Thursday, September 10, 2026
Thursday, September 10, 2026

ಬಾಂಗ್ಲಾ 12 ರ ಘಟ್ಟಕ್ಕೆ ಲಗ್ಗೆ

Date:

ಅಲ್ ಅಮೆರತ್ ಒಮನ್ ನಲ್ಲಿ ನಡೆದ. ಟಿ – 20 ವಿಶ್ವಕಪ್ ಟೂರ್ನಿಯು ಪಪುವ ನ್ಯೂಗಿನಿ ಮತ್ತು ಬಾಂಗ್ಲಾದೇಶ ನಡುವೆ ಬಿ.ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವು ನ್ಯೂಗಿನಿ ತಂಡದ ವಿರುದ್ಧ 84 ರನ್ ಗಳ ಮೂಲಕ ಭರ್ಜರಿ ಜಯಗಳಿಸಿ.ಟೂರ್ನಿಯ ಸೂಪರ್ 12 ರ ಘಟ್ಟ ಪ್ರವೇಶಿಸಿದೆ.
ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 182 ರನ್ ಬಾರಿಸಿತು. 182 ರನ್ ಗಳನ್ನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿದ ಪಪುವ ನ್ಯೂಗಿನಿ ತಂಡವು 97 ರನ್ ಗಳಿಗೆ ಆಲೌಟ್ ಆಯಿತು.
ಶಕೀಬ್ ಅಲ್ ಹಸನ್ ಭರ್ಜರಿ ಆಟದಲ್ಲಿ 4 ವಿಕೆಟ್ ಗಳನ್ನು ಪಡೆದು ಮಿಂಚಿ ಬಾಂಗ್ಲಾದೇಶವನ್ನು ಗೆಲುವಿನ ಹಾದಿ ಕಡೆಗೆ ಕರೆದೊಯ್ದರು.ಬಾಂಗ್ಲಾದೇಶವು ಮೊದಲನೇ ಓವರ್ ನಲ್ಲೇ ಆಘಾತ ಕಂಡು. ನಾಯಕ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಅಲ್ ಹಸನ್ ರವರು ಅಂಕಣಕ್ಕೆ ಇಳಿದರು. ನಾಯಕ ಮೊಹಮ್ಮದ್ದುಲ್ಲ ಭರ್ಜರಿ ಆಟದಿಂದ ಮಿಂಚಿ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅವರು ಕೊನೆಯ 5 ಓವರ್ ಗಳಲ್ಲಿ 68 ರನ್ ಕಲೆ ಹಾಕುವ ಮೂಲಕ ತಂಡವು ಉತ್ತಮ ಮೊತ್ತ ಗಳಿಸಲು ನೆರವಾದರು.ಹಾಗೆಯೇ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಜೊತೆಯಾಟದಿಂದಾಗಿ ಬಾಂಗ್ಲಾದೇಶ ಪವರ್ ಪ್ಲೇ ಮುಕ್ತಾಯದ ವೇಳೆ 45 ರನ್ ಗಳಿಸಿ. ಗೆಲುವಿನ ದಡ ಸೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...