Monday, August 3, 2026
Monday, August 3, 2026
Home Blog Page 2072

ಸರ್ಕಾರದ ಮರಳು ನೀತಿ ಇನ್ನಷ್ಟು ಸರಳ

0

ಸರ್ಕಾರಿ ಏಜೆನ್ಸಿ ಗಳಾದ ಎಚ್ ಜಿಎಂಎಲ್ ಮತ್ತು ಕರ್ನಾಟಕ ರಾಜ್ಯ ಖನಿಜಗಳ ನಿಗಮ ಮರಳು ಗಣಿಗಾರಿಕೆ ಮಾಡಿ ಮಾರಾಟ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ನದಿ, ತೊರೆ, ಹಳ್ಳ, ಕೆರೆ ಜಲಾಶಯಗಳ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 50 ಕೋಟಿ ರೂಪಾಯಿಗೂ ಮೇಲ್ಪಟ್ಟ ಟೆಂಡರ್ ಗಳು ಮತ್ತು ಅವುಗಳ ಅಂದಾಜುಗಳ ಪೂರ್ವ ಪರಿಶೀಲನೆ ನಡೆಸಬೇಕಿದೆ. ಅದಕ್ಕೆ ಒಪ್ಪಿಗೆ ಪ್ರಕ್ರಿಯೆ ನಡೆಸಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ನಿರ್ಮಾಣ ಕಾಮಗಾರಿಗಳು, ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್ ಹಾಗೂ ಅಂದಾಜುಗಳನ್ನು ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿಯೇ ಪರಿಶೀಲಿಸಿ ಅಂತಿಮಗೊಳಿಸುತ್ತದೆ. ಸಮಿತಿಯ ಒಪ್ಪಿಗೆಯ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ. ನದಿಯಲ್ಲಿ ಮುಳುಗಿ ಮರಳು ತೆಗೆಯುವ ಪದ್ಧತಿ ದಕ್ಷಿಣ ಕನ್ನಡದಲ್ಲಿ ಇತ್ತು. ಅದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ. ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ.
ಜನ ಮನೆ ಕಟ್ಟುವ ಆತುರದಲ್ಲಿ ನದಿ ಪಾತ್ರದೊಳಗೆ ಎಲ್ಲೆಂದರಲ್ಲಿ ಮರಳು ತೆಗೆಯುವ ಯತ್ನಕ್ಕೆ ತೊಡಗುತ್ತಾರೆ. ಜನರ ಜೀವಹಾನಿಯಾಗದಂತಹ ಸೂಕ್ತ ಮರಳು ತೆಗೆಯುವ ಸ್ಥಳಗಳನ್ನ ಸರ್ಕಾರವೇ ಗುರುತಿಸುವುದು ಒಳ್ಳೆಯದು. ಅಂತಹ ತಾಣಗಳಲ್ಲಿ ಮುನ್ನೆಚ್ಚರಿಕೆಯಾಗಿ ಅಗ್ನಿ ಶಾಮಕ ದಳದ ವ್ಯವಸ್ಥೆ ಮಾಡುವುದು ಬಹಳ ಸೂಕ್ತವಾಗಿದೆ.

ಟಿ – 20 ವಿಶ್ವಕಪ್ ಕನಸು ನನಸಾಗದೇ ತವರಿಗೆ ವಾಪಸ್ಸು

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B – ಗುಂಪಿನಲ್ಲಿರುವ ಭಾರತ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಿತು. ಭಾರತ ತಂಡವು ನಮೀಬಿಯಾ ಎದುರು ಜಯ ಸಾಧಿಸಿತು.
ದುಬೈ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದ ನಡೆದ ಟಾಸ್ ನಲ್ಲಿ ಮೊದಲು ಬ್ಯಾಟಿಂಗ್ ಆಡಿದ ನಮೀಬಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನ ಗಳಿಸಿತು. ಜಡೇಜಾ ಮತ್ತು ಅಶ್ವಿನ್ ಅವರ ಸ್ಪಿನ್ ಮೋಡಿಯಿಂದ ಸಾಧಾರಣ ಮೊತ್ತವನ್ನು ಕಲೆಹಾಕಿತು. ಅದರಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಟ್ರಂಪಲ್ ಮ್ಯಾನ್ ಔಟಾಗದೆ ಬೌಂಡರಿ ಮತ್ತು ಸಿಕ್ಸರ್ ಗಳನ್ನ ಸಿಡಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸುವಲ್ಲಿ ಪಾತ್ರರಾದರು.
ಭಾರತದ ಬೌಲರ್ ಗಳ ದಿಟ್ಟತನದಿಂದ ಎದುರಿಸಿ ಉತ್ತಮ ಪ್ರದರ್ಶನ ತೋರಿದ ನಮೀಬಿಯಾ ತಂಡ 132 ರನ್ ಗಳಿಸಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ.
132 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಭಾರತ ಕೇವಲ 15.2 ಓವರ್ ಗಳಲ್ಲಿ 1 ವಿಕೆಟ್ ಕಳದುಕೊಂಡು 136 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಭಾರತ ತಂಡದ ಪರ ಮೊದಲ ವಿಕೆಟ್ ಹಂತದಲ್ಲಿ ಅಂಕಣಕ್ಕೆ ಇಳಿದು ಆಟ ಆಡಿದ K.Lರಾಹುಲ್ ಮತ್ತು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣರಾದರು.K.L ರಾಹುಲ್ ಕೇವಲ 36 ಎಸೆತಗಳಲ್ಲಿ 54 ರನ್ ಗಳಿಸಿಕೊಂಡರು ಹಾಗೆಯೇ 37 ಎಸೆತಗಳಲ್ಲಿ 56 ರನ್ ಗಳಿಸಿಕೊಂಡ ರೋಹಿತ್ ಶರ್ಮಾ ಔಟಾದರು. ಶರ್ಮಾ ಔಟದ ಬಳಿಕ 2 ನೇ ವಿಕೆಟ್ ಹಂತಕ್ಕೆ ಕಾಲಿಟ್ಟು ಅಂಕಣಕ್ಕೆ ಇಳಿದ ಸುರ್ಯಕುಮರ್ ರವರು ರಾಹುಲ್ ಜೊತೆಗೂಡಿ 19 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಗೆಲುವಿಗೆ ಈ 3 ಜನ ಬ್ಯಾಟಿಂಗ್ ಗಾರರು ಪ್ರಮುಖ ಕಾರಣರಾದರು .
ಒಟ್ಟಿನಲ್ಲಿ ದುಬೈ ಕ್ರೀಡಾಂಗಣದ ನಿನ್ನೆ ನಡೆದ ಪಂದ್ಯದಲ್ಲಿ ಸೂಪರ್ – 12 ರ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಪ್ರದರ್ಶನ ತೋರಿದ ಭಾರತ ಸೆಮಿಫೈನಲ್ ಬಾಗಿಲು ಮುಚ್ಚಿದ್ದರೂ ಕೂಡ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಗೆದ್ದು ಬೀಗಿ ತವರಿನತ್ತ ಸಾಗಿತು.

ಹರೆಕಳ ಹಾಜಬ್ಬ

0

ಅರವತ್ತೈದು ವರ್ಷದ ಮನುಷ್ಯ, ಮಂಗಳೂರು ತಾಲೂಕಿನ ಕೊಣಾಜೆ ಸನಿಹದ ಹರೇಕಳ‌ ಗ್ರಾಮದವರು. ಕಿತ್ತಳೆಹಣ್ಣು ಮಾರಾಟ ಅವರ ವೃತ್ತಿ. ಅವರ ಚಿಕ್ಕಂದಿನಲ್ಲಿ ಓದಲು ಶಾಲೆಯಿರಲಿಲ್ಲ. ಆ ವಂಚನೆ ಊರಿನ ಮಕ್ಕಳಿಗಾಗಬಾರದು ಎಂಬ ಯೋಚನೆ ಬಂತು. ಆಗಿನ್ನೂ ಬೀಡಿ ಕಟ್ಟುವ ಕೆಲಸವಿತ್ತು. ಹೊತ್ತಿನೂಟಕ್ಕೂ ಪರದಾಡುವಷ್ಟು ಬಡತನದ ಕುಟುಂಬ ಅವರದ್ದು. ಆದರೆ ಊರಿಗೊಂದು ಶಾಲೆ ಬೇಕು ಎಂಬ ದೃಢ ನಿಶ್ಚಯ ಮಾಡಿದರು.
ಕಿತ್ತಳೆ ಹಣ್ಣು ಮಾರುವದನ್ನ ಆರಂಭಿಸಿದರು. ಒಳಿತು ಮಾಡುವ
ಸೇವಾ ಸಂಕಲ್ಪಕ್ಕೆ ದೇವರೂ ಸಹಾಯಮಾಡುತ್ತಾನಂತೆ. ಅವರಿಗೆ ಮಾರಾಟದ ಹಣದಿಂದ ಶಾಲೆಯ ಕಟ್ಟಡ ಕಟ್ಟಲು ಶಕ್ತಿ ಬಂತು. ಸರ್ಕಾರಿ ಆಫೀಸುಗಳಿಗೆ ಅಲೆದಾಟ ಆರಂಭವಾಯಿತು. ಅವರ ಈ ತುಡಿತ, ಉತ್ಸಾಹ ನೋಡಿ ಜನಪ್ರತಿನಿಧಿಗಳು ಸಹಕಾರ ನೀಡಿದರು.
ಜಿಲ್ಲಾ ಪಂಚಾಯತಿ ಅನುಮತಿಯಿಂದ ಪ್ರಾಥಮಿಕ ಶಾಲೆ ಆರಂಭಮಾಡಿದರು.
ಸದ್ಯ ಸ್ವಂತ ಕಟ್ಟಡವಿಲ್ಲ. ಕೈಯಲ್ಲಿದ್ದದ್ದು ಕೇವಲ ಇಪ್ಪತೈದು ಸಾವಿರ ರೂ. ಧೃತಿಗೆಡಲಿಲ್ಲ. ಊರಿನ ಮದರಸಾದಲ್ಲೇ ತಾತ್ಕಾಲಿಕವಾಗಿ ಶಾಲೆ ಶುರುವಾಯಿತು.
ಶಾಶ್ವತ ನಿವೇಶನಕ್ಕಾಗಿ ಹುಡುಕಾಡಿದರು. ಸರ್ಕಾರದ ಜಾಗವೊಂದು ಯಾರಿಂದಲೋ ಅತಿಕ್ರಮಣವಾಗಿತ್ತು.
ಸಾರ್ವಜನಿಕರ ಗಮನ ಸೆಳೆದ ಅವರ ದಿಟ್ಟ ಹೆಜ್ಜೆಗಳಿಂದ ಎಲ್ಲರ ಬೆಂಬಲ ಸಿಕ್ಕಿತು.


ಅವರ ಹಣ್ಣು ಮಾರಾಟಕ್ಕೆ ಸಮಯವಿಲ್ಲದೇ ಬರಿಗೈ ಆಗುವ ಪರಿಸ್ಥಿತಿ ಬಂತು.
ಪತ್ರಿಕೆಯೊಂದು ಅವರ ಸಾಹಸ ಗುರುತಿಸಿ 2004 ರಲ್ಲಿ ಒಂದು ಲಕ್ಷ ರೂ. ಬಹುಮಾನ ನೀಡಿತು. ಸರಿ ಆ ಹಣವನ್ನೇ ತಮ್ಮ ಕಾರ್ಯಕ್ಕೆ ವಿನಿಯೋಗಿಸಿದರು.
ಅವರ ಪ್ರಯತ್ನ ಕ್ಕೆ ಸಿಕ್ಕ ಪ್ರತಿಫಲವಾಗಿ ಊರಿಗೆ ಪ್ರೌಢಶಾಲೆಯ ಭಾಗ್ಯ ದೊರಕಿತು.
ಇದು ಶ್ರೀ ಹಾಜಬ್ಬ ಅವರ ಸಾಹಸಗಾಥೆ. ಅವರು ಸಾಮಾನ್ಯ ಹಣ್ಣು ಮಾರಾಟಗಾರ ಆದರೆ ಅನನ್ಯ , ಅಪರೂಪದ ಸಮಾಜ ಸೇವಕ.
ಈಗ ಅವರನ್ನರಿಸಿ
ದೇಶದ ಪ್ರತಿಷ್ಠಿತ ಪದ್ಮ ಪುರಸ್ಕಾರ ಬಂದಿದೆ.
ಪುಟ್ಟ ಹಳ್ಳಿಯ ಸಣ್ಣ ಮನುಷ್ಯ,ಈಗ ದೇಶದ ಗಮನ ಸೆಳೆದಿದ್ದಾರೆ. ಪದ್ಮಶ್ರೀ ಅವರ ಕೊರಳನ್ನ ಅಲಂಕರಿಸಿದೆ.
ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರಿಂದ ಈ ಪುರಸ್ಕಾರ ಸ್ವೀಕರಿಸಿದ್ದಾರೆ.
ವೇದಿಕೆಗೆ ತೆರಳುವಾಗ ಪಾದರಕ್ಷೆ ಕಳಚಿ ಪಕ್ಕಕ್ಕಿರಿಸಿ ಬರಿಗಾಲಲ್ಲೇ ಹೆಜ್ಜೆಹಾಕಿದರು.
ಅಪ್ಪಟ ಹಳ್ಳಿಯ ಪ್ರಜೆಯ ಸರಳತೆ ಮತ್ತು ಮುಗ್ಧತೆ ಅಲ್ಲಿದ್ದವರನ್ನೆಲ್ಲ ಮೂಕ ವಿಸ್ಮಿತರನ್ನಾಗಿಸಿದೆ.
ಪದ್ಮಶ್ರೀ ಹಾಜಬ್ಬ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಇಲ್ಲಿಯವರೆಗೆ ಸಾರ್ವಜನಿಕರ ಸಹಕಾರದಿಂದ ಅಕ್ಷರ ಸಂತ ಎನಿಸಿದ ಶ್ರೀ ಹಾಜಬ್ಬ ಅವರ ಒಂದಿಷ್ಟು ಗುರಿಗಳು ಈಡೇರಿವೆ. ಇನ್ನು ಅವರ ಕನಸು ಪದವಿ ಪೂರ್ವ , ಪದವಿ ಶಿಕ್ಷಣ ಕಾಲೇಜನ್ನ ನಿರ್ಮಿಸುವುದಾಗಿದೆ. ಈಗ ರಾಜ್ಯ ಸರ್ಕಾರ ಪದ್ಮಶ್ರೀ ಪುರಸ್ಕೃತ ಶ್ರೀ ಹಾಜಬ್ಬ ಅವರೊಂದಿಗೆ ಹೆಜ್ಜೆ ಹಾಕಿ ಅವರ ಕನಸನ್ನ ನನಸು ಮಾಡಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಹಿತ್ಯವಿಹಾರ : ಕವಿತಾಂಕಣ

0

ಹಾಡುಗಳು ಮುಗಿದಿಲ್ಲ!

ದೂಡಬಹುದೇ ಸುಮ್ಮನೆ
ಯಾರನ್ನಾದರೂ
ಹೇಗೋ ನುಸುಳಿದ ಬೇಡದ ಸಾಲೊಂದನ್ನು
ಕವಿತೆಯೊಳಗಿಂದ ಅನಾಮತ್ತು
ಕಾಟು ಹಾಕಿದಂತೆ!

ಬರೆದ ಪದ್ಯದ ಪದಗಳ ಅದಲು ಬದಲಾಗಿಸಿ
-ದ ಹಾಗೆ
ಎದೆಯ ಗೂಡ ನೆನಪ ಚಿತ್ರಗಳನ್ನು
ಕತ್ತರಿಸಿ ನಕಲಿಸಿ ಅಂಟಿಸಿದಷ್ಟು ಸಲೀಸಲ್ಲ!

ಕೋಗಿಲೆಗೂ ಕಾವಿಗಿಷ್ಟು ಜಾಗ ಬೇಕು
ಕಾಗೆ ತತ್ತಿಯ ಹೊರ
ಹಾಕಿದ್ದು ಮಾಮರಕೂ ನೆನಪಿಲ್ಲ!
ನಾವಾದರೂ ಯಾಕೆ ದೂಡೋಣ?

ಬಂದ ಮಳೆ ಕಳೆದ ಋತುವ ಮತ್ತೆ
ನೆನೆದು ಅತ್ತಿದ್ದೋ, ಸಂಭ್ರಮಿಸಿದ್ದೋ ಬಲ್ಲವರಾರು
ಕಣ್ಣ ಹನಿಗಳ ಕೆನ್ನೆ ಮೇಲೆ
ಉರುಳಿಸಿದಂತೆ ಎದೆಗಿಳಿದವರ ಕೆಡವಲಾದೀತೆ ಹೇಳಿ?

ಬೇಕಾದ ಗಟ್ಟಿ ಬೀಜ ಪಡೆದ ಮಣ್ಣು
ಮೊಳಕೆ ಬರಿಸಿ
ಮುಗಿಲಿಗೆ ಮುಖ
ಮಾಡುವುದನ್ನು ಕಲಿಸಿ ಕಳಿಸುತ್ತದೆ; ಜೊಳ್ಳು
ತನ್ನೊಡಲಲ್ಲಿಯೇ ಕರಗಿಸಿದಂತೆ
ನಾವು ನೀವು ದೂಡಲಾದೀತೇ ?
ಕಣ್ಮುಂದಿನ ಬಂಧನವಿದು ಬೇಡವಾದರೂ
ಬೆರಳ ಹಿಡಿದು ಸಾಗಬೇಕು
ಹಾಡುಗಳು ಮುಗಿದಿಲ್ಲ!

ಜಾಗವಿಲ್ಲ ಅಂದವರಾರು ಮನದ ಮನೆಯೊಳಗೆ
ನೂರು ಮಾತುಗಳ ಜೀರ್ಣಿಸಿಕೊಂಡ ಒಂದು ಹಾಡು
ಎಲ್ಲರೆದಯ ದನಿಯಾಗಿದ್ದು
ಹಳೆಯ ಕತೆ
ಬೇಡದವರ ದೂಡಿ ಫಲವೇನು
ಜೊತೆಗಿದ್ದು ಜತೆಯಾಗುವುದು ಇಂದಿನ ತುರ್ತು
ನಾಳೆ ಮತ್ತೇನಿಹುದೋ…..
ಕವಿತೆಗಳು ಭಾರ ಅನ್ನಿಸುವುದಿಲ್ಲ ಅಷ್ಟೆ!

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಬುದ್ಧ ರೈತ

ಮನದ ಹೊಲ
ನೂರು ಕಳೆಗಳ ಕಡಲು ಮೂಲೆಗಂಟಿದ ಜೇಡ
ನಿನ್ನೆಗಳ ಕಾಣಿಸಲು ನೇಯ್ದಿದೆ ಬಲೆ!

ಕಣ್ಣ ಕಾಡು
ಎದುರಾದ ಮಿಕಗಳ ಹೊಡೆದು
ಕೆಡವಲು ಹುನ್ನಾರ,
ಹೊಲಕ್ಕೆ ಕಾಲಿಟ್ಟವರೆಲ್ಲಾ ಮಾಲೀಕರು
ಹರಗದ ಹೊಲ ಎಷ್ಟು ನೋಡಿಕೊಂಡರೇನು
ಗಡ್ಡ ಕೆರೆವ ನೆಪದಿ ಗಾಯ ಮಾಡಿಕೊಂಡಂತೆ

ಅಂಗುಲಿಮಾಲ ಬದುವಿನಲ್ಲಿ ಪಹರೆ
ಮೇಯಲು ಬಂದವರೆಲ್ಲಾ ಹೊಲಕೆ ಬಲಿ
ಹೊಲವೆಂದರೇನು ಫಸಲು ಇದೆಇಲ್ಲವೆಂಬ
ಮಾಯದ ಕನ್ನಡಿ ಹಿಡಿದು ಕನಸುಗಳಿಗೆ
ಕಿಡಿ ಹೊತ್ತಿಸಬೇಕು
ಕಳೆ ಬೂದಿಯಾಗುವುದಾ ಕಾದು ನೋಡಬೇಕು
ಅವನೊಬ್ಬ ಬರಬೇಕೆಂದು ನಿಟ್ಟುಸಿರ
ತರಂಗದಲ್ಲಿ ಹೊಲದ ಮಾಲೀಕ ಎದರು ನೋಟ!

ನಗುವ ನೇಗಿಲ ಹೆಗಿಲಿಗಿಟ್ಟು ಒಳಹೊರ ಎತ್ತುಗಳ ಕಟ್ಟಿ
ಬರಬೇಕಿದೆ ಬುದ್ಧನೆಂಬೋ ರೈತ
ಶತಮಾನಗಳು ಸವೆದವು, ನಕ್ಕ ಹೂ ಅಲ್ಲೊಇಲ್ಲೋ
ಮತ್ತೆ ಮತ್ತೆ ಬುದ್ಧ ಕೂತು ಏಳುವ ಮರಗಳು
ಅಮ್ಮನ ತುತ್ತಂತೆ ಅಪರೂಪ!

ಹೊಲದ ವಿಷವನಿಳಿಹಿ ಅನ್ನ ಹುಟ್ಟಿಸುವ
ನೇಗಿಲಯೋಗಿ ಇಂದಿನ ತುರ್ತು
ಬುದ್ಧ ಬರುವ ಸೂಚನೆ ಕಮ್ಮಿ!

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಮೂಲ ಹೆಸರು- ಸೈಯದ್ ಫೈಜುಲ್ಲಾ
ಕಾವ್ಯ ನಾಮ- ಸಂತೆಬೆನ್ನೂರು ಫೈಜ್ನಟ್ರಾಜ್
ಊರು- ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು
ವೃತ್ತಿ- ಕನ್ನಡ ಅಧ್ಯಾಪಕ
ಪುಸ್ತಕ ಪ್ರಕಟಣೆ-
೧. ಎದೆಯೊಳಗಿನ ತಲ್ಲಣ( ಕವನಗಳು)
೨. ಮಂತ್ರದಂಡ( ಮಕ್ಕಳ ಕವನಗಳು)
೩.ಬುದ್ಧನಾಗಹೊರಟು(ಕವನಗಳು)
೪. ಸ್ನೇಹದ ಕಡಲಲ್ಲಿ ( ಮಕ್ಕಳ ಕತೆಗಳು)
೫.ಹಬ್ಬಿದಾ ಮಲೆ ಮಧ್ಯದೊಳಗೆ( ಕಥಾ ಸಂಕಲನ)
೬. ಕೇಳದೆ ನಿಮಗೀಗ ( ಪ್ರೇಮ ಕಾವ್ಯ)
೭ ಲೋಕದ ಡೊಂಕು ( ಆಧುನಿಕ ವಚನಗಳು)
೮ ಬುದ್ಧನಿಗೆ ಕೊರೋನಾ ಸೋಂಕಿಲ್ಲ( ಕವಿತೆಗಳು
ಪ್ರಶಸ್ತಿ:- ಸಂಚಯ ಕಾವ್ಯ ಪುರಸ್ಕಾರ
ಹಾಮಾನಾ ಕಥಾ ಪುರಸ್ಕಾರ
ಸ್ನೇಹಶ್ರೀ ಪ್ರಶಸ
ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಕತೆಯೊಂದು ಪಠ್ಯ
ರಾಜ್ಯ ಮಟ್ಟದ ಕತಾ ಸ್ಪರ್ಧೆ ಯಲ್ಲಿ ಎರಡು ಬಾರಿ
( ಹಾಸನ ಮತ್ತು ಬೆಂಗಳೂರು)
೨೦೨೧ ರ ರಾಜ್ಯ ಮಟ್ಟದ ” ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ.
ಅಖಿಲ ಭಾರತ ಕ.ಸಾ.ಸಮ್ಮೇಳನದಲ್ಲಿ ಕವಿತೆ, ಸಂವಾದಗೋಷ್ಠಿ ಮತ್ತು ವಿಚಾರ ಮಂಡನೆ
ಆಕಾಶವಾಣಿ ಗಳಲ್ಲಿ ಕತೆ,ಕವನ, ವಿಚಾರಧಾರೆ ಪ್ರಸಾರ
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಸದಸ್ಯರು
ವಾಸ :ಸಂತೆಬೆನ್ನೂರು
ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ

ಜಾಗತಿಕ ವಿದ್ಯುತ್ ಗ್ರಿಡ್ : ಅಮೆರಿಕ ಆಸಕ್ತಿ

0

ಸೌರಶಕ್ತಿ ಬಳಕೆಯಲ್ಲಿ ಭಾರತ ಕಳೆದ ಏಳು ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಸೌರಶಕ್ತಿ ಉತ್ಪಾದನೆ 17 ಪಟ್ಟು ಹೆಚ್ಚಳವಾಗಿದೆ. ದೇಶದ ಸದ್ಯದ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 45 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ ಎಂದು ಗ್ಲಾಸ್ಗೊನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಭಾರತ ತಿಳಿಸಿದೆ.
ಕಳೆದ ವಾರ ನಡೆದ ಗ್ರೀನ್ ಗ್ರಿಡ್ಸ್ ಇನ್ಷಿಯೇಟಿವ್ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ವಿದ್ಯುತ್ ವಿನಿಮಯಕ್ಕಾಗಿ ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ( ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್) ಯೋಜನೆಗೆ ಸಮ್ಮತಿ ಸೂಚಿಸಲಾಗಿತ್ತು. ಈ ಯೋಜನೆಯ ಆಕರ್ಷಕ ಸ್ವರೂಪ ಗಮನಿಸಿದ ಅಮೆರಿಕ ಪಾಲುದಾರಿಕೆಯ ಆಸಕ್ತಿ ತೋರಿದೆ.
“ಹವಾಮಾನ ಮಾತುಕತೆಗೆ ಅಮೆರಿಕ ವಾಪಸ್ಸಾಗಿದೆ. ನೂತನವಾಗಿ ಆರಂಭಗೊಂಡಿರುವ ವಿದ್ಯುತ್ ವಿನಿಮಯ ಕುರಿತ ಹೊಸ ಯೋಜನೆ ಜೊತೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ” ಎಂದು ಅಮೆರಿಕ ಇಂಧನ ಸಚಿವೆ ಜೆನ್ನಿಫರ್ ಗ್ರಾನ್ಹೋಮ್
ತಿಳಿಸಿದ್ದಾರೆ.
ಭಾರತ, ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಗ್ರಿಡ್ ಇನಿಷಿಯೇಟಿವ್ ಸ್ಟೀರಿಂಗ್ ಕಮಿಟಿಯ ಸದಸ್ಯ ರಾಷ್ಟ್ರಗಳಾಗಿವೆ. ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ಯೋಜನೆ ಅಡಿಯಲ್ಲಿ 80 ರಾಷ್ಟ್ರಗಳು ಗುರುತಿಸಿಕೊಂಡಿದ್ದು, ಸೌರ ವಿದ್ಯುತ್ ವಿನಿಮಯಕ್ಕೆ ಆಸಕ್ತಿ ತೋರಿವೆ.
ಸೌರ ವಿದ್ಯುತ್ ಸದ್ಬಳಕೆ ಕುರಿತು ರೂಪುಗೊಂಡಿರುವ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಗ್ಲಾಸ್ಗೊ ವಿಶ್ವ ಹವಾಮಾನ ಶೃಂಗಸಭೆ ವೇಳೆ ಭಾರತ ಈ ನೂತನ ಯೋಜನೆ ಪ್ರಸ್ತಾಪಿಸಿತ್ತು.
ಇಂಗ್ಲೆಂಡ್ ಪ್ರಥಮ ಪಾಲುದಾರ ರಾಷ್ಟ್ರವಾಗಿ ಸೇರಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಭಾರತ-ಇಂಗ್ಲೆಂಡ್ ನೇತೃತ್ವದ ‘ಜಾಗತಿಕ ವಿದ್ಯುತ್ ಗ್ರಿಡ್’ ಜೊತೆಗೆ ಅಮೆರಿಕ ಪಾಲುದಾರಿಕೆ ಪಡೆಯಲು ಆಸಕ್ತಿ ತೋರಿಸಿರುವುದು ಗಮನಾರ್ಹ.
ಪ್ರಸ್ತುತ ವಿಶ್ವದ ಇತರ ರಾಷ್ಟ್ರಗಳು ಏನೆಲ್ಲಾ ಯೋಜನೆಗಳಿಗೆ ಅಮೇರಿಕದ ಬೆನ್ನು ಬೀಳುತ್ತಿದ್ದವು. ಆದರೆ, ‘ಜಾಗತಿಕ ವಿದ್ಯುತ್ ಗ್ರಿಡ್’ ವಿಶೇಷ ಯೋಜನೆಗೆ ಅಮೇರಿಕಾ ಆಸಕ್ತಿ ವಹಿಸಿರುವುದು ತಜ್ಞರ ಗಮನ ಸೆಳೆದಿದೆ.

ಶಿವಮೊಗ್ಗ ಮೃಗಾಲಯಕ್ಕೆ ದಿವ,ಹೊಸ ಅತಿಥಿ

0

ಶಿವಮೊಗ್ಗ ತಾವರೆಕೊಪ್ಪ ಹುಲಿ ಸಿಂಹ ಧಾಮಕ್ಕೆ ಆಗಮಿಸಿರುವ ಆಫ್ರಿಕಾ ಮೂಲದ ನೀರು ಕುದುರೆ ದಿವಾ.
ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಮೂಲತಹ ಆಫ್ರಿಕಾ ಪ್ರಾಣಿಯಾಗಿದೆ.ಇದು ಸುಮಾರು 40 ವರ್ಷಗಳ ಕಾಲ ಬದುಕಬಹುದಾದ ಪ್ರಾಣಿಯಾಗಿದೆ. ಬನ್ನೇರುಘಟ್ಟದಲ್ಲಿ ಮಾತ್ರ ನೋಡಬಹುದಾದ ಪ್ರಾಣಿಯಾಗಿತ್ತು. ಆದರೆ ಈಗ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ನೀರು ಕುದುರೆ ಆಗಮಿಸಿದೆ. ಇದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದು ಪ್ರವಾಸಿಗರಿಗೆ ಇದರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದರು.


ಸಿಂಹ ಧಾಮಕ್ಕೆ ಗಂಡು ನೀರು ಕುದುರೆ ಬಂದಿರುವುದರಿಂದ ಹೆಣ್ಣು ನೀರು ಕುದುರೆಯೊಂದು ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಮೈಸೂರು ಮೃಗಾಲಯದ ಅಧಿಕಾರಿ ಸ್ಪಂದಿಸಿದ್ದಾರೆ. ನೀರು ಕುದುರೆಯು ಎಲ್ಲಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಮುಕುಂದನ್ ಹೇಳಿದ್ದಾರೆ.

ಡಿ:12 ರೈಲ್ವೆ ‘ರಾಮಾಯಣ ಯಾತ್ರೆ’

0

ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಿರುವ ‘ರಾಮಾಯಣ ಯಾತ್ರೆ’ಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ದಿಲ್ಲಿಯ
ಸಫ್ದರ್ ಜಂಗ್ ನಿಲ್ದಾಣದಿಂದ ಸಂಜೆ 6:30ಕ್ಕೆ ಪ್ರಯಾಣ ಆರಂಭಿಸಿದ ಐಷಾರಾಮಿ ಹವಾನಿಯಂತ್ರಿತ ರೈಲು, 17 ದಿನಗಳ ಬಳಿಕ ಸಫ್ದರ್ ಜಂಗ್ ನಿಲ್ದಾಣಕ್ಕೆ ಮರಳಲಿದೆ. ಉತ್ತರ ಪ್ರದೇಶದ ಅಯೋಧ್ಯೆ ಯಲ್ಲಿ ರೈಲು ಮೊದಲ ನಿಲುಗಡೆ ಹೊಂದಿದೆ. ‘ದೇಖೋ ಅಪ್ನಾ ದೇಶ್’ (ನಮ್ಮ ದೇಶ ನೋಡಿ) ಅಭಿಯಾನದ ಅಡಿಯಲ್ಲಿ ಐಆರ್ ಸಿಟಿಯು ಈ ಪ್ಯಾಕೇಜ್ ಯಾತ್ರೆ ಆರಂಭಿಸಿದೆ.
ಹವಾನಿಯಂತ್ರಿತ ರೈಲಿನಲ್ಲಿ ‘ರಾಮಾಯಣ ಯಾತ್ರೆ’ ಕೈಗೊಳ್ಳುವ ಪ್ರಯಾಣಿಕರು ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡಿರಬೇಕು. 18 ವರ್ಷ ಮೇಲ್ಪಟ್ಟವರು ಮಾತ್ರ ಪ್ರಯಾಣ ಕೈಗೊಳ್ಳಬಹುದು ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಎರಡು ಅತ್ಯಾಧುನಿಕ ರೆಸ್ಟೋರೆಂಟ್ ಗಳನ್ನು ರೈಲು ಹೊಂದಿದೆ. ಅಯೋಧ್ಯೆ, ಜನಕಪುರ, ಸೀತಾಮಂಡಿ, ಕಾಶಿ, ಪ್ರಯಾಗ್ ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ ಸೇರಿದಂತೆ ಶ್ರೀರಾಮನಿಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡನೆಯ ಸಂಚಾರವು ಡಿಸೆಂಬರ್ 12 ರಿಂದ ಆರಂಭವಾಗಲಿದೆ. ಅಯೋಧ್ಯೆಯು ಈ ಯಾತ್ರೆಯ ಮೊದಲ ಕ್ಷೇತ್ರವಾದರೆ, ರಾಮೇಶ್ವರ ಕೊನೆಯ ಕ್ಷೇತ್ರವಾಗಿದೆ ಎಂಬ ಮಾಹಿತಿ ದೊರೆತಿದೆ.
ರೈಲ್ವೆ ಇಲಾಖೆ ತಿಳಿಸಿರುವ ಪ್ರಯಾಣ ದರ ಹೀಗಿದೆ – ಪ್ರತಿ ಪ್ರಯಾಣಿಕರಿಗೆ
82,950ರೂ. -2ಎಸಿ.
1,02,095ರೂ.- 1ಎಸಿ.

ಮಾಲಿನ್ಯಯುಕ್ತ ದೆಹಲಿ, ಕೋವಿಡ್ ಆತಂಕದಲ್ಲಿ

0

ದೀಪಾವಳಿ ಹಿನ್ನೆಲೆಯಲ್ಲಿ, ದೇಶದ ಹಲವು ನಗರಗಳಲ್ಲಿ ಮಿತಿಮೀರಿದ ವಾಯು ಮಾಲಿನ್ಯದಿಂದ ಕೋವಿಡ್ ಸಂಖ್ಯೆ ಹೆಚ್ಚಳವಾಗುವ ಕಾರಣದ ಬಗ್ಗೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

ಚಳಿಗಾಲ, ವಿಷಗಾಳಿ ಮತ್ತು ಕೋರೋನಾ ಬಾಧೆಗಳಿಂದ ದೇಶದಾದ್ಯಂತ ಶ್ವಾಸ ಸಂಬಂಧಿತ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಆತಂಕವನ್ನು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ವ್ಯಕ್ತಪಡಿಸಿದ್ದಾರೆ.
“ಹಲವು ಜನರಲ್ಲಿ ಅಲರ್ಜಿಯ ಕೆಮ್ಮು, ಅಸ್ತಮಾ, ಸಿ.ಓ.ಪಿ.ಡಿ ಮತ್ತು ಇತರ ಶ್ವಾಸಕೋಶ ಸಂಬಂಧಿತ ಅನಾರೋಗ್ಯಗಳು ಗೌಪ್ಯವಾಗಿರುತ್ತದೆ. ಹೊರಗಿನ ವಾತಾವರಣದ ಪ್ರೇರಣೆ ಮೇಲೆ ಸಮಸ್ಯೆಗಳು ಉದ್ಭವಿಸಿ ಕೊಂಡು ಜನರನ್ನು ಬಾಧಿಸಲಾರಂಭಿಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ನೈಜುಲೇಜರ್ ಅಥವಾ ಇನ್ಹೇಲರ್ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿ ದುರ್ಬಲ ಶ್ವಾಸಕೋಶ ಹೊಂದಿರುವವರಿಗೆ ಕೋರೋನಾ ಸೋಂಕು ತಗಲಿ ಮರಣ ಹೊಂದುವ ಅಪಾಯ ಹೆಚ್ಚಿದೆ” ಎಂದು ಗುಲೇರಿಯಾ ತಿಳಿಸಿದ್ದಾರೆ.

ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದ ಸಂದರ್ಭದಲ್ಲಿ, ಮೊದಲಿಗೆ ಮಕ್ಕಳು ತೊಂದರೆಗೊಳಗಾಗುತ್ತಾರೆ. ಚಿಕಿತ್ಸೆ ವಾರ್ಡಗಳಿಗೆ ಹೆಚ್ಚು ಪ್ರಮಾಣದಲ್ಲಿ ಮಕ್ಕಳು ಉಸಿರಾಟ ಸಮಸ್ಯೆ, ದೀರ್ಘಕಾಲದ ಶೀತ -ಕೆಮ್ಮು ಸಮಸ್ಯೆಗಳಿಂದಾಗಿ ದಾಖಲಾಗುತ್ತಾರೆ. ಹೀಗಾಗಿ ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೆಳಿಗ್ಗಿನ ವೇಳೆಯಲ್ಲಿ ವಾಹನದ ಓಡಾಟ ಹೆಚ್ಚಾಗಿರುವ ಕಾರಣ ಜನರ ಓಡಾಟ ಕಡಿಮೆಗೊಳಿಸುವುದು ಉತ್ತಮ ಎಂದು ಗುಲೇರಿಯಾ ಅವರು ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ತಿಳಿಹೇಳಿದ್ದಾರೆ.

ಡ್ರೋನ್ ಮೂಲಕ ಕೊಲ್ಲುವುದು ಹೇಡಿತನ – ಕಧಿಮಿ

0

ಡ್ರೋನ್ ಮೂಲಕ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕಧಿಮಿ ಅವರ ಹತ್ಯೆಗೆ ಸಂಚು ರೂಪಿಸಿ ಪ್ರಧಾನಿ ನಿವಾಸದ ಮೇಲೆ ಧಾಳಿ ನಡೆಸಲಾಗಿದೆ.

ಈ ಧಾಳಿ ವಿಫಲವಾಗಿದ್ದು, ಪ್ರಧಾನಿ ಅಲ್ ಕಧಿಮಿ ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಇರಾಕ್ ಸಂಸತ್ತಿಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಉಗ್ರ ಸಂಘಟನೆಯು ನಿರಾಕರಿಸಿತ್ತು. ಈ ಧಾಳಿಯಿಂದಾಗಿ ಇರಾಕ್ ದೇಶದಲ್ಲಿ ಉದ್ಭವಿಸಿರುವ ಅನಿಶ್ಚಿತ ಮತ್ತು ಆತಂಕದ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.ಈ ಡ್ರೋನ್ ಧಾಳಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ನ ಇಬ್ಬರು ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಈ ಧಾಳಿಯ ಬಳಿಕ ಪ್ರಧಾನಿ ಮುಸ್ತಾಫಾ ಅಲ್ ಕಧಿಮಿ ಅವರು ‘ನಾನು ನನ್ನ ಜನರ ನಡುವೆ ಕ್ಷೇಮದಿಂದ ಇದ್ದೇನೆ. ದೇವರಿಗೆ ಕೃತಜ್ಞತೆಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಇರಾಕ್ ನ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ‘ಹೇಡಿತನದ ರಾಕೆಟ್ ಮತ್ತು ಡ್ರೋನ್ ಅನ್ನು ಬಳಸಿ ಧಾಳಿ ನಡೆಸುವುದರಿಂದ ನಾಡು ಮತ್ತು ಭವಿಷ್ಯವನ್ನು ಕಟ್ಟಲಾಗದು’ ಎಂದು ಪ್ರತಿಪಾದಿಸಿದ್ದಾರೆ.

ಟಿ-20 ಸೆಮಿಗೆ ಕಿವೀಸ್ ಲಗ್ಗೆ

0

ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಗೆ ನ್ಯೂಜಿಲೆಂಡ್ ತಂಡ ಪ್ರವೇಶಿಸುವ ಮೂಲಕ ಭಾರತ ತಂಡದ ಕನಸು ನುಚ್ಚು- ನೂರಾಗಿದೆ. ಅಫ್ಘಾನಿಸ್ತಾನ್ ವಿರುದ್ಧ ಅಬುಧಾಬಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಜಯಗಳಿಸಿ ನಾಲ್ಕರ ಘಟ್ಟ ಪ್ರವೇಶಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನವು 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳನ್ನು ಮಾತ್ರಗಳಿಸಿತ್ತು. ನ್ಯೂಜಿಲೆಂಡ್ ತಂಡದ ಆಕ್ರಮಣಕಾರಿ ಬೌಲರ್ ಗಳ ದಾಳಿಗೆ ಅಫ್ಘಾನಿಸ್ತಾನ ತಂಡವು ಸೋತು ಶರಣಾಯಿತು. 125 ರನ್ ಗಳನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 18.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಜಯಭೇರಿ ಬಾರಿಸಿತು.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ (40) ಮತ್ತು ಡೆವೊನ್ ಕಾನ್ವೇ (36) ಅವರ 68 ರನ್ ಗಳ ಜೊತೆಯಾಟದಿಂದ ಗೆಲುವು ಸಾಧಿಸಿತು.

ನ್ಯೂಜಿಲೆಂಡ್ ತಂಡದ ಗೆಲುವಿನಿಂದಾಗಿ ಭಾರತ ತಂಡವು ಕೊನೆಯ ಪಂದ್ಯವನ್ನು ಆಡುವ ಮುನ್ನವೇ, ಟಿ-20ವಿಶ್ವಕಪ್ ನಿಂದ ಹೊರ ಬಿದ್ದಿರುವುದು ಅಭಿಮಾನಿಗಳಲ್ಲಿ ಭಾರಿ ನಿರಾಶೆ ಉಂಟುಮಾಡಿದೆ. ಉಳಿದಿರುವ ನಮೀಬಿಯಾ ತಂಡದ ವಿರುದ್ಧದ ಪಂದ್ಯ ನಾಮಕವಸ್ತೆ ಆಗಿದೆ.