ದಿನಾಂಕ: 18-12-2022 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಗೋಡು ಗ್ರಾಮದ ವಾಸಿ ಆರೋಪಿ ರಾಜಪ್ಪ (36 ವರ್ಷ) ಈತನು ಪಾರ್ವತಮ್ಮ (50 ವರ್ಷ) ರವರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ, ತನ್ನ ಮರ್ಯಾದೆ ತೆಗೆಯುತ್ತಾಳೆಂದು, ಗುದ್ದಲಿಯ ಹೊಡೆದು ಕೊಲೆ ಮಾಡಿ, ಪಾರ್ವತಮ್ಮನ ಮೃತ ದೇಹವನ್ನು ಬಾವಿಗೆ ಹಾಕಿದ್ದು, ಈ ಬಗ್ಗೆ ಗುನ್ನೆ ನಂ 86/2022 ರಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ತನಿಖಾಧಿಕಾರಿಗಳಾದ ಶ್ರೀ ಪ್ರವೀಣ್ ನೀಲಮ್ಮನವರ್ ಸಿಪಿಐ ಮಾಳೂರು ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ, ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
3ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದ ಸರ್ಕಾರಿ ಅಭಿಯೋಜಕರಾದ ಶ್ರೀ ಶಾಂತರಾಜ್ ರವರು ವಿಚಾರಣೆ ನಡೆಸಿದ್ದು ನಂತರ ಶ್ರೀಮತಿ ಮಮತ ಬಿ ಎಸ್ ರವರು ವಾದ ಮಂಡಿಸಿರುತ್ತಾರೆ. ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ದಿನಾಂಕ:09-07-2026 ರಂದು ಆರೋಪಿ ರಾಜಪ್ಪ ಈತನಿಗೆ ಕಲಂ 302, 201 ಐಪಿಸಿ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ಮತ್ತು 10,000 ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತಾರೆ.
