ಉತ್ತರಪ್ರದೇಶದ ವಿಧಾನ ಸಭೆ ಚನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ ನಿರ್ಣಾಯಕವಾಗಿದೆ. ಈ ಪಕ್ಷಗಳೂ ಕಸರತ್ತು ತೀವ್ರಗೊಳಿಸಿವೆ.
‘ಸಾಮಾಜಿಕ ನ್ಯಾಯ’ ಪರಿಕಲ್ಪನೆಯ ಪದಕ್ಕೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಿಲ್ಲದ ಮಹತ್ವ ಇದೆ. ಒಬಿಸಿ ಮೀಸಲು ಪ್ರತಿಪಾದಿಸಿದ ಮಂಡಲ್ ಕಮಿಷನ್ ವರದಿ ಮೂಲಕ ಈ ಎರಡೂ ರಾಜ್ಯಗಳಲ್ಲಿ ಅಗಾಧ ರಾಜಕೀಯ ಪರಿವರ್ತನೆಗಳು ಘಟಿಸಿದವು. ಈ ಆಂದೋಲನದ ಜ್ವಾಲೆಯಲ್ಲಿಯೇ ಮೂಲಾಯಂ ಸಿಂಗ್ ಯಾದವ್ ಅಭ್ಯುದಯಕ್ಕೆ ಬಂದರು. 1990 ದಶಕದಲ್ಲಿ ಸಮಾಜವಾದಿ ಪಾರ್ಟಿ ಕಟ್ಟಿ ಯಶಸ್ಸಿನ ಉತ್ತಂಗ ತಲುಪಿದರು. ಅಲ್ಲಿಂದ ಇಲ್ಲಿಯವರೆಗೆ ಒಬಿಸಿ ಮತ ಬ್ಯಾಂಕ್ ಪ್ರತ್ಯೇಕತೆಯ ಅಸ್ಮಿತೆಯನ್ನು ಕಾಯ್ದುಕೊಂಡಿದೆ.
2017ರ ವಿಧಾನಸಭೆ ಹಾಗೂ 2019 ರ ಲೋಕಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಿಟ್ಟಿಸುವಲ್ಲಿ ಯಶಸ್ವಿಯಾದದ್ದರಿಂದಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಸಾರಿ ಕೂಡ ಒಬಿಸಿ ಮತಗಳ ಸುತ್ತ ನಡೆಯುತ್ತಿರುವ ಮಹಾಸಮರ ಎನಿಸಿದೆ.