ನಮ್ಮ ಜಿಲ್ಲೆಯ ಹೆಮ್ಮೆಯ ಕವಿಗಳಾದ ದಿ. ವಸುದೇವ ಭೂಪಾಳಂ ಅವರ ಕವನಗಳ ಗಾಯನ ಮತ್ತು ವಾಚನ ಸ್ಪರ್ಧೆ ಏರ್ಪಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅವರ ಕವನಗಳನ್ನು ಹಾಡುವ, ಓದುವ ಸ್ಪರ್ಧೆ ಯಿದೆ.ವಿದ್ಯಾರ್ಥಿಗಳು ಪ್ರತ್ಯೇಕ ವಿಭಾಗ, ಸಾರ್ವಜನಿಕರು ಪ್ರತ್ಯೇಕ ವಿಭಾಗ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಭಾಗದಲ್ಲಿಯೂ ಅವರ ಕವನಗಳ ವಾಚನ ಪ್ರತ್ಯೇಕ, ಹಾಡು ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು.
ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಜಿಲ್ಲಾ ವ್ಯಾಪ್ತಿಯಲ್ಲಿ ಯಾರು ಬೇಕಾದರೂ ಭಾಗವಹಿಸಲು ಅವಕಾಶವಿದೆ. ವಸುದೇವ ಭೂಪಾಳಂ ಕವನಗಳನ್ನು ಕಸಾಪ ಕಚೇರಿಯಲ್ಲಿ ಕೇಳಿ ಪಡೆಯಬಹುದು. ವಾಟ್ಸ್ ಆಪ್ ಮೂಲಕ ಪಡೆಯಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
ಆಸಕ್ತರು ಡಿ. ಗಣೇಶ್, ಜಿಲ್ಲಾ ಕಾರ್ಯದರ್ಶಿ ಅವರ ದೂರವಾಣಿ : 9901331667, ಎಂ. ಎಂ. ಸ್ವಾಮಿ, 9448856911, ಮಹಾದೇವಿ, ಶಿವಮೊಗ್ಗ ತಾ. ಅಧ್ಯಕ್ಷರು, : 8073052370, 8970405092 ಇವರನ್ನು ಸಂಪರ್ಕ ಮಾಡಿ ಕವನಗಳನ್ನು ಪಡೆಯಬಹುದು ಎಂದು ಜಿಲ್ಲಾ ಅಧ್ಯಕ್ಷರು ಕೋರಿದ್ದಾರೆ.
