ರಾಜ್ಯದಲ್ಲಿ ಕೋವಿಡ್ ಸೋಂಕಿನ ಆರ್ಭಟ ಮುಂದುವರಿದಿದೆ. ಬುಧವಾರ 48,905 ಕೇಸು ಪತ್ತೆಯಾಗಿದೆ. 39 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.57 ಲಕ್ಷಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 8, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ 4, ಮೈಸೂರು 3, ಉತ್ತರ ಕನ್ನಡ, ಮಂಡ್ಯ, ಕಲಬುರಗಿ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 2, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಗದಗ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉಡುಪಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ.
ಬುಧವಾರ 47,907 ಜನರಿಗೆ ಆರ್ ರಾಪಿಡ್ ಆಂಟಿಜೆನ್ ಹಾಗೂ 1,69,323 ಜನರಿಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.22.51ರಷ್ಟಿದ್ದು, ಸಾವಿನ ಪ್ರಮಾಣ ಶೇ.0.07ರಷ್ಟಿದೆ. ಬೆಂಗಳೂರು ನಗರದಲ್ಲಿ 22,427 ಗರಿಷ್ಟ ಸೋಂಕು ಕಂಡುಬಂದಿದೆ. ಮೈಸೂರು 2,797, ತುಮಕೂರು 2,645, ಮಂಡ್ಯ 2,186, ಹಾಸನ 2,016, ಕೋಲಾರ 1,547, ಧಾರವಾಡ 1,523, ಉಡುಪಿಯಲ್ಲಿ 1,392, ಬಳ್ಳಾರಿಯಲ್ಲಿ 1,141, ಕಲಬುರಗಿ 1007 ಕೇಸುಗಳು ದಾಖಲಾಗಿದೆ.
ರಾಜ್ಯದಲ್ಲಿ ಮುಂದುವರೆದ ಕೋವಿಡ್ ಆರ್ಭಟ
Date: