Monday, February 2, 2026
Monday, February 2, 2026

ಪ್ರೊ ಕಬಡ್ಡಿ ಲೀಗ್ ಸ್ಟೀಲರ್ಸ್-ಯೋಧಾ ಜಯಭೇರಿ

Date:

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಶುಕ್ರವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಸ್ಟೀಲರ್ಸ್ ವಿರುದ್ಧ ಡೆಲ್ಲಿ ಗೆ ಸತತ ಸೋಲು
ಹರಿಯಾಣ ಸ್ಟಿಲರ್ಸ್(36) ಮತ್ತು ದಬಾಂಗ್ ಡೆಲ್ಲಿ(33) ತಂಡಗಳ ನಡುವೆ ಪಂದ್ಯ ನಡೆಯಿತು. ಹರಿಯಾಣ ತಂಡವು ದಬಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮೊದಲಾರ್ಧದಲ್ಲೇ ಹರಿಯಾಣ 19-11 ರಿಂದ ಮುಂದಿತ್ತು ಅದೇ ಲಯವನ್ನು ಮುಂದುವರೆಸಿಕೊಂಡು ಪಂದ್ಯವನ್ನು ಮುನ್ನಡೆಸಿತು.
ಹರಿಯಾಣ ಪರ ವಿಕಾಸ್ 9 ಟಚ್ ಪಾಯಿಂಟ್ಸ್ ಮತ್ತು 4 ಬೋನಸ್ ಪಾಯಿಂಟ್ಸ್ ಸೇರಿ ಒಟ್ಟು 13 ರೇಡಿಂಗ್ ಪಾಯಿಂಟ್ಸ್ ತಂಡಕ್ಕೆ ಸೇರಿಸಿದರು.ಹಾಗೆಯೇ ವಿನಯ್ 7 ಪಾಯಿಂಟ್ಸ್ ಮತ್ತು ಆಶಿಶ್ 4 ಪಾಯಿಂಟ್ಸ್ ಗಳಿಸಿ ತಂಡಕ್ಕೆ ನೀಡಿದರು.
ಇದರಿಂದಾಗಿ ಹರಿಯಾಣ ಸ್ಟೀಲರ್ಸ್ ತಂಡವು ಸತತ 5 ನೇ ಬಾರಿ ಜಯ ಸಾಧಿಸಿದೆ.

ಯೋಧಾ ಗೆ ಮಣಿದ ವಾರಿಯರ್ಸ್
ಯು.ಪಿ ಯೋಧಾ(40) ಮತ್ತು ಬೆಂಗಾಲ್ ವಾರಿಯರ್ಸ್ (36) ತಂಡಗಳ ನಡುವೆ ಪಂದ್ಯ ನಡೆಯಿತು.ವಾರಿಯರ್ಸ್ ವಿರುದ್ಧ ಯೋಧಾ ರೋಚಕ ಜಯ ಸಾಧಿಸಿದೆ.
ಯೋಧಾ ತಂಡದ ರೇಡರ್ ಗಳಾದ ಪ್ರದೀಪ್ ನರ್ವಾಲ್ 9 ಪಾಯಿಂಟ್ಸ್ ಮತ್ತು ಸುರೇಂದರ್ ಗಿಲ್ 9 ಪಾಯಿಂಟ್ಸ್ ಗಳನ್ನ ಕಲೆಹಾಕಿ ಹರಿಯಾಣ ತಂಡವು 40-36 ರ 4 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್
ಸಮಯ:7.30
೨. ಯು.ಮುಂಬಾ ಮತ್ತು ತೆಲುಗು ಟೈಟನ್ಸ್
ಸಮಯ:8.30
೩. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್
ಸಮಯ:9.30

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...