Wednesday, August 5, 2026
Wednesday, August 5, 2026

Rotary Club Shivamogga ಪರಿಣಿತ ವೈದ್ಯರ ಸಲಹೆಯಂತೆ ಆರೋಗ್ಯವಂತ ಮನುಷ್ಯ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು- ಪ್ರೊ.ಎ.ಎಸ್.ಚಂದ್ರಶೇಖರ್

Date:

Rotary Club Shivamogga ಪರಿಣಿತ ವೈದ್ಯರ ಸಲಹೆಯಂತೆ ಆರೋಗ್ಯವಂತ ಮನುಷ್ಯನು ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತವನ್ನು ನೀಡಬಹುದು ಎಂದು ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಹಾಗೂ ಅಮೆರಿಕಾದ ಮಾಡೆಸ್ಟೋ ಕ್ಲಬ್ ಸಹಯೋಗದೊಂದಿಗೆ ರೋಟರಿಯ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಅಡಿಯಲ್ಲಿ 43 ಲಕ್ಷ ರೂ. ವೆಚ್ಚದ ಸ್ವಯಂ ಚಾಲಿತ ರಕ್ತ ಶೇಖರಿಸುವ ಯಂತ್ರ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಯಂ ಚಾಲಿತ ರಕ್ತ ಶೇಖರಿಸುವ ಯಂತ್ರವನ್ನು ರೋಟರಿ ಕ್ಲಬ್ ಶಿವಮೊಗ್ಗ ಉತ್ತರವು ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ ನಲ್ಲಿ ಸಾರ್ವಜನಿಕರ ಸೇವೆಗಾಗಿ ಇರಿಸಲಾಗಿದೆ. ಯಂತ್ರದ ವಿಶೇಷತೆ ಎಂದರೆ ರೋಗಿಗೆ ರಕ್ತದ ಯಾವ ಘಟಕ ಅಂದರೆ ಯಾವ ಕಂಪೋನೆಂಟ್ಸ್ ಅವಶ್ಯಕತೆ ಇದೆಯೋ ಅದನ್ನು ಮಾತ್ರ ರಕ್ತದಿಂದ ಬೇರ್ಪಡಿಸಿ ಉಳಿದ ರಕ್ತವನ್ನು ದೇಹಕ್ಕೆ ವಾಪಾಸ್ ಕಳುಹಿಸುತ್ತದೆ ಎಂದರು.

ರೋಗಿಗೆ ಕೆಂಪು ರಕ್ತ ಕಣಗಳ ಅವಶ್ಯಕತೆ ಇದ್ದರೆ ಅದನ್ನು ಮಾತ್ರ ಬೇರ್ಪಡಿಸುತ್ತದೆ. ರೋಗಿಗೆ ಅವಶ್ಯಕತೆ ಇದ್ದ ಆ ಕೆಂಪು ರಕ್ತ ಕಣಗಳನ್ನು ಮಾತ್ರ ನೀಡಬಹುದು. ರಕ್ತದ ಪ್ರಮುಖ ಘಟಕಗಳಾದ ಕೆಂಪು ರಕ್ತ ಕಣ, ಪ್ಲೇಟ್‌ಲೇಟ್‌ಗಳು, ಪ್ಲಾಸ್ಮ ಹೀಗೆ ಪ್ರತಿಯೊಂದು ಬೇರ್ಪಡಿಸುತ್ತದೆ. ಆದ್ದರಿಂದ ಬೇಕಾದುದನ್ನು ಮಾತ್ರ ರಕ್ತದಾನಿಗಳಿಂದ ಸಂಗ್ರಹಿಸಿ ಉಳಿದ ರಕ್ತವನ್ನು ದಾನಿಗಳ ದೇಹಕ್ಕೆ ವರ್ಗಾಯಿಸುವುದರಿಂದ ದಾನಿಯು 15 ದಿನಗಳಿಗೊಮ್ಮೆ ರಕ್ತದಾನ ಮಾಡಲು ಶಕ್ತನಾಗಿರುತ್ತಾನೆ. ಇದರಿಂದ ರಕ್ತ ಪೋಲಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

Rotary Club Shivamogga ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ಅತ್ಯಂತ ಆಧುನಿಕವಾದ ಆಟೋಮೆಟಿಕ್ ಬ್ಲಡ್ ಕಲೆಕ್ಷನ್ ಯಂತ್ರವು ಬೆಂಗಳೂರು ನಗರ ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಮಾತ್ರ ಇರುವುದು. ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿದ ಅಮೆರಿಕದ ರೋಟರಿ ಕ್ಲಬ್ ಮಾಡೆಸ್ಟೋ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ ಸದಸ್ಯರ ಕಾರ್ಯ ಅಭಿನಂದನೀಯ ಎಂದರು.

ಪ್ರಥಮವಾಗಿ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಖಜಾಂಚಿ ನವೀನ್ ಅವರಿಂದ ಬಿಳಿ ರಕ್ತ ಕಣಗಳನ್ನು ಪಡೆಯಲಾಯಿತು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜಪ್ಪ, ಸರ್ಜಾ ಜಗದೀಶ್, ದತ್ತಾತ್ರಿ, ಡಾ. ಶಿವಕುಮಾರ್, ವೆಂಕಟೇಶ್, ಭಾರತೀ ಚಂದ್ರಶೇಖರ್, ವಾರಿಜಾ ಜಗದೀಶ್, ಉಷಾ ವೆಂಕಟೇಶ್ ಹಾಗೂ ರೆಡ್ ಕ್ರಾಸ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...

S. N. Channabasappa ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂಬ ಪ್ರಸಿದ್ಧಿಗೆ ಇಲ್ಲಿನ ಸಹೃದಯರೇ ಕಾರಣ- ಕಾ.ವೆಂ‌.ಶ್ರೀ.

S. N. Channabasappa "ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ...