Wednesday, July 16, 2025
Wednesday, July 16, 2025

ಚಂಪಕ ಸರಸ್ಸುಗೆ ಚಂದದ ರೂಪಕೊಟ್ಟ ಯಶೋಮಾರ್ಗ

Date:

ಕೆಳದಿ ಅರಸ ವೆಂಕಟಪ್ಪ ನಾಯಕರು ಚಂಪಕ ಎಂಬ ಪ್ರೇಯಸಿ ಸವಿ ನೆನಪಿಗಾಗಿ ನಿರ್ಮಿಸಿದ ಕೊಳ ಅದೆ ಇಂದಿನ ಚಂಪಕ ಸರಸ್ಸು. ಈ ಕೊಳ ಬಿರು ಬೇಸಿಗೆಯಲ್ಲಿ ತುಂಬಿ ತುಳುಕುತ್ತಿರುತ್ತದೆ. ಆನಂದಪುರಂ ಸನಿಹದಲ್ಲಿರುವ ಈ ಕೊಳ ಎತ್ತರದ ಪ್ರದೇಶದಲ್ಲಿದೆ.
ಈ ಕೊಳವು ಕಲ್ಯಾಣಿಯ ವಿನ್ಯಾಸದಲ್ಲಿದ್ದು, ಈ ಕೊಳಕ್ಕೆ ಚಂಪಕ ಸರಸ್ಸು ಅಲ್ಲದೆ ಮಹಂತೇಶ್ವರ ಮಠ, ಮಹಾಂತ ಮಠ, ಮಹಾಂತ ಮಠದ ಕೊಳ ಎಂದು ಜನಜನಿತವಾಗಿದೆ.
ಇತ್ತೀಚಿಗೆ ಈ ಕೊಳವನ್ನು ನಟ ಯಶ್ ಅವರ ನೇತೃತ್ವದಲ್ಲಿ ಯಶೋಮಾರ್ಗ ಸಂಸ್ಥೆಯ ವತಿಯಿಂದ ಸ್ವಚ್ಛ ಗೊಳಿಸುವ ಪುನರುಜ್ಜೀವನ ಯೋಜನೆ ಕೈಗೊಂಡಿದೆ. ಕೊಳದ ಮಧ್ಯದಲ್ಲಿ ಸುಂದರವಾದ ನಂದಿಮಂಟಪ, ಆ ಮಂಟಪ ತಲುಪಲು ಶಿಲಾ ಸೇತುವೆ ಇದ್ದು, ಇದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ಆಕರ್ಷಣೆಯ ತಾಣವಾಗಿದೆ.
ಇಂತಹ ಸುಂದರ ಕೊಳವನ್ನು ಯಶೋಮಾರ್ಗ ಸಂಸ್ಥೆಯ ಹೈದರಾಬಾದ್ ನ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಚಂಪಕ ಸರಸ್ಸು ಅಭಿವೃದ್ಧಿಗೆ ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಿಂದೆ ಕೆರೆಗಳ ಅಭಿವೃದ್ಧಿ ಕುರಿತು ಅವರೊಂದಿಗೆ ಚರ್ಚಿಸಿದಾಗ, ನಟ ಯಶ್ ರವರಿಗೆ ಚಂಪಕ ಸರಸ್ಸು ಕೊಳದ ಬಗ್ಗೆ ಪ್ರಸ್ತಾಪಿಸಿದ್ದೆವು. ಈಗ ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ದಿ ಪಡಿಸಿರುವುದು ಸಂತಸದ ವಿಚಾರ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...