ಸೈಲ್-ವಿಐಎಸ್ಎಲ್ನಿಂದ ಮಹಾತ್ಮ ಗಾಂಧಿ ಉದ್ಯಾನವನದ ಸುಂದರೀಕರಣ ಮತ್ತು ನಿರ್ವಹಣೆ
ನಗರದ ನಿವಾಸಿಗಳಿಗೆ ಸ್ವಚ್ಛ, ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣವನ್ನು ಒದಗಿಸುವ ಬದ್ಧತೆಯನ್ನು ಪ್ರದರ್ಶಿಸುತ್ತಾ, ಭದ್ರಾವತಿಯ ಸೈಲ್- ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ನಗರಾಡಳಿತ ಇಲಾಖೆಯು, ಕಾರ್ಯಪಾಲಕ ನಿರ್ದೇಶಕ ಶ್ರೀ ಅನೂಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವ್ಯಾಪಕವಾದ ಶುಚಿಗೊಳಿಸುವಿಕೆ ಮತ್ತು ನಿರ್ವಹಣಾ ಕಾರ್ಯವನ್ನು ಕೈಗೊಂಡಿದೆ.
ಉದ್ಯಾನವನದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು, ಮಿತಿಮೀರಿ ಬೆಳೆದ ಹುಲ್ಲು – ಪೊದೆಗಳನ್ನು ತೆಗೆದುಹಾಕುವುದು, ಮರದ ಕೊಂಬೆಗಳನ್ನು ಕತ್ತರಿಸುವುದು ಮತ್ತು ವಾಕಿಂಗ್ ಟ್ರ್ಯಾಕ್ಗಳು ಮತ್ತು ಸುತ್ತಮುತ್ತಲಿನ ಹಸಿರು ಪ್ರದೇಶಗಳ ಸಾಮಾನ್ಯ ನಿರ್ವಹಣೆಯನ್ನು ಕೈಗೊಂಡಿತ್ತು.
ಈ ಕ್ರಮಗಳು ಉದ್ಯಾನವನದ ಒಟ್ಟಾರೆ ನೋಟವನ್ನು ಸುಂದರವಾಗಿಸಿವೆ.
ಮಹಾತ್ಮ ಗಾಂಧಿ ಉದ್ಯಾನವನವನ್ನು ಮಕ್ಕಳು ಹೊರಾಂಗಣ ಆಟಕ್ಕೆ ಮತ್ತು ನಿವಾಸಿಗಳು ಬೆಳಗ್ಗೆ ಮತ್ತು ಸಂಜೆ ನಡಿಗೆಗೆ ವ್ಯಾಪಕವಾಗಿ ಬಳಸುತ್ತಾರೆ.
ನಿರ್ವಹಣಾ ಕಾರ್ಯವು ಸ್ವಚ್ಛ, ಹಸಿರು ಮತ್ತು ಹೆಚ್ಚು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿದೆ. ಆರೋಗ್ಯಕರ ಹೊರಾಂಗಣ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಎಲ್ಲಾ ವಯೋಮಾನದ ಜನರಿಗೆ ಆನಂದದಾಯಕ ಅನುಭವವನ್ನು ಒದಗಿಸುತ್ತದೆ.
ಸೈಲ್-ವಿಐಎಸ್ಎಲ್ ನಗರದಲ್ಲಿನ ನಾಗರೀಕ ಸೌಲಭ್ಯಗಳು ಮತ್ತು ಹಸಿರು ಸ್ಥಳಗಳ ನಿರ್ವಹಣೆಗೆ ಹೆಚ್ಚಿನ ಆಧ್ಯತೆಯನ್ನು ನೀಡುವುದನ್ನು ಮುಂದುವರೆಸಿದೆ. ಇಂತಹ ಕ್ರಮಗಳು ಪರಿಸರ ಸುಸ್ಥಿರತೆ, ಸಾರ್ವಜನಿಕ ಯೋಗಕ್ಷೇಮ ಮತ್ತು ನಗರ ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ.
ಉದ್ಯಾನವನದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಸ ಹಾಕುವುದನ್ನು ತಪ್ಪಿಸಿ, ಹಸಿರನ್ನು ರಕ್ಷಿಸಿ ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಲು ಎಲ್ಲಾ ನಿವಾಸಿಗಳು ತಮ್ಮ ಪೂರ್ಣ ಸಹಕಾರವನ್ನು ನೀಡಬೇಕೆಂದು ಕಾರ್ಖಾನೆಯ ಆಡಳಿತವು ಮನವಿ ಮಾಡಿದೆ.
