B.Y. Raghavendra ಬಡತನದ ನಡುವೆಯೂ ಛಲಬಿಡದೆ ಸಾಧನೆ ಮಾಡಿರುವ ಶಿವಮೊಗ್ಗದ ಹೆಮ್ಮೆಯ ಕ್ರೀಡಾಪಟು ಸಿಂಧುಶ್ರೀ ಗಣೇಶ್,
ಪೋಲ್ ವಾಲ್ಟ್ ರಾಷ್ಟ್ರೀಯ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.
ತಂದೆಯ ಕನಸನ್ನು ನನಸಾಗಿಸಲು ಅಥ್ಲೆಟಿಕ್ಸ್ ಲೋಕದಲ್ಲಿ ಮುನ್ನಡೆದಿರುವ ಇವರು, ಕಷ್ಟಗಳನ್ನು ಮೆಟ್ಟಿನಿಂತು ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ. ಇವರ ಈ ಸ್ಫೂರ್ತಿದಾಯಕ ಯಶಸ್ಸು ಕರುನಾಡಿಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದೆ.
B.Y. Raghavendra ನಾಡಿನ ಕ್ರೀಡಾಪಟುಗಳನ್ನು ಸದಾ ಪ್ರೋತ್ಸಾಹಿಸುವ ರಾಜ್ಯ ಸರ್ಕಾರ, ಸಿಂಧುಶ್ರೀ ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಅವರ ಸಾಧನೆ ಹೀಗೆ ಮುಂದುವರೆಯಲಿ, ನಾಡಿನ ಕೀರ್ತಿ ವಿಶ್ವಮಟ್ಟದಲ್ಲಿ ಮೊಳಗಲಿ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಇಲಾಖೆ ಪ್ರಕಟಣೆ ತಿಳಿಸಿದೆ.
