ಆನಂದಪುರಂದಲ್ಲಿ ಕೊರೋನಾ ನಿರ್ಬಂಧ ತೆರವು ಹಿನ್ನಲೆಯಲ್ಲಿ ಭಾನುವಾರ ಆನಂದಪುರ ಸಮೀಪದ ನರಸೀಪುರದ ಖ್ಯಾತ ನಾಟಿ ವೈದ್ಯ ದಿವಂಗತ ನಾರಾಯಣ ಮೂರ್ತಿ ಕುಟುಂಬಸ್ಥರು ಔಷಧ ವಿತರಣಾ ಕಾರ್ಯ ಪುನಾರಂಭಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು ಆರು ನೂರಕ್ಕೂ ಹೆಚ್ಚು ಜನರು ಸಾಮಾಜಿಕ ಅಂತರದ ಸರತಿ ಸಾಲಿನಲ್ಲಿ ನಿಂತು ಔಷಧಿಯನ್ನು ಪಡೆದುಕೊಂಡರು.