Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ ಮಾಡದಿದ್ದರೆ ಮುಂದೆ ಒಂದು ದಿನ ವಿಪತ್ತನ್ನು ಎದುರಿಸಬೇಕಾಗುತ್ತದೆ ಈಗಾಗಲೇ ವಾಯುಮಾಲಿನ್ಯ ಶಬ್ದ ಮಾಲಿನ್ಯ ಜಲ ಮಾಲಿನ್ಯದಿಂದ ಪರಿಸರ ವಿನಾಶದತ್ತ ಹೋಗುತ್ತಿದೆ ಶುದ್ಧವಾದ ಗಾಳಿ ನೀರು ಸಿಗುತ್ತಿಲ್ಲ ಇದರಿಂದ ನಮ್ಮ ಜೀವಿತ ಅವಧಿ ಕಡಿಮೆಯಾಗುತ್ತಿದೆ ಎಂದು ರೋಟರಿ ಶಿವಮೊಗ್ಗ ಈಸ್ಟಿನ ನೂತನ ಅಧ್ಯಕ್ಷರಾದ ಡಿಕೆ ಶೇಷಗಿರಿಯವರು ವಿಷಾದ ವ್ಯಕ್ತಪಡಿಸಿದರು ಅವರು ಇಂದು ಬೆಳಿಗ್ಗೆ ನಗರದ ಹೊರವಲಯದಲ್ಲಿ ಇರುವ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನಲ್ಲಿ ಪದಗ್ರಹಣದ ಸಮಾರಂಭದ ಅಂಗವಾಗಿ ಸಸಿಗಳನ್ನು ನೆಡುತ್ತಾ ಮಾತನಾಡಿದರು. ಬಯೋ ಡೈವರ್ಸಿಟಿ ಪಾರ್ಕಿನ ಚೇರ್ಮನ್ ಹಾಗೂ ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರೊಫೆಸರ್ ಎ ಎಸ್ ಚಂದ್ರಶೇಖರ್ ಅವರು ಮಾತನಾಡುತ್ತಾ ಈ 20 ಎಕರೆ ಜಾಗದಲ್ಲಿ ಇವಾಗಲೇ 5000ಕ್ಕೂ ಹೆಚ್ಚು ಒಳ್ಳೆ ಒಳ್ಳೆಯ ಸಸಿಗಳನ್ನು ಎಲ್ಲಾ ರೋಟರಿ ಸಂಸ್ಥೆಗಳ ಸಹಕಾರದಿಂದ ನೆಟ್ಟಿದ್ದೇವೆ ಎಂದು ನೋಡಿದರು ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಹಾಗೂ ಮಾಜಿ ಸಹಾಯಕ ಗವರ್ನರ್ ಎಂಪಿ ಆನಂದಮೂರ್ತಿ ಅವರು ಮಾತನಾಡುತ್ತಾ ನಿಮ್ಮ ನಿಮ್ಮ ಶುಭ ಸಂದರ್ಭದಲ್ಲಿ ನಿಮ್ಮ ನೆನಪಿಗಾಗಿ ಗಿಡ ಮರಗಳನ್ನು ನೀಡುವುದರ ಮುಖಾಂತರ ಸುಂದರವಾದ ವಾತಾವರಣ ಹಾಗೂಸುಂದರ ನಗರವನ್ನು ನಿರ್ಮಾಣ ಮಾಡೋಣ ಎಂದು ನುಡಿದರು Rotary Shivamogga ಮಾಜಿ ಸಹಾಯಕ ಗವರ್ನರ್ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಗಿಡ ಮರಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡಬೇಕು ಹಾಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದು ತುಂಬಾ ಅಗತ್ಯವಾಗಿದೆ ಎಂದು ನುಡಿದರು ಸಮಾರಂಭದಲ್ಲಿ ರೋಟರಿ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ್. ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಅರುಣ್ ದೀಕ್ಷಿತ್ ಗಣೇಶ್ ಎಸ್. ಡಾಕ್ಟರ್ ಧನಂಜಯ ರಾಂಪುರ. ನಿರ್ದೇಶಕರುಗಳಾದ. ಸಂಜೀವ್ ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೆಮನೆ. ರೊಟೇರಿಯನ್ ದತ್ತಾತ್ರಿ. ರಮೇಶ್.ಶಂಕರ್. ಚಂದ್ರ ನಾಯಕ.ಹಾಗೂ ಸದಸ್ಯರು ಉಪಸ್ಥಿತರಿದ್ದರು
Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.
Date:
