ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದಲ್ಲಿ ಹಲವು ಕಡೆಗಳಲ್ಲಿ ಅವಘಡ ಸಂಭವಿಸಿದೆ.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ.
ಗ್ರಾಮಾಂತರ ಭಾಗವಾದ ಮತ್ತೂರು, ಸೋಗಾನೆ, ಮಂಡೇನಕೊಪ್ಪ ಕಾಚಿನಕಟ್ಟೆ ಗ ಸಾಲು ಸಾಲು ಅಡಿಕೆ ಮರ ತೆಂಗಿನ ಮರಗಳು ನೆಲಕಚ್ಚಿವೆ.
ಸೊಗಾನೆಯಲ್ಲಿ ಹಲವು ಮನೆಗಳಿಗೆ ಹಾನಿ ಉಂಟಾಗಿದೆ.
ಮಳೆ ಗಾಳಿಯಿಂದಾಗಿ ಮನೆಗಳಿಗೆ ಹಾಕಿದ್ದ ಶೀಟ್ ಗಳು ಹಾರಿ ಹೋಗಿವೆ.
ಅಡಿಕೆ ಸೇರಿದಂತೆ ಮಾವು, ತೆಂಗಿನ ಮರಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.
