Monday, August 3, 2026
Monday, August 3, 2026
Home Blog Page 2075

ಹುಷಾರಿ ! ಹೋಟೆಲ್ ಬಿಲ್ ದುಬಾರಿ…

0

ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈಗ ಹೋಟೆಲ್ ತಿಂಡಿ ತಿನಿಸುಗಳ ದರವನ್ನು ಏರಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

ರಾಜ್ಯದ್ಯಂತ ನವಂಬರ್ 8 ರ ಬಳಿಕ ಶೇ.15 ರಿಂದ 20 ರಷ್ಟು ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ದೋಸೆ, ಇಡ್ಲಿ ಇತ್ಯಾದಿ ತಿನಿಸುಗಳ ಬೆಲೆಯಲ್ಲಿ 5 ರುಪಾಯಿ ಏರಿಕೆಯಾಗುವ ಸಂಭವವಿದ್ದು ಆಹಾರ ಪ್ರಿಯರಿಗೆ ಇದು ಹೊರೆಯಾಗಲಿದೆ.

ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್ ದರ ನವೆಂಬರ್ 1ರಂದು ಏಕಾಏಕಿ 266 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ತೀವ್ರ ಪರಿಣಾಮ ಬೀರಿದೆ ರಸ್ತೆಬದಿಯ ಫಾಸ್ಟ್ ಫುಡ್ ಮಳಿಗೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ.

ಈಗ ಪ್ರತೀ ಸಿಲಿಂಡರ್ ಬೆಲೆ 2063 ರೂಪಾಯಿ ಇದೆ ಹೋಟೆಲ್ಗಳಲ್ಲಿ ಅತಿ ಹೆಚ್ಚು ಖರ್ಚು ಬರುವುದರಲ್ಲಿ ಅಡುಗೆ ಅನಿಲ ಕೂಡ ಒಂದು. ನಾವು ತಿಂಡಿತಿನಿಸು ದರ ಏರಿಕೆ ಮಾಡದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

ನೂರು ದಿನ ನೂರಾರು ತಲ್ಲಣ

0

“ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೆ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುವೆ ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ತಮ್ಮ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳ ಆಡಳಿತ ಪೂರೈಸಿರುವುದು ದೊಡ್ಡ ಮೈಲಿಗಳು ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಪರ ನಡೆ ಹೇಗಿರಲಿದೆ ಎಂಬುದರ ದಿಕ್ಸೂಚಿಯಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ದಿನಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ, ಅಮೃತ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ. ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದ್ದು, ಮುಂದೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ವ್ಯವಸ್ಥೆಯ ಸುಧಾರಣೆಯ ಜೊತೆಗೆ, ಜನರ ಬಳಿಯೇ ಸರ್ಕಾರ ಹಾಗೂ ಯೋಚನೆಗಳು ಹೋಗಬೇಕಿವೆ. ಆರ್ಥಿಕ ಬೆಳವಣಿಗೆಗೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಪರಿಶಿಷ್ಟರು ಹಿಂದುಳಿದ ವರ್ಗದವರು ಬಡವರು ಹಾಗೂ ಮಹಿಳೆಯರನ್ನು ತಲಾ ಆದಾಯ ಏರಿಕೆಗಾಗಿ ಒಳಪಡಿಸಿಕೊಳ್ಳಬೇಕು. ಅದಕ್ಕಾಗಿ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಎಂಪಿಎಂ ಕಾರ್ಮಿಕರ ರಕ್ಷಣೆಗೆ ಸಂಸದರ ಯತ್ನ

0

ಭದ್ರಾವತಿಗೆ ಉಕ್ಕು ಮತ್ತು ಕಾಗದ ಕಾರ್ಖಾನೆಗಳು ಅರಿಶಿನ ಕುಂಕುಮಗಳೆನಿಸಿದ್ದವು.
ಆದರೆ ಕಾಗದ ಕಾರ್ಖಾನೆ ಬೀಗಜಡಿದು ಕಾರ್ಮಿಕರ ಬಾಳು ಈಗ ಮೂರಾಬಟ್ಟೆಯಾಗಿದೆ. ಎಂಪಿಎಂ ಎಂದೇ ಖ್ಯಾತಿ ಪಡೆದ ಕಾಗದ ಕಾರ್ಖಾನೆಯ ಮರು ಆರಂಭಕ್ಕೆ ಸದ್ಯ ಸಂಸದ ಬಿ. ವೈ. ರಾಘವೇಂದ್ರ ಪ್ರಯತ್ನಶೀಲರಾಗಿದ್ದಾರೆ.
ಕಾರ್ಖಾನೆಯ 209 ಮಂದಿ ನೌಕರರಲ್ಲಿ 129 ಮಂದಿ ವಿವಿಧ ನಿಗಮ ಮಂಡಳಿಯ 19 ಕಡೆಯಲ್ಲಿ ಎರವಲು ಸೇವೆ ಮೇಲೆ ಕೆಲಸ ಮಾಡುತ್ತಿದ್ದಾರೆ.
7 ಮಂದಿ ಎಂಪಿಎಂ ಫಾರೆಸ್ಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 52 ಮಂದಿ ಎಂಪಿಎಂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ 21 ಮಂದಿ ಕಾರ್ಮಿಕರು ಸರ್ಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿ ಸಂದರ್ಶನದಲ್ಲಿ ಭಾಗವಹಿಸಿ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
“ನಮ್ಮ ಮನವಿಗೆ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸ್ಪಂದಿಸಿದರು.ಇದರ ಪರಿಣಾಮ ಸೇವೆಯಲ್ಲಿದ್ದ ನೌಕರರಿಗೆ ಸಿದ್ಧಪಡಿಸಿದ ವಿಮುಕ್ತಿ ಪತ್ರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದ ಸಭೆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ” ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.

ತಗ್ಗಿದ ಇಂಧನ ದರ : ಗ್ರಾಹಕರ ನಿಟ್ಟುಸಿರು

0

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ತೆರಿಗೆ ಮತ್ತು ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 100.63 ಮತ್ತು ಡೀಸೆಲ್ 85.03ಕ್ಕೆ ತಗ್ಗಲಿದೆ.
“ಅಡುಗೆ ಅನಿಲ ಸೇರಿ ಎಲ್ಲಾ ವಸ್ತುಗಳ ಬೆಲೆ ಇಳಿಸುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಇದೇ 14ರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು” ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ರೂ.10 ಮತ್ತು 5ಕ್ಕೆ ಇಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದರು.

ಟ್ರ್ಯಾಪ್.. ಹನಿ ಟ್ರ್ಯಾಪ್….

0

ರಾಜ್ಯ ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳು, ನಿವೃತ್ತರು, ಅವಿವಾಹಿತರು ಹಾಗೂ ವಿಚ್ಛೇದಿತರನ್ನು ಹನಿಟ್ರ್ಯಾಪ್ ಜಾಲದ ಮೂಲಕ ಸುಲಿಗೆ ಮಾಡುತ್ತಿದ್ದ ಅಂತಹ ನಾಲ್ವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ರೀರಾಮಪುರದ ತ್ರಿಷಾ(26), ಆಕೆಯ ಪ್ರಿಯಕರ ಮುತ್ತು (32) , ಸಹಚರರಾದ ದಾಮೋದರ್ (30) ಮತ್ತು ಪೆದ್ದರೆಡ್ಡಿ (31) ಎಂದು ತಿಳಿದುಬಂದಿದೆ.

ರಾಜಾಜಿನಗರದ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಬಾರ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಈ ವಿಷಯ ತಿಳಿದ ಆರೋಪಿಗಳು ಪ್ಲಾನ್ ಮಾಡಿ ಬಳಿಕ ತ್ರಿಶಾ ಮೂಲಕ ಅಕ್ಟೋಬರ್ 1ರಂದು ಚಂದ್ರಶೇಖರ್ ಅವರಿಗೆ ಕರೆ ಮಾಡಿ “ಬಾರ್ ಲೈಸೆನ್ಸ್ ಕೊಡಿಸುತ್ತೇವೆ ಲಗ್ಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಬನ್ನಿ” ಎಂದು ತಿಳಿಸಿದ್ದಾಳೆ. ಚಂದ್ರಶೇಖರ್ ಯುವತಿ ತಿಳಿಸಿದ ಸ್ಥಳಕ್ಕೆ ತೆರಳಿದ್ದು ಆರೋಪಿಗಳು ತ್ರಿಷಾ ಮನೆಗೆ ಕರೆದಿದ್ದಾರೆ. ಇವತ್ತು ಜೊತೆ ಬಾರ್ ಲೈಸೆನ್ಸ್ ಬಗ್ಗೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದಂತೆಯೇ ಮುತ್ತು ಮತ್ತು ಆತನ ಸಹಚರರು ಏಕಾಏಕಿ ಮನೆಗೆ ನುಗ್ಗಿ ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿ ಮಾಧ್ಯಮ ಪ್ರತಿನಿಧಿಗಳನ್ನು ಕಳಿಸುವುದಾಗಿ ಬೆದರಿಕೆ ಹಾಕಿ 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದು ಹೇಳಿದಾಗ ಆರೋಪಿಗಳು ಮೂರು ಲಕ್ಷ ರೂಪಾಯಿಗೆ ಒತ್ತಾಯಿಸಿದ್ದಾರೆ. ಕೂಡಲಿ ಚಂದ್ರಶೇಖರ್ ಅವರು ತಮ್ಮ ಅಳಿಯನಿಗೆ ಕರೆ ಮಾಡಿ ತುರ್ತಾಗಿ 3 ಲಕ್ಷ ರೂಪಾಯಿ ತರಿಸಿ ಆರೋಪಿಗಳಿಗೆ ನೀಡಿದರು. ಈ ಸಂಬಂಧ ಚಂದ್ರಶೇಖರ್ ಅವರು ಕೂಡಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ನಗದು ಟು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಪುನೀತ್ ಗೆ, ಪ್ರತಿಷ್ಠಿತ ಬಸವಶ್ರೀ

ಕನ್ನಡ ಚಿತ್ರರಂಗದ ಪ್ರಖ್ಯಾತ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ 2021 ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಮುರುಘಾ ಶರಣರು ಮಾತನಾಡಿ ಪುನೀತ್ ಅವರು ಬಾಲನಟನಾಗಿ, ನಾಯಕನಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅಲ್ಲದೆ ರಾಜ್ಯ ಸರ್ಕಾರದ ನಾನಾ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಹೆಸರಾಂತ ನಟ ಹೃದಯಾಘಾತದಿಂದ ಕಳೆದವಾರ ನಮ್ಮನ್ನು ಆಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ. ಅವರ ಕುಟುಂಬದವರು ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ.

ಮಾನವೀಯ ಮೌಲ್ಯಗಳನ್ನೊಳಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದರು. ಹೀಗಾಗಿ ಮರಣೋತ್ತರವಾಗಿ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ ಕೆಜಿ – ಯುಕೆಜಿ ಆರಂಭಕ್ಕೆ ಅನುಮತಿ ಮಾರ್ಗಸೂಚಿ

ಕನ್ನಡ ಚಿತ್ರರಂಗದ ಪ್ರಖ್ಯಾತ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ 2021 ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಮುರುಘಾ ಶರಣರು ಮಾತನಾಡಿ ಪುನೀತ್ ಅವರು ಬಾಲನಟನಾಗಿ, ನಾಯಕನಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅಲ್ಲದೆ ರಾಜ್ಯ ಸರ್ಕಾರದ ನಾನಾ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಹೆಸರಾಂತ ನಟ ಹೃದಯಾಘಾತದಿಂದ ಕಳೆದವಾರ ನಮ್ಮನ್ನು ಆಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ. ಅವರ ಕುಟುಂಬದವರು ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ.

ಮಾನವೀಯ ಮೌಲ್ಯಗಳನ್ನೊಳಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದರು. ಹೀಗಾಗಿ ಮರಣೋತ್ತರವಾಗಿ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಬ್ಬ ಜೋರು : ಬೆಳಕಿಗೆ ಮಂಕು

0

ದೀಪಾವಳಿ ಎಂದರೆ ದೀಪಗಳ ಹಬ್ಬ. ಎಲ್ಲೆಲ್ಲಿಯೂ ಪಟಾಕಿಯ ಸದ್ದು. ದೀಪಾವಳಿಯು ನರಕ ಚತುರ್ಥಿಯಿಂದ ಆರಂಭ. ಮನೆಗಳಲ್ಲಿ ನೀರು ತುಂಬುವ ಹಬ್ಬ. ಎಲ್ಲರೂ ಎಣ್ಣೆ ಸ್ನಾನ ಮಾಡುವ ಪರಿಪಾಠ. ಹಬ್ಬ ಎಂದೂ ಅರ್ಥ ಕಳೆದುಕೊಂಡಿಲ್ಲ. ಆದರೆ ಈ ಎರಡು ವರ್ಷ ಕೊರೋನಾ ಮಹಾಮಾರಿಯ ಕರಾಳ ನೆರಳಿನಿಂದ ದೀಪ ಹಚ್ಚಿದರೂ, ಸಮಾಧಾನಕ್ಕೆ ಏನೋ ಕೊರತೆ. ದೀಪಾವಳಿ ಅಮಾವಾಸ್ಯೆಯಂದು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ ಮತ್ತು ವಾಹನ ಪೂಜೆ ನಡೆಯುತ್ತದೆ. ಶಿವಮೊಗ್ಗದ ಸಾಗರ ರಸ್ತೆಯ ಇಕ್ಕೆಲ ಬಣ್ಣಬಣ್ಣದ ಚಂಡುಹೂ, ಸೇವಂತಿಗೆ, ಬಾಳೆಕಂಬ, ಹಸಿರು ಮಾವಿನ ಎಲೆ, ಮಹಾಲಿಂಗನ ಬಳ್ಳಿ ನೋಡುಗರ ಕಣ್ತುಂಬಿಕೊಳ್ಳುತ್ತಿದ್ದವು. ಇಲ್ ನೋಡಿ, ದೀಪ ಬೆಳಗಿಸಲು ವಿವಿಧ ವಿನ್ಯಾಸದ ವರ್ಣಮಯ ಹಣತೆಗಳು ದೀಪ ಹಚ್ಚುವವರಿಗಾಗಿ ಕಾಯುತ್ತಿವೆ. ಆದರೆ ಕೊಳ್ಳುವವರೇ ವಿರಳ. ದೂರದ ಹಾನಗಲ್ ನಿಂದ ಬಂದಿರುವ ಚೆಂಡು ಹೂ ಮಾರಾಟಗಾರ ಕಣ್ಣಲ್ಲಿ ಭರ್ಜರಿ ವ್ಯಾಪಾರ ತುಂಬಿಕೊಂಡಿದ್ದರು. ಆದರೆ, ಅವರು ನಮ್ಮೊಂದಿಗೆ ಮಾತನಾಡಿ, ಇಂದಿನ ಗ್ರಾಹಕರ ಪರಿಸ್ಥಿತಿ ಮತ್ತು ಹೂವಿನ ವ್ಯಾಪಾರದ ಬಗ್ಗೆ ತಿಳಿಸಿದರು.

ಈಗಲೇ ಎಲ್ ಕೆಜಿ ಪ್ರವೇಶ: ಅನುಮತಿ ಇಲ್ಲ.

0

ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ -19 ನಿಂದಾಗಿ ಕಳೆದ ಒಂದುವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಂತ-ಹಂತವಾಗಿ ಶಾಲೆಗಳ ತರಗತಿಯನ್ನು ಪ್ರಾರಂಭಿಸುತ್ತಿದೆ ಈಗ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಹೀಗಾಗಿ ಎಲ್ ಕೆಜಿ ಮತ್ತು ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರದ ಬಳಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಾಂಟೆಸ್ಸರಿಗಳು ಒತ್ತಾಯಿಸಿವೆ.

ಕೋವಿಡ್ -19 ನಿಂದ ಅಂಗನವಾಡಿ ಕೇಂದ್ರಗಳು ಫಲಾನುಭವಿಗಳ ಮನೆ ಬಾಗಿಲಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾದರಿಂದ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಗೊಳಿಸಲಿದೆ.

ರಾಜ್ಯದಲ್ಲಿ ಈಗಾಗಲೇ 1ರಿಂದ 10 ತರಗತಿಯ ಆರಂಭಗೊಂಡಿವೆ. ” ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಅಕ್ಷರಭ್ಯಾಸ, ಭಾಷಾ ಕಲಿಕೆ, ಬಣ್ಣ, ವಸ್ತುಗಳ ಆಕಾರ ಗುರುತಿಸುವುದು, ಸಂಖ್ಯೆಗಳಲ್ಲಿ ಪರಿಣಿತಿ ಹೊಂದಿದ ಬಳಿಕವಷ್ಟೇ ಪ್ರಾರ್ಥಮಿಕ ತರಗತಿಗಳಲ್ಲಿ ಉತ್ತಮವಾಗಿ ಕಲಿಯಲು ಸಾಧ್ಯ. ಪ್ರತಿವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ಮಕ್ಕಳು ಎಲ್ ಕೆಜಿ ತರಗತಿಗಳಿಗೆ ಸೇರುತ್ತಿದ್ದರು. ಆದರೆ ಲಾಕ್ಡೌನ್ ನಿಂದ ಶಾಲೆಗಳು ಮುಚ್ಚಿದ್ದ ಪರಿಣಾಮ ಪೂರ್ವ ಪ್ರಾರ್ಥಮಿಕ ಶಾಲೆಗಳಿಗೆ ಸಮರ್ಪಕವಾಗಿ ದಾಖಲಾತಿ ನಡೆದಿಲ್ಲ. ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳ ವಯಸ್ಸು ಒಂದೇ ಆಗಿದೆ. ಆದ್ದರಿಂದ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳ ಆರಂಭಕ್ಕೆ ಅನುಮತಿ ನೀಡಿ” ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬೇಗ ಬರಲಿದೆ ಗಡಗಡ ಚಳಿ

0

ರಾಜ್ಯದ ಕೆಲವೆಡೆ ಇನ್ನೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಂಬರ್ ಮಧ್ಯದ ಬದಲಿಗೆ ಈ ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗಲಿದೆ.
ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ‌. ಇದರಿಂದ ಮಲೆನಾಡು ಮತ್ತು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಇದು ಚಳಿಗಾಲ ಅಲ್ಲ ಶೀತಗಾಳಿ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಈ ವರ್ಷ ನವೆಂಬರ್ 6ರವರೆಗೂ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಅನಂತರ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗುತ್ತದೆ ಎನ್ನುತ್ತಾರೆ ತಜ್ಞರು.
ಮಳೆ ತರುವ ಯಾವುದೇ ಚಂಡಮಾರುತಗಳು ಸೃಷ್ಟಿಯಾಗದಿದ್ದರೆ ನವೆಂಬರ್ ಮಧ್ಯದ ವೇಳೆಗೆ ಚಳಿಗಾಲ ಪ್ರಾರಂಭವಾಗಬಹುದು ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಯಾವಾಗ ಚಳಿ ಆರಂಭವಾಗುತ್ತದೆಯೋ, ಅದಾಗಿ ಕೆಲವೇ ದಿನದಲ್ಲಿ ಅಲ್ಲಿಂದ ತೇವಾಂಶವನ್ನು ಮಾರುತಗಳು ನಮ್ಮ ರಾಜ್ಯದ ಕಡೆಗೆ ಹೊತ್ತು ತರುತ್ತವೆ. ಆಗ ರಾಜ್ಯದಲ್ಲಿ ಚಳಿ ಆರಂಭವಾಗುತ್ತದೆ. ನಮ್ಮ ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಪ್ರಾರಂಭವಾಗುತ್ತದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.