara Bank ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ...

World Environment Day ಜನ್ಮದಿನಾಚರಣೆಗೆ ಕೇಕ್ ಕತ್ತರಿಸಬೇಡಿ.ಒಂದು ಗಿಡ ನೆಡಿ- ಡಾ. ನಾಗರಾಜ್. ‌ಪರಿಸರ

World Environment Day ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ವತಿಯಿಂದ...