ಮಹಾನಗರ ಪಾಲಿಕೆಯಲ್ಲಿ ಕಂದಾಯ ಕಟ್ಟಲು, ಖಾತಾ ನಕಲು, ಮತ್ತು ಇ ಸ್ವತ್ತಿನ ಕಾಫಿ ಪಡೆಯಲು, ಆಗಮಿಸುವ ಜನರಿಗೆ ಇಲ್ಲಿನ ಡಾಟಾ ಎಂಟ್ರಿ ಆಪರೇಟರ್ ಗಳು ಇದು ವಿನೋಬನಗರ ಜೋನ್ ಬರುತ್ತದೆ ನೀವು ಅಲ್ಲಿ ಕಂದಾಯ ಕಟ್ಟಬೇಕು ಅಲ್ಲಿ ಖಾತ ನಕಲು ಪಡೆಯ ಪಡೆಯಬೇಕು ಎಂದು ಬಿಹೆಚ್ ರಸ್ತೆಯಿಂದ ವಿನೋಬನಗರಕ್ಕೆ ಕಳುಹಿಸುವುದು ವಿನೋಬ ನಗರದಲ್ಲಿ ಕಟ್ಟಲು ಹೋದವರಿಗೆ ನಮ್ಮ ವಲಯಕ್ಕೆ ಬರಲ್ಲ ಬಿ ಎಚ್ ರಸ್ತೆಗೆ ಹೋಗಬೇಕು, ಇದು ಗೋಪಿ ಸರ್ಕಲ್ ವಲಯಕ್ಕೆ ಬರುತ್ತದೆ ಎಂದು ಅಲೆದಾಡಿಸುವುದು ಎಷ್ಟರಮಟ್ಟಿಗೆ ಸರಿ ಎಲ್ಲಿ ಕಂದಾಯ ಕಟ್ಟಿದರು ಮಹಾನಗರ ಪಾಲಿಕೆಯ ಅಕೌಂಟಿಗೆ ತಾನೇ ಹೋಗುವುದು, ಇಲ್ಲಿನ ಆಪರೇಟರ್ಗಳು ಸಮಯಕ್ಕೆ ಸರಿಯಾಗಿ ಮನೆಗೆ ಹೋಗುತ್ತಾರೆ ಅಲ್ಲವೇ ಹೆಚ್ಚಿಗೆ ಏನು ಕೆಲಸ ಮಾಡುವುದಿಲ್ಲ ಹಾಗಾದರೆ ವಿನಾಕಾರಣ ಅಲೆದಾಡಿಸುವುದನ್ನು ನಿಲ್ಲಿಸಲು ತಾವು ಸೂಚಿಸಬೇಕಾಗಿ ತಮ್ಮಲ್ಲಿ ವಿನಂತಿ ಜನಸ್ನೇಹಿ ಮಹಾ ನಗರ ಪಾಲಿಕೆ ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ಶಿವಮೊಗ್ಗದ ನಾಗರೀಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ
ಶ್ರೀ ವಸಂತಕುಮಾರ್ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ನಾಗರೀಕರಿಗೆ ತಪ್ಪು ಮಾಹಿತಿ ನೀಡಿ ಅಲೆದಾಡಿಸುವ ಸಿಬ್ಬಂದಿ. ಹಿತರಕ್ಷಣಾ ವೇದಿಕೆಯಿಂದ ಪತ್ರ
Date:
