Wednesday, August 5, 2026
Wednesday, August 5, 2026

ಶಿವಪ್ಪನಾಯಕ ವಾಣಿಜ್ಯ ಸಂಕೀರ್ಣ ಮಳಿಗೆ ಹರಾಜು ಪ್ರಕ್ರಿಯೆ: 34 ವರ್ತಕರಿಗೆ ಮರು ಮಂಜೂರು ಮಾಡಿ- ಕೆ.ಎಸ್ .ಈಶ್ವರಪ್ಪ

Date:

ಶುಭಂ ಹೋಟೆಲ್ ಆವರಣದ ಸಭಾಂಗಣದಲ್ಲಿ ಶಿವಪ್ಪ ನಾಯಕ ಸಂಕೀರ್ಣದ ೩೪ ವರ್ತಕರು ಮಳಿಗೆ ವಿಚಾರವಾಗಿ ಸಭೆ ನಡೆಸಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಿತು. ಎಲ್‌ಎಲ್‌ಆರ್ ರಸ್ತೆಯಲ್ಲಿ ಮಹಾನಗರ ಪಾಲಿಕೆ ಯಿಂದ ನಿರ್ಮಿಸಿರುವ ಎರಡು ಅಂತಸ್ತಿನ ಬಿಲ್ಡಿಂಗ್ ಹರಾಜಿಗೆ ಕರೆದಿರುವುದು ವರ್ತಕರಿಗೆ ತಿಳಿದು ಬಂದಿರುವುದರಿಂದ ವರ್ತಕರಿಗೆ ಮೋಸ ಮಾಡಿದಂತಾಗುತ್ತದೆ. ಈ ವಿಚಾರವಾಗಿ 2008ರಲ್ಲಿ ಶಿವಪ್ಪ ನಾಯಕ ಸಂಕೀರ್ಣವನ್ನ ಒಡೆಯುವಾಗ ಆಗಿನ ಆಯುಕ್ತರ ಸಮ್ಮುಖದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಕಡೆ ಎಲ್ಲೇ ಕಟ್ಟಡ ಕಟ್ಟಿದರೂ ಕೊಡಲು ಒಪ್ಪಿದ್ದರು ಆನಂತರದಲ್ಲಿ ಮತ್ತೊಂದು ಬಾರಿ ನಗರಪಾಲಿಕೆಯಲ್ಲಿ ಶಿವಪ್ಪ ನಾಯಕ ಸಂಕೀರ್ಣದ ವರ್ತಕರಿಗೆ ಕೊಡಲು ತೀರ್ಮಾನಿಸಿದ್ದರು. ಆದರೆ ಇದೀಗ ವರ್ತಕರಿಗೆ ಗೊತ್ತಿಲ್ಲದೆ ಹರಾಜು ಮಾಡುತ್ತಿರುವುದು ಸರಿಯಾದದ್ದಲ್ಲ ಎಂದರು. ಕೆ.ಎಸ್. ಈಶ್ವರಪ್ಪ ನವರು ಮಾತನಾಡಿ ನೆಲಮಳಿಗೆಯಲ್ಲಿ ೩೪ ವರ್ತಕರಿಗೂ ಅವಕಾಶವಿದ್ದು ನಾವೆಲ್ಲರೂ ಸೇರಿ ಯಾವುದೇ ಕಾರಣಕ್ಕೂ ಹರಾಜು ಮಾಡಲು ಅವಕಾಶ ಕೊಡಬಾರದು, ಜೊತೆಗೆ ಆಯುಕ್ತರಿಗೆ ಮುಂದಿನ ದಿನಗಳಲ್ಲಿ ಮುಂಚೆ ಇದ್ದ ೩೪ ವರ್ತಕರಿಗೂ ನೆಲಮಾಳಿಗೆಯ ಮಳಿಗೆಗಳನ್ನು ಕೊಡಿಸಲು ಪ್ರಯತ್ನ ಪಡ್ತೀನಿ ಎಂದು ತಿಳಿಸಿ,ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ವಿನಂತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...

S. N. Channabasappa ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂಬ ಪ್ರಸಿದ್ಧಿಗೆ ಇಲ್ಲಿನ ಸಹೃದಯರೇ ಕಾರಣ- ಕಾ.ವೆಂ‌.ಶ್ರೀ.

S. N. Channabasappa "ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ...