B.Y. Raghavendra ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರೊಂದಿಗೆ ಮಾನ್ಯ ಪ್ರಧಾನಿಯವರ 111ನೇ “ಮನ್ ಕಿ ಬಾತ್” ವೀಕ್ಷಿಸಿದರು.
ದೇಶದ ಜನಸಾಮಾನ್ಯರ ಸಕಾರಾತ್ಮಕ ಚಿಂತನೆಗಳು, ಪ್ರೇರಣಾದಾಯಿ ಸಾಧನೆಗಳು ಹಾಗೂ ರಾಷ್ಟ್ರದ ಪ್ರಗತಿಯ ವಿವಿಧ ಆಯಾಮಗಳನ್ನು ದೇಶದಾದ್ಯಂತ ಹಂಚಿಕೊಳ್ಳುವ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಸರಣಿ ‘ಮನ್ ಕಿ ಬಾತ್’ (Mann Ki Baat) ಕಾರ್ಯಕ್ರಮದ 111ನೇ ಸಂಚಿಕೆ ಅಪಾರ ಚಿಂತನೆಗೆ ಒಳಮಾಡಿತು.
ಇಂದು ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ಬೂತ್ ಸಂಖ್ಯೆ 03 ರಲ್ಲಿ ಸ್ಥಳೀಯ ಜನಬಾಂಧವರೊಂದಿಗೆ
ಸಂಸದ ರಾಘವೇಂದ್ರ
ಮನ್ ಕಿ ಬಾತ್ ವಿಚಾರವನ್ನ ಹಂಚಿಕೊಂಡರು.
ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮಾನ್ಯ ಪ್ರಧಾನಿಯವರು ದೇಶದ ವಿವಿಧ ಭಾಗಗಳಲ್ಲಿ ಜಾಗೃತಿ ಮತ್ತು ಪ್ರೇರಣೆ ಮೂಡಿಸುತ್ತಿರುವ ತಳಮಟ್ಟದ ಸಾಧಕರ ಕಥೆಗಳನ್ನು ಹಾಗೂ ಸಾರ್ವಜನಿಕ ಸಹಭಾಗಿತ್ವದ ಮೂಲಕ ದೇಶ ಕಟ್ಟುವ ಮಹತ್ವದ ವಿಚಾರಗಳನ್ನು ನಮ್ಮ ಮುಂದೆ ಹಂಚಿಕೊಂಡರು. ಇಂತಹ ರಾಷ್ಟ್ರಚಿಂತನೆಗಳು ನಮ್ಮ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ಗ್ರಾಮಸ್ಥರಿಗೂ ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಕೆ.ಎಸ್. ಗುರುಮೂರ್ತಿ, ಶ್ರೀ ವಸಂತ್ ಗೌಡ್ರು, ಶ್ರೀ ನಾಗಪ್ಪ, ಶ್ರೀ ಕೃಷ್ಣ ನಾಯ್ಕ್, ಶ್ರೀ ಸುಧೀರ್, ಶ್ರೀ ಬೆಣ್ಣೆ ಪ್ರವೀಣ್ ಹಾಗೂ ಸ್ಥಳೀಯ ಬೂತ್ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ್ , ಪಕ್ಷದ ಮುಖಂಡರು ಮತ್ತು ಗ್ರಾಮದ ಹಿರಿಯರು, ಸಾರ್ವಜನಿಕ ಬಂಧುಗಳು ನನ್ನೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿದರು.
