Monday, June 1, 2026
Monday, June 1, 2026

B.Y. Raghavendra ದೇಶದ ತಳಮಟ್ಟದ ಸಾಧಕರ ಯಶಸ್ಸಿನ ಕತೆ ತಿಳಿಸುವ ಪ್ರಧಾನಿ ಮೋದಿ ಅವರ “ಮನ್ ಕಿ ಬಾತ್”- ಬಿ.ವೈ.ರಾಘವೇಂದ್ರ

Date:

B.Y. Raghavendra ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರೊಂದಿಗೆ ಮಾನ್ಯ ಪ್ರಧಾನಿಯವರ 111ನೇ “ಮನ್ ಕಿ ಬಾತ್” ವೀಕ್ಷಿಸಿದರು.

ದೇಶದ ಜನಸಾಮಾನ್ಯರ ಸಕಾರಾತ್ಮಕ ಚಿಂತನೆಗಳು, ಪ್ರೇರಣಾದಾಯಿ ಸಾಧನೆಗಳು ಹಾಗೂ ರಾಷ್ಟ್ರದ ಪ್ರಗತಿಯ ವಿವಿಧ ಆಯಾಮಗಳನ್ನು ದೇಶದಾದ್ಯಂತ ಹಂಚಿಕೊಳ್ಳುವ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಸರಣಿ ‘ಮನ್ ಕಿ ಬಾತ್’ (Mann Ki Baat) ಕಾರ್ಯಕ್ರಮದ 111ನೇ ಸಂಚಿಕೆ ಅಪಾರ ಚಿಂತನೆಗೆ ಒಳಮಾಡಿತು.

ಇಂದು ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ಬೂತ್ ಸಂಖ್ಯೆ 03 ರಲ್ಲಿ ಸ್ಥಳೀಯ ಜನಬಾಂಧವರೊಂದಿಗೆ
ಸಂಸದ ರಾಘವೇಂದ್ರ
ಮನ್ ಕಿ ಬಾತ್ ವಿಚಾರವನ್ನ ಹಂಚಿಕೊಂಡರು.

ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮಾನ್ಯ ಪ್ರಧಾನಿಯವರು ದೇಶದ ವಿವಿಧ ಭಾಗಗಳಲ್ಲಿ ಜಾಗೃತಿ ಮತ್ತು ಪ್ರೇರಣೆ ಮೂಡಿಸುತ್ತಿರುವ ತಳಮಟ್ಟದ ಸಾಧಕರ ಕಥೆಗಳನ್ನು ಹಾಗೂ ಸಾರ್ವಜನಿಕ ಸಹಭಾಗಿತ್ವದ ಮೂಲಕ ದೇಶ ಕಟ್ಟುವ ಮಹತ್ವದ ವಿಚಾರಗಳನ್ನು ನಮ್ಮ ಮುಂದೆ ಹಂಚಿಕೊಂಡರು. ಇಂತಹ ರಾಷ್ಟ್ರಚಿಂತನೆಗಳು ನಮ್ಮ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ಗ್ರಾಮಸ್ಥರಿಗೂ ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಕೆ.ಎಸ್. ಗುರುಮೂರ್ತಿ, ಶ್ರೀ ವಸಂತ್ ಗೌಡ್ರು, ಶ್ರೀ ನಾಗಪ್ಪ, ಶ್ರೀ ಕೃಷ್ಣ ನಾಯ್ಕ್, ಶ್ರೀ ಸುಧೀರ್, ಶ್ರೀ ಬೆಣ್ಣೆ ಪ್ರವೀಣ್ ಹಾಗೂ ಸ್ಥಳೀಯ ಬೂತ್ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ್ , ಪಕ್ಷದ ಮುಖಂಡರು ಮತ್ತು ಗ್ರಾಮದ ಹಿರಿಯರು, ಸಾರ್ವಜನಿಕ ಬಂಧುಗಳು ನನ್ನೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಅನ್ನಸಂತರ್ಪಣಾ ಸೇವೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಧಿಕ ಮಾಸದ ಪವಿತ್ರ ಸಂದರ್ಭದಲ್ಲಿ, ಇಂದುಸಂಸದ ಬಿ.ವೈ.ರಾಘವೇಂದ್ರ ಅವರು...

Klive Special Article ಭಕ್ತಿಭಾವಗಳಿಂದ ಜಗದ್ಗುರುಗಳನ್ನ ಬೀಳ್ಕೊಟ್ಟ ನೇಪಾಳ ಭಕ್ತವೃಂದ

ವಿಶೇಷ ವರದಿ: ಪ್ರಭಾಕರ ಕಾರಂತ. Klive Special Article ಜಗದ್ಗುರು ಶ್ರೀ...

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...