Thursday, July 30, 2026
Thursday, July 30, 2026

ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಾಮುಖ್ಯ-ವೇ. ಹಾಲಪ್ಪಯ್ಯ ಶಾಸ್ತ್ರಿ

Date:

ಹಡಪದ ಅಪ್ಪಣ್ಣನವರು ಬಸವಣ್ಣನವರ ಸಿದ್ಧಾಂತಕ್ಕೆ ಬಲಗೈ ಬಂಟರಾಗಿದ್ದರು : ವೇ|| ಹಾಲಪ್ಪಯ್ಯ ಶಾಸ್ತಿçಗಳು
ಶಿವಮೊಗ್ಗ ಜುಲೈ 29(ಕರ್ನಾಟಕ ವಾರ್ತೆ): ಬಸವಣ್ಣನವರ ತತ್ತ್ವ-ಸಿದ್ಧಾಂತಗಳ ಪ್ರಸಾರ ಹಾಗೂ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ನಾವೆಲ್ಲ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ ಎಂದು ಕುವೆಂಪು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೇ|| ಹಾಲಪ್ಪಯ್ಯ ಶಾಸ್ತ್ರಿಗಳು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಘೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣನವರು, ಅಪ್ರತಿಮ ಭಕ್ತಿ ಮತ್ತು ಜ್ಞಾನವುಳ್ಳ ಕಾಯಕಜೀವಿಯಾಗಿದ್ದರು. ‘ಹಡಪ’ ಎಂದರೆ ವೀಳ್ಯದ ಡಬ್ಬಿ, ಬಸವಣ್ಣನವರ ಮುಖ್ಯವಾದ ವಸ್ತುಗಳನ್ನು ಹೊಂದಿರುವ ಪೆಟ್ಟಿಗೆ ಹಾಗೂ ಕ್ಷೌರ ಸಾಮಗ್ರಿಯ ಪೆಟ್ಟಿಗೆ ಎಂಬ ಅರ್ಥಗಳಿದ್ದು, ಅವರು ಕ್ಷೌರ ವೃತ್ತಿಯನ್ನು ತನು-ಮನ-ಧನಗಳ ತ್ರಿಕರಣ ಶುದ್ಧಿಯಿಂದ ನಡೆಸಿಕೊಂಡು ಬಂದವರು ಎಂದರು.
ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಅಪಾರ ಜ್ಞಾನವುಳ್ಳ ಶರಣೆಯಾಗಿದ್ದರು. ಶರಣ ದಂಪತಿಗಳು ಬಸವಣ್ಣನವರ ವಿಚಾರಗಳಿಗೆ ಆಕರ್ಷಿತರಾಗಿ ಇಂಗಳೇಶ್ವರದಿAದ ಕೂಡಲಸಂಗಮಕ್ಕೆ ಬಂದು, ನಂತರ ಕಲ್ಯಾಣವನ್ನು ತಲುಪಿದರು. ಅಂದಿನ ಕಾಲದ ಮೌಢ್ಯತೆ ಹಾಗೂ ಜಾತಿ ಪದ್ಧತಿಯನ್ನು ಧಿಕ್ಕರಿಸಿದ ಬಸವಣ್ಣನವರು, ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಬಸವಣ್ಣನವರನ್ನು ಭೇಟಿಯಾಗಲು ಬರುವ ಪ್ರತಿಯೊಬ್ಬರೂ ಮೊದಲು ಅಪ್ಪಣ್ಣನವರನ್ನೇ ಭೇಟಿಯಾಗಬೇಕೆಂಬ ನಿಯಮವಿತ್ತು. ಕಲ್ಯಾಣಕ್ಕೆ ಬರುವ ಶರಣರ ಸಮೂಹಕ್ಕೆ ತಾಂಬೂಲ ನೀಡಿ ಸ್ವಾಗತಿಸುವ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ವಿವರಿಸಿದರು.
ಅವರು ಕೇವಲ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿರದೆ, ಅವರ ಜೀವದ ಒಡನಾಡಿಯಾಗಿದ್ದರು. ಅಂದು ಅನುಭವ ಮಂಟಪದಲ್ಲಿ 353 ಜನ ಶಿವಶರಣರಿದ್ದು, ಸುಮಾರು 96 ಸಾವಿರ ಜಂಗಮರಿಗೆ ದಾಸೋಹ ಜರುಗುತಿತ್ತು”
ಅಪಣ್ಣನವರು ಸುಮಾರು 242 ವಚನಗಳನ್ನು ರಚಿಸಿದ್ದು ಕಾಯಕ, ಆತ್ಮಶುದ್ದಿ, ಶಿವಭಕ್ತಿ, ಸತ್ಯ, ನಿಷ್ಟೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾಗಿ ಅಭಿವಕ್ತಿಸಿದ್ದಾರೆ.
ಅಲ್ಲಮಪ್ರಭುದೇವರು ಹಾಗೂ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದಾಗ, ಇಷ್ಟಲಿಂಗ ಪೂಜೆಯಲ್ಲಿ ಮಗ್ನರಾಗಿದ್ದ ಬಸವಣ್ಣನವರನ್ನು ಜಾಗೃತಗೊಳಿಸಿದ ಶ್ರೇಯಸ್ಸು ಅಪ್ಪಣ್ಣನವರಿಗೆ ಸಲ್ಲುತ್ತದೆ. ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಜ್ಞಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಇವರಿಗೆ ಶರಣರು ‘ನಿಜಸುಖಿ ಅಪ್ಪಣ್ಣ’ ಎಂಬ ಬಿರುದನ್ನು ನೀಡಿದರೆ, ಅವರ ಪತ್ನಿ ‘ನಿಜಮುಕ್ತಿ ಲಿಂಗಮ್ಮ’ ಎಂದೇ ಪ್ರಖ್ಯಾತರಾದರು. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕರಸ್ಥಲದ ಲಿಂಗಮಧ್ಯದಲ್ಲಿ ಅಣ್ಣ ಬಸವಣ್ಣನವರನ್ನೇ ಕಂಡು, ತಂಗಡಗಿಯಲ್ಲಿ ಲಿಂಗೈಕ್ಯರಾದರು ಎಂದು ತಿಳಿಸಿದರು.
ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹೆಚ್ ವೀರಭದ್ರಯ್ಯ ಆಲದಹಳ್ಳಿ ಮಾತನಾಡಿ, ಬಸವಣ್ಣನವರಿಂದ ನಿಜಸುಖಿ ಎಂಬ ಬಿರುದು ಪಡೆದ ಅಪ್ಪಣ್ಣನವರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರಿಂದ ಅವರ ಹೆಸರು ಇಂದಿಗೂ ಜೀವಂತವಾಗಿದೆ. ಸಮಾಜ ನಮಗಾಗಿ ಏನನ್ನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಅನೇಕ ಕೊರತೆಗಳಿವೆ. ಆದ್ದರಿಂದ ಮುಖ್ಯವಾಗಿ ನಾವೆಲ್ಲ ಒಗ್ಗೂಡಿ ಸಂಘಟಿತರಾಗಬೇಕು. ಹಾಗೂ ಹಡಪದ ಅಪ್ಪಣ್ಣನವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಕೆ ಎಂ ಮಲ್ಲೇಶಪ್ಪ, ತಾಲ್ಲೂಕು ಅಧ್ಯಕ್ಷರಾದ ಎಂ ಷಣ್ಮುಖಪ್ಪ, ತಹಶೀಲ್ದಾರ್ ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಇಂದು ,ಗುರು ಪೂರ್ಣಿಮೆ” ಗುರುವಿನಿಂ ಗುರಿಯುಂ…”ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Klive Special Article "ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ/ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀಗುರುವೇ...

Sagara Gangothri College of Education ಕುವೆಂಪು ವಿವಿ ಮಾನ್ಯತೆ ಇಲ್ಲ: ಸಾಗರದ ಬಿಎಡ್.ಕಾಲೇಜಿನ ವಿದ್ಯಾರ್ಥಿವೃಂದದ ಪ್ರತಿಭಟನೆ

Sagara Gangothri College of Education ಸಾಗರದ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ...