ತೀರ್ಥಹಳ್ಳಿ ತಾಲೂಕಿನ ಯಕ್ಷಗಾನ ಕಲಾವಿದ ಕೊಕ್ಕೊಡ್ತಿ ಗ್ರಾಮದ ಕೃಷ್ಣಮೂರ್ತಿ ಆಚಾರ್ಯ (೮೨) ಅವರು ನಿಧನರಾದರು.
ಮೃತರು ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಅಭಿಮಾನಿ ಸ್ನೇಹಿತರನ್ನು ಅಗಲಿದ್ದಾರೆ. ಬಡಗುತಿಟ್ಟಿನ ಯಕ್ಷಗಾನ ಕಲಾವಿದರಾಗಿ ೫ದಶಕಗಳಿಂದ ಸೇವೆ ಸಲ್ಲಿಸಿದ್ದಾರೆ. ಪ್ರಸಿದ್ಧ ಬಯಲಾಟ ಮೇಳಗಳಾದ ಶ್ರೀಕ್ಷೇತ್ರ ಮಂದಾರ್ತಿ, ಮರಣ ಕಟ್ಟೆ, ಶಿವರಾಜಪುರ ಮೇಳ, ಸೋಮವಾರ ಸಂತೆ ಮೇಳ, ಗೋಳಿ ಗರಡಿ, ಮಡಮಕ್ಕಿ, ಅಮೃತೇಶ್ವರಿ, ನೀಲಾವರ, ಮೇಗರವಳ್ಳಿ, ಸೀತೂರು, ಹೊಸಳ್ಳಿ ಮತ್ತು ಇನ್ನಿತರ ಮೇಳಗಳಲ್ಲಿ ಕಲಾವಿದರಾಗಿ ಪ್ರೇಕ್ಷಕರ ಜನಮನ ಗೆದ್ದಿದ್ದಾರೆ. ಇವರ ಸೇವೆ ಗುರುತಿಸಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಮತ್ತು ಇನ್ನಿತರ ಪ್ರಶಸ್ತಿಗಳು ಇವರಿಗೆ ಲಭಿಸಿದೆ.
ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ( 82) ನಿಧನ
Date:
