Breaking News ಕ್ರಿಕೆಟ್ ಆಟ ಆಡುವಾಗಲೇ ರಣಜಿ ಕ್ರಿಕೆಟ್ ನ ಮಾಜಿ ಆಟಗಾರ, ಕರ್ನಾಟಕ ಬ್ಯಾಂಕ್ ನ ಉದ್ಯೋಗಿ, ಉಪ್ಪಾರ ಸಮಾಜದ ಯುವಕ ಎಸ್. ಎಲ್. ಅಕ್ಷಯ್ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. ಅಕ್ಷಯ್ ರವರು ಇಂದು ಬೆಂಗಳೂರು ನ SLR ಗ್ರೌಂಡ್ ನಲ್ಲಿ 3ನೇ ವಿಭಾಗದ ಪಂದ್ಯ ಆಡುವ ಸಮಯ ದಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.
Breaking News ಅಕ್ಷಯ್ ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದರು. ಅಕ್ಷಯ್ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ನ ಮಾಜಿ ಅಧ್ಯಕ್ಷರಾಗಿದ್ದ ಪುಟ್ಟಪ್ಪನವರ ಮೊಮ್ಮಗ. ಇವರ ಅಂತ್ಯಕ್ರಿಯೆ ನಾಳೆ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ಅಕಾಡೆಮಿ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿ , ಗುರುಪ್ರಸಾದ್, ಕಾರ್ತಿಕ್ , ಮಂಜುನಾಥ್, ನವೀನ್, ಸಂಜು, ಭರತ್, ಶಿವಮೊಗ್ಗ ಜಿಲ್ಲಾಧ್ಯಕ್ಷರು ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಇವರುಗಳು ಸಂತಾಪ ಸೂಚಿಸುತ್ತಿದ್ದಾರೆ.
