Klive Special Article ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪರಿಸರ ಪ್ರಕೃತಿದತ್ತವಾದದ್ದು,ಅದನ್ನು ಸರಿಯಾಗಿಟ್ಟುಕೊಳ್ಳುವುದು ಪರಿಸರದ ಜೊತೆಗಿರುವ ನಮ್ಮ ಆದ್ಯ ಕರ್ತವ್ಯವಾಗಿದೆ.
ಈ ವರ್ಷ ಮೇ ತಿಂಗಳನಲ್ಲಿ ಅತೀ ಹೆಚ್ಙು ಬಿಸಿಲಿನ
ತಾಪಮಾನವಿತ್ತು.ಮನೆಯೊಳಗಿದ್ದರೂ ಬಿಸಿ,ಹೊರಗೆ ಹೋದರಂತೂ ಮತ್ತೂ ತಲೆ ಬಿಸಿಯ ವಾತಾವರಣವಿತ್ತು.ಇದಕ್ಕೆ ಕಾರಣವೆಂದರೆ ಮರಗಿಡಗಳನ್ನು ಸರಿಯಾಗಿ ಪೋಷಿಸಧೇ ಇರುವುದು,ಮತ್ತು ಹೊಸ ಗಿಡಗಳನ್ನು ನೆಡದೇ ಇರುವುದು .ಮತ್ತು ದಿನ ನಿತ್ಯ ಮನೆಯ ತ್ಯಾಜ್ಯವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆಯಾ ಊರಿನ ನಗರಸಭೆ,ಪುರಸಭೆಯವರು ಏರ್ಪಾಡುಮಾಡಿದ್ದಾರೆ.
ಅಂದರೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ಪರಿಸರ ನೈರ್ಮಲ್ಯ ಕೆಡಬಾರದೆಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಪರಿಸರ ನಿರ್ಮಲವಾಗಿತ್ತೆಂದರೆ,ಒಳ್ಳೆಯ ಗಾಳಿ ಸಿಗುತ್ತದೆ.ಇದರಿಂದ ಆರೋಗ್ಯ ಸುಧಾರಣೆಗೂ ಅನುಕೂಲವಾಗುತ್ತದೆ.ಒಳ್ಳೆಯ ಗಾಳಿ ಸೇವನೆ,ಒಳ್ಳೆಯ ಆರೋಗ್ಯಕ್ಕೆ ಕಾರಣವಾಗುತ್ತದೆ.
ವಾಹನಗಳಿಂದಲೂ ಪರಿಸರ ನೈರ್ಮಲ್ಯ ಕೆಡಲು ಕಾರಣವಾಗುತ್ತದೆ.
Klive Special Article ಇನ್ನು ನಾವಾಡುವ ಮಾತು ಇದರಿಂದ ಪರಿಸರಕ್ಕಿಂತ
ಸಂಬಂಧಗಳು ಹಾಳಾಗುವ ಸಾಧ್ಯತೆ ಇದೆ.ಆದ್ದರಿಂದ
ಪರಿಸರದ ನೈರ್ಮಲ್ಯ ಕೆಡದಂತೆ ನೋಡಿಕೊಳ್ಳುವುದು
ಎಲ್ಲರ ಜವಾಬ್ದಾರಿಯಾಗಿರುತ್ತೆ.ಮತ್ತು ಒಳ್ಳೆಯ ಮಾತುಗಳಿಂದ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಪಡೋಣ.
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
Klive Special Article ಪರಿಸರ ದಿನ: ನಮ್ಮೊಳಗೇ ಹಲವು ಬದಲಾವಣೆ ಬೇಕು. ಲೇಖನ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
Date:
