Friday, February 14, 2025
Friday, February 14, 2025

ಸೇವೆಗೆ ಸಿದ್ಧ ಪಡಿಸಿದ ಮಾದರಿ : ಡಾ.ಶ್ರೀ ವೀರೇಂದ್ರ ಹೆಗ್ಗಡೆ

Date:

ಭಾರತೀಯ ಪರಂಪರೆಯಲ್ಲಿ ಅನೇಕ ಮಠ-ಮಾನ್ಯ, ಸಂಘ-ಸಂಸ್ಥೆಗಳು, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ, ಸಾಧುಸಂತರು, ಸಾರ್ವಜನಿಕ ಮುಖಂಡರು, ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಹ ತಾರ ಸಮೂಹದಲ್ಲಿ ಹೊಳೆಯುವವರಲ್ಲಿ ನಮ್ಮ ಹೆಮ್ಮೆಯ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರು.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಉಜಿರೆಯಲ್ಲಿ ಮುಗಿಸಿದ ನಂತರ , ಬೆಂಗಳೂರಿನ ಕಾಲೇಜು ಶಿಕ್ಷಣವನ್ನು ಪೂರೈಸಿದರು.

1968ರಲ್ಲಿ ತಂದೆ ಶ್ರೀ. ರತ್ನವರ್ಮ ಹೆಗ್ಗಡೆ ತರುವಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ದ 20 ನೇ ಧರ್ಮಾಧಿಕಾರಿಯಾದರು. ಆಗಿನ್ನೂ ಅವರಿಗೆ ವಯಸ್ಸು ಕೇವಲ 21 ವರ್ಷ. ತಾರುಣ್ಯದಲ್ಲೇ ಸಮಾಜ ಸೇವೆಯ ಬಗ್ಗೆ ಡಾ.ವೀರೇಂದ್ರ ತರತರಹದ ಆಸಕ್ತಿ ಬೆಳೆಸಿಕೊಂಡಿದ್ದರು. ಸಾಮಾಜಿಕ ಪ್ರಗತಿಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಾ ಬಂದರು. ಅದರ ಫಲವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಆರಂಭಿಸಿದರು. 1982 ರಿಂದಲೂ ಈ ಯೋಜನೆಗಳು ಗ್ರಾಮೀಣರಿಗೆ,ಜನಸಾಮಾನ್ಯರಿಗೆ ಸಹಾಯಕವಾಗಿವೆ.
ಕೃಷಿ ಅಭಿವೃದ್ಧಿ,ಸಮುದಾಯದ ಹಿತ ಚಿಂತನೆ, ಅವರ ವಿಶಿಷ್ಟ ಗುಣಗಳಾಗಿವೆ. ಅವರು ಈ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಭಾರತ ಸರ್ಕಾರವು ಅವರ ಈ ಸಮಾಜ ಸೇವೆ ಗುರುತಿಸಿ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 1985 ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
1994 ರಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ದೊರಕಿದೆ. ಇಷ್ಟಲ್ಲದೆ ಇನ್ನಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
ಸಮಾಜಸೇವೆಗೆ ಯಾರೇ ಪ್ರವೇಶ ಮಾಡಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಾಧನೆ ಸಿದ್ಧಪಡಿಸಿದ ಮಾದರಿಯಾಗಿದೆ. ಇದೀಗ ತಾನೆ ಶ್ರೀ ಕ್ಷೇತ್ರ ಧರ್ಮಾಧಿಕಾರಿಯಾಗಿ 54 ಸಾರ್ಥಕ ಸಂವತ್ಸರಗಳನ್ನ ಪೂರೈಸಿರುವ ಅವರಿಗೆ ಶ್ರೀ ಮಂಜುನಾಥೇಶ್ವರನು ಸಕಲ ಆಯುರಾರೋಗ್ಯ ಭಾಗ್ಯಗಳ್ಳನ್ನ ನೀಡಲಿ ಎಂಬುವುದೇ ನಮ್ಮ ಆಶಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಅತ್ಯುತ್ತಮ‌ ರೋಟರಿ ನಾಯಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ರಮ

Rotary Shivamogga ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ...

Shivamogga City Corporation ಕೆಎಫ್ ಡಿ ಬಗ್ಗೆ ಅರಿವು ಮೂಡಿಸಿ,ಪ್ರಕರಣ ಹೆಚ್ಚದಂತೆ ಗಮನವಹಿಸಿ- ವಿ.ಎಸ್.ರಾಜೀವ್

Shivamogga City Corporation ಶಿವಮೊಗ್ಗ ತಾಲ್ಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚದಂತೆ...

Rapido Bike ಶಿವಮೊಗ್ಗಕ್ಕೂ ಎಂಟ್ರಿ ಕೊಟ್ಟ ರ್ಯಾಪಿಡೊ ಬೈಕ್

Rapido Bike ಶಿವಮೊಗ್ಗ ನಗರದಲ್ಲಿ ರ್ಯಾಪಿಡೋ ಬೈಕ್ ಓಡಾಟ ಶುರುವಾಗಿದೆ.ರ್ಯಾಪಿಡೋ...